ರಾಷ್ಟ್ರಕವಿ ಕುವೆಂಪು ಅವರ ‘ವಿಚಾರ ಕ್ರಾಂತಿಗೆ ಆಹ್ವಾನ’ ಮತ್ತು ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ ಎರಡೂ ಯುಗಪ್ರವರ್ತಕ ಭಾಷಣಗಳಿಗೆ 50 ವರ್ಷ ತುಂಬುತ್ತಿರುವ ನೆನಪಿನಲ್ಲಿ ಮತ್ತು ಮಂಡ್ಯ ಜಿಲ್ಲೆಗೆ 85ವರ್ಷ ತುಂಬುತ್ತಿರುವ ಹೊತ್ತಿನಲ್ಲಿ ಮಂಡ್ಯ ಜಿಲ್ಲೆ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಜಾಗೃತ ಕರ್ನಾಟಕದ ವತಿಯಿಂದ ಮಾ.13ರಂದು ಮಂಡ್ಯನಗರದ ರೈತ ಸಭಾಂಗಣದಲ್ಲಿ ‘ಮಂಡ್ಯದ ಅಸ್ಮಿತೆ ಮತ್ತು ಕುವೆಂಪು ಕ್ರಾಂತಿ ಕಹಳೆ-50 ಕಾರ್ಯಕ್ರಮ’ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಾಗೃತ ಕರ್ನಾಟಕ ಸಂಘಟನೆಯ ಮುಖಂಡ ಎನ್.ನಾಗೇಶ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10 ಗಂಟೆಗೆ ರಾಷ್ಟ್ರಧ್ವಜ, ನಾಡಧ್ವಜ, ಕುವೆಂಪು ನುಡಿಗಳ ಮೆರವಣಿಗೆ ನಡೆಯಲಿದೆ. ಬೆಳಿಗ್ಗೆ 11.30 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಸಾಹಿತಿ, ಚಿಂತಕ: ಬಂಜಗೆರೆ ಜಯಪ್ರಕಾಶ್ ಭಾಗವಹಿಸುವರು. ಪ್ರಧಾನ ಭಾಷಣಕಾರರಾಗಿ ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಸುಧೀರ್ ಕುಮಾರ್ ಮರೊಳ್ಳಿ ಪ್ರಧಾನ ಭಾಷಣ ಮಾಡುವರು ಎಂದರು.
ರಾಷ್ಟ್ರಧ್ವಜ, ನಾಡಧ್ವಜ, ಕುವೆಂಪು ನುಡಿಗಳ ಮೆರವಣಿಗೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೆ. ಮಾಯಿಗೌಡ, ಡಾ. ಸುಜಯ್ ಕುಮಾರ್ ಕೆ.ಬೋರಯ್ಯ, ಪ್ರೊ.ಚಂದ್ರಶೇಖರ್, ಸುನಂದಾ ಜಯರಾಂ ಎಂ.ವಿ.ಕೃಷ್ಣ, ಲಕ್ಷ್ಮಣ ಚೀರನಹಳ್ಳಿ ಭಾಗವಹಿಸುವರು.
ಕಾರ್ಯಕ್ರಮದ ನಿರ್ವಹಣೆಯನ್ನು ನಾಗಮಂಗಲ ರಮೇಶ್ ಗೌಡ ಮಾಡುವರು. ಚಾಮನಕೊಪ್ಪಲು ಗೋವಿಂದ ರಾಜು, ಚಿಣ್ಯ ಮಂಜುನಾಥ್, ಚನ್ನಾಪುರ ಮಂಜೇಶ್. ಡಾ.ಬಿ.ಸಿ.ಬಸವರಾಜು ಕುವೆಂಪು ಗೀತೆಗಳ ಗಾಯನ ಮಾಡುವರು. ಡಾ.ಬಿ.ಸಿ.ಬಸವರಾಜು ನಾಗಮಂಗಲ ಪ್ರಾಸ್ತಾವಿಕ ಭಾಷಣ ಮಾಡುವರು. , ಎನ್. ನಾಗೇಶ್ ಸ್ವಾಗತ ಭಾಷಣ ಮಾಡುವರು ಎಂದರು.
ಪ್ರತಿಸ್ಪಂದನೆಯಲ್ಲಿ ರಾಜೇಂದ್ರ ಪ್ರಸಾದ್, ಸಿ.ಕುಮಾರಿ, ಪೂರ್ಣಿಮಾ ಹಾಗೂ ತೇಜ ಯಾಲಕ್ಕಯ್ಯ ಭಾಗವಹಿಸುವರು.
ಕರ್ನಾಟಕ ರಾಜ್ಯ ರೈತಸಂಘ ಯುವ ನಾಯಕ ಮತ್ತು ಶಾಸಕ ದರ್ಶನ್ ಪುಟ್ಟಣ್ಣಯ್ಯ ಉಪಸ್ಥಿತರಿರುವರು. ಗುರುಪ್ರಸಾದ್ ಕೆರಗೋಡು ಅಧ್ಯಕ್ಷತೆ ವಹಿಸುವರು. ಅಂದು ನಮ್ಮೊಂದಿಗೆ ನಾ.ಸು.ನಾಗೇಶ್ ಚಿಂತಕರು, ಡಾ.ವಾಸು ಜಾಗೃತ ಕರ್ನಾಟಕ, ಬಡಗಲಪುರ ನಾಗೇಂದ್ರ, ಕೆಂಪೂಗೌಡ ರೈತ ಸಂಘ, ದೇವನೂರು ಮಹಾದೇವ, ಬಿ.ಟಿ.ವಿಶ್ವನಾಥ್ ವಕೀಲರು, ಕೃಷ್ಣೇಗೌಡ ಸಿಪಿಐಎಂ, ಅಪ್ರೋಜ್ ಪಾಷ, ನಾಗರೇವಕ್ಕ, ಮಂಜುನಾಥ್ ಕನ್ನಡ ಸೇನೆ, ಲಂಕೇಶ್ ನೆಲದನಿ ಬಳಗ ಹಾಗೂ ಕರುನಾಡ ಸೇವಕರು ಸಂಘಟನೆಯ ನಾಗಣ್ಣಗೌಡ, ಸಿದ್ದರಾಜು ಕರ್ನಾಟಕ ಜನಶಕ್ತಿ, ಇತಿಹಾಸಕಾರ ಮಹಮ್ಮದ್ ಕಲೀಂವುಲ್ಲಾ, ಮಹೇಶ್ ಚಂದ್ರಗುರು ವಿಕಸನ,ಶ್ರೀನಿವಾಸ್ ಎ.ಐ.ಎಲ್.ಯು ಹಾಗೂ ವಿಮೋಚನಾ ಜನಾರ್ಧನ್ ಭಾಗವಹಿಸುವರು ಎಂದರು.
ಗೋಷ್ಠಿಯಲ್ಲಿ ಕವಿ ರಾಜೇಂದ್ರ ಪ್ರಸಾದ್, ಕರ್ನಾಟಕ ಜನಶಕ್ತಿಯ ಪೂರ್ಣಿಮ, ಸಿದ್ದರಾಜು ಹಾಗೂ ರಾಹುಲ್ ಉಪಸ್ಥಿತರಿದ್ದರು.