Monday, June 17, 2024

ಸತ್ಯ | ನ್ಯಾಯ |ಧರ್ಮ

ಹಿಂದೂ ಜಾಗರಣ ವೇದಿಕೆ ಮನವಿಗೆ ಸ್ಪಂದಿಸಿ ಏಸು ಪ್ರತಿಮೆಯ ಆವರಣ ಗೋಡೆ ತೆರವು

ದಕ್ಷಿಣ ಕನ್ನಡ: ಬಂಟ್ವಾಳ ತಾಲ್ಲೂಕಿನ ಅಲ್ಲಿಪಾದೆ ಎಂಬ ಗ್ರಾಮದ ಸರ್ಕಾರಿ ಜಮೀನಿನಲ್ಲಿ ಏಸುವಿನ ಪ್ರತಿಮೆ ಮತ್ತು ಅದಕ್ಕೆ ಆವರಣ ಗೋಡೆಯೊಂದನ್ನು ನಿರ್ಮಿಸಿದ್ದು, ಈ ವಿರುದ್ಧ ಹಿಂದೂ ಜಾಗರಣ ವೇದಿಕೆಗಳು ಪಂಚಾಯಿತಿ ಮನವಿ ಸಲ್ಲಿಸಿ ಗೋಡೆಯನ್ನು ತೆರವುಗೊಳಿಸಿದ್ದಾರೆ.

ತಾಲ್ಲೂಕಿನ ಸರಪಾಡಿ ಸಮೀಪದ ಅಲ್ಲಿಪಾದೆಯಲ್ಲಿ ಎಂಬ ಗ್ರಾಮದಲ್ಲಿ ಸಂತ ಜೋನ್‌ ಚರ್ಚ್‌ ನ ಪಕ್ಕದಲ್ಲೇ ಇರುವ ಸರ್ಕಾರಿ ಜಮೀನಿನಲ್ಲಿ ಏಸು ಪ್ರತಿಮೆ ಮತ್ತುಅದಕ್ಕೊಂದು ಆವರಣ ಗೋಡೆಯೊಂದನ್ನು ಕಟ್ಟಿದ್ದರು. ಈ ವಿರುದ್ಧ ಕಿಡಿಕಾರಿರುವ ಹಿಂದೂ ಜಾಗರಣ ವೇದಿಕೆ, ಈ ರೀತಿ  ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣ ಮಾಡಿ, ಸುತ್ತ ಗೋಡೆ ಕಟ್ಟಿರುವುದು, ಸರ್ಕಾರೊ ಜಾಗವನ್ನು ಕಬಳಿಸಿರುವ ಹುನ್ನಾರ ಎಂದು ಆರೋಪಿಸಿ, ನಾವೂರ, ಅಲ್ಲಿಪಾದೆ ಪಂಚಾಯತ್‌ ಹಾಗೂ ದಂಡಧಿಕಾರಿಗಳಿಗೆ ಅದನ್ನು ತೆರಳುಗೊಳಿಸುವಂತೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿತ್ತು.

ಈ ಹಿನ್ನೆಲೆಯಲ್ಲಿ ಬಂಟ್ವಾಳದಲ್ಲಿ ಪತ್ರಿಕಾ ಗೋಷ್ಠಿ ಕರೆದು ಒಂದು ವಾರದೊಳಗೆ ಗೋಡೆಯನ್ನು ತೆರವುಗೊಳಿಸುವಂತೆ ಶುಕ್ರವಾರದಂದು ಗಡುವು ನೀಡಿತ್ತು. ಇದೇ ಬೆನ್ನಲ್ಲೇ, ಇಂದು ತಾಲ್ಲೂಕು ಆಡಳಿತ ಮಂಡಳಿಯವರು ಆಗಮಿಸಿ ಆವರಣದ ಗೋಡೆಯನ್ನು ತೆರವುಗೊಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು