Home ರಾಜಕೀಯ ನನ್ನ ಮಾತಲ್ಲಿ ತಪ್ಪು ಹುಡುಕುವುದೇ ಕೆಲವರ ಕೆಲಸ : ಡಿಕೆ ಶಿವಕುಮಾರ್

ನನ್ನ ಮಾತಲ್ಲಿ ತಪ್ಪು ಹುಡುಕುವುದೇ ಕೆಲವರ ಕೆಲಸ : ಡಿಕೆ ಶಿವಕುಮಾರ್

0

ಸದನದಲ್ಲಿ RSS ಗೀತೆ ಹಾಡಿದ ದಿನದಿಂದ ಡಿಕೆ ಶಿವಕುಮಾರ್ ಗೆ ಸಂಕಷ್ಟ ತಪ್ಪಿಲ್ಲದಂತಾಗಿದೆ. ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್ ನಾನು ಏನೇ ಮಾತನಾಡಿದರೂ ತಪ್ಪು ಹುಡುಕಿ ನನ್ನನ್ನು ತಪ್ಪಿತಸ್ಥನನ್ನಾಗಿ ಮಾಡಲಾಗುತ್ತಿದೆ. ಹೀಗಾಗಿ ಮಾತನಾಡದೇ ಇರುವುದಕ್ಕೆ ಲೇಸು ಎಂದು ತೀರ್ಮಾನಿಸಿದ್ದೇನೆ ಎಂದು ಡಿಕೆ ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ,ಕೆ.ಶಿವಕುಮಾರ್, ನಾನು ಸದನವಿರಲಿ ಎಲ್ಲಿಯೇ ಇರಲಿ ಏನೇ ಮಾತನಾಡಿದರೂ ಅದರಲ್ಲಿ ಕೇವಲ ತಪ್ಪು ಕಂಡು ಹಿಡಿಯುವುದೇ ಬೇರೆಯವರ ಕೆಲಸವಾಗಿದೆ ಎಂದು ಹೇಳಿದ್ದಾರೆ.

ರಾಜಕೀಯದವರಿರಬಹುದು, ಮಾಧ್ಯಮದವರಿರಬಹುದು, ಪ್ರಮೋದಾ ದೇವಿ ಆರು, ಸಂಸದ ಯಧುವೀರ್ ಅವರು, ವಿಧಾನಸಭೆ ಹೀಗೆ ಎಲ್ಲರೂ ನನ್ನ ಮಾತಿನಲ್ಲಿ ತಪ್ಪು ಹುಡುಕುವವರೇ. ಹೀಗಾಗಿ ನಾನು ಮಾತನಾಡದಿರುವುದೇ ಉತ್ತಮ ಎಂದು ಹೇಳಿದರು. ಪ್ರತಿಕ್ರಿಯೆ ನೀಡಲು ಬೇರೆ ನಾಯಕರಿದ್ದಾರೆ, ಪಕ್ಷದ ವಕ್ತಾರರಿದ್ದಾರೆ. ಅವರ ಬಳಿ ಕೇಳಿ ಎಂದು ಹೇಳಿದರು.

You cannot copy content of this page

Exit mobile version