Home ರಾಜಕೀಯ ಬಿಜೆಪಿಯಿಂದ ಕಾಂಗ್ರೆಸ್‌ ಸೇರಿದ ಜೈ ನಾರಾಯಣ್‌ ವ್ಯಾಸ್‌

ಬಿಜೆಪಿಯಿಂದ ಕಾಂಗ್ರೆಸ್‌ ಸೇರಿದ ಜೈ ನಾರಾಯಣ್‌ ವ್ಯಾಸ್‌

0

ಗುಜರಾತ್: ಈ ಮೊದಲು ಗುಜರಾತ್‌ನ ಬಿಜೆಪಿ ಸಚಿವರಾಗಿದ್ದ ಜೈ ನಾರಾಯಣ್‌ ವ್ಯಾಸ್‌ ಅವರು ಸೋಮವಾರದಂದು ಕಾಂಗ್ರೆಸ್‌ ಪಕ್ಷಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಜೈ ನಾರಾಯಣ ವ್ಯಾಸ್‌ ಅವರು 2007ರಿಂದ 2012ರವರೆಗೆ ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದು,  ಆ ನಂತರ ಬಿಜೆಪಿ ಪಕ್ಷದಲ್ಲೇ ಮುಂದುವರೆದಿದ್ದ ಇವರು ನವೆಂಬರ್‌ 5ರಂದು ಭಾರತೀಯ ಜನತಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಇಂದು ಕಾಂಗ್ರೆಸ್‌ ಪಕ್ಷಕ್ಕೆ ಸೇರಿಕೊಂಡಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆಯವರು ಜೈ ನಾರಾಯಣ್‌ ವ್ಯಾಸ್‌ ಅವರನ್ನು ಇಂದು ತಮ್ಮ ಪಕ್ಷಕ್ಕೆ ಸೇರ್ಪಡೆ ಗೊಳಿಸಿದ್ದು, ರಾಜಸ್ಥಾನದ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್‌ ಹಿರಿಯ ನಾಯಕ ಅಶೋಕ್‌ ಗೆಹ್ಲೋತ್‌ ಕೂಡ ವ್ಯಾಸ್‌ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ್ದಾರೆ.

You cannot copy content of this page

Exit mobile version