ಹಿರಿಯೂರು : ಒಳ ಮೀಸಲಾತಿ ಹಾಗೂ ಸರ್ಕಾರದ ಬ್ಯಾಕ್ಲಾಗ್ ಹುದ್ದೆಗಳನ್ನು ಒಳ ಮೀಸಲಾತಿ ಜಾರಿ ಮಾಡುವವರೆಗೂ ತುಂಬಬಾರದು ಎಂದು ಆಗ್ರಹಿಸಿ ಆಡಳಿತ ಕಾಂಗ್ರೆಸ್ ಸರ್ಕಾರಕ್ಕೆ ಹರಿಹರದ ಪ್ರೊಫೆಸರ್ ಬಿಕೆ ಕೃಷ್ಣಪ್ಪ ಅವರ ಮೈತ್ರಿ ವನದಿಂದ ಬೆಂಗಳೂರಿನ ರಾಜಭವನಕ್ಕೆ ಕ್ರಾಂತಿಕಾರಿ ಪಾದಯಾತ್ರೆಯನ್ನ ಹಮ್ಮಿಕೊಂಡಿದ್ದು ಈ ಕ್ರಾಂತಿಕಾರಿ ಪಾದಯಾತ್ರೆಯ ನೇತೃತ್ವವನ್ನು ದಲಿತ ಸಮುದಾಯದ ಮುಖಂಡರಾದ ಬಿ ಆರ್ ಭಾಸ್ಕರ್ ಪ್ರಸಾದ್ ನೆಲಮಂಗಲ ಇವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಕಡೆ ಎಚ್ಚರಿಕೆಯನ್ನು ಕೊಡುವ ಸಲುವಾಗಿ ಒಳ ಮೀಸಲಾತಿ ಜಾರಿ ಮಾಡಲು ಆಗ್ರಹ ಮಾಡಿದೆ .
ಈ ಪಾದಯಾತ್ರೆ ಹರಿಹರದಿಂದ ಸಾಗಿ ಹಿರಿಯೂರು ದಾಟಿ 9ನೇ ದಿನ ಜಾಗೋಂಡನಹಳ್ಳಿಯಿಂದ ಶುರುವಾಯಿತು , ಈ ಪಾದಯಾತ್ರೆಯಲ್ಲಿ ನೂರಾರು ಜನ ಭಾಗಿಯಾಗಿ ಸಾಗುತ್ತಿದ್ದರು ಅದರಲ್ಲಿ ಗುಡೆಮಾರನಹಳ್ಳಿ ನಾಗರಾಜ್ ತಿಪ್ಪೇಶ ಚಿಕ್ಕಮಗಳೂರು ಬಸವರಾಜ್ ಹೊಸಮನಿ ಗದಗ ಹಾಗೂ ಹನುಮೇಶ ಮರಿಯಮ್ಮನಹಳ್ಳಿ ಇವರು ಪಾಲಯಾತ್ರೆಯಲ್ಲಿ ಇದ್ದಕ್ಕಿದ್ದಂತೆ ಆಯಾಸಗೊಂಡು ಕೆಲವೇ ಕ್ಷಣಗಳಲ್ಲಿ ಅವರ ಆರೋಗ್ಯ ಏರುಪೇರಾಯಿತು ಇದನ್ನರಿತು ನಮ್ಮ ಜೊತೆಯಲ್ಲಿದ್ದ ಆಂಬುಲೆನ್ಸ್ ನಲ್ಲಿ ಇವರನ್ನ ಹತ್ತಿಸಿಕೊಂಡು ಪ್ರಥಮ ಚಿಕಿತ್ಸೆಯ ಮೂಲಕ ಶಿರಾ ಸರ್ಕಾರಿ ಆಸ್ಪತ್ರೆಗೆ ಬಂದು ಅಡ್ಮಿಟ್ ಮಾಡಿಸಿದೆವು , ಅವರ ಆರೋಗ್ಯವನ್ನು ಚೆಕ್ ಮಾಡಿದಾಗ ಗುಡೆಮಾರನಹಳ್ಳಿ ನಾಗರಾಜ್ ಇವರು ತುಂಬಾ ನಿಶಕ್ತರಾಗಿ ಬಳಲುತ್ತಿದ್ದರು ಹಾಗೂ ತಿಪ್ಪೇಶ ಇವರಿಗೆ ಹೈಬಿಪಿಯಾಗಿತ್ತು ಹಾಗೂ ಬಸವರಾಜ್ ಹೊಸಮನಿ ಇವರಿಗೆ ಹೊಟ್ಟೆ ನೋವು ಮತ್ತು ಮೊಣಕಾಲು ನೋವಿನಿಂದ ಬಳಲುತ್ತಿದ್ದರು ಹಾಗೂ ಹನುಮೇಶ್ ಮರಿಯಮ್ಮನಹಳ್ಳಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು ವೈದ್ಯರು ಸೂಕ್ತ ಚಿಕಿತ್ಸೆ ನೀಡತ್ತಿರುವುದಾಗಿ ವರದಿಯಾಗಿದೆ.
ಚಿಕತ್ಸೆ ಪಡೆಯುತ್ತಿರುರ ಹೋರಾಟಗಾರರನ್ನು ಹೊರತುಪಡಿಸಿ ಉಳಿದ ಹೋರಾಟಗಾರರು ಪಾದಯಾತ್ರೆಯನ್ನು ಮುಂದುವರೆಸಿದ್ದಾರೆ ಎಂದು ಹೋರಾಟ ಸಮಿತಿ ತಿಳಿಸಿದೆ.