Thursday, June 19, 2025

ಸತ್ಯ | ನ್ಯಾಯ |ಧರ್ಮ

ಪತ್ರಕರ್ತ ಸ್ವಾಮಿ ಮುತ್ತೂರ್ ನಿಧನ

ಮೈಸೂರು: ಪತ್ರಕರ್ತ ಸ್ವಾಮಿ ಮುತ್ತೂರ್ ಬಹು ಅಂಗಾಂಗ ವೈಫಲ್ಯದಿಂದಾಗಿ ಇಲ್ಲಿನ ಆಸ್ಪತ್ರೆಯೊಂದರಲ್ಲಿ ಮಂಗಳವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಲಿವರ್, ಕಿಡ್ನಿ ಸಂಬಂಧಿತ ಖಾಯಿಲೆಗಳಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಮೂಲತಃ ಪಿರಿಯಾಪಟ್ಟಣದವರಾದ ಸ್ವಾಮಿ ಮುತ್ತೂರ್ ಟಿವಿ9, ಜನಶ್ರೀ, ಸುವರ್ಣ ನ್ಯೂಸ್, ಸಮಯ ಟಿವಿ‌ ಸೇರಿದಂತೆ ಹಲವು ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಕ್ರೈಂ ಕಾರ್ಯಕ್ರಮಗಳಿಗೆ ಅವರು ನೀಡುತ್ತಿದ್ದ ಹಿನ್ನೆಲೆ ಧ್ವನಿ ಜನಪ್ರಿಯವಾಗಿತ್ತು.

ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಇತ್ತೀಚಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಕೋಮಾ ಹಂತ ತಲುಪಿದ್ದರು. ಕೋಮಾದಿಂದ ಹೊರಬಂದರೂ ಅವರ ಆರೋಗ್ಯ ಸುಧಾರಿಸದೆ ಇಂದು ಮೃತಪಟ್ಟಿದ್ದಾರೆ.

ಸ್ವಾಮಿ ಮುತ್ತೂರು ಸಾವಿಗೆ ಚಿತ್ರ ನಿರ್ದೇಶಕ ಬಿ.ಸುರೇಶ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page