Friday, June 20, 2025

ಸತ್ಯ | ನ್ಯಾಯ |ಧರ್ಮ

ಕನ್ನಡ ಮತ್ತು ಸರ್ಕಾರಿ ಶಾಲೆಗಳ ಪರಸ್ಥಿತಿ ಎತ್ತ ಸಾಗುತ್ತಿದೆ, ಸರ್ಕಾರಗಳು ಜವಾಬ್ದಾರಿಗಳನ್ನು ಮರೆತಿದ್ದಾರೆ – ಆರ್.ಪಿ ವೆಂಕಟೇಶ್‌ ಮೂರ್ತಿ

ಹಾಸನ ವಿ.ವಿಯಲ್ಲಿ ವಿಶ್ವ ಸಮಾಜ ಕಾರ್ಯ ದಿನ ಆಚರಣೆ

ಹಾಸನ : ಹಾಸನದ ವಿವಿಯ ಸಮಾಜಕಾರ್ಯ ವಿಭಾಗದಲ್ಲಿ ಇಂದು ಸಮಾಜ ಕಾರ್ಯ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮ ಉ‍ಧ್ಘಟಿಸಿ ಮಾತನಾಡಿದ ಹಿರಿಯ ಪತ್ರಕರ್ತರ ವಿಶ್ವಪಥ ಟಿ.ವಿ ಯ ಸಂಪಾದಕರು ಆದ ಆರ್.ಪಿ ವೆಂಕಟೇಶ್‌ ಮೂರ್ತಿಯರು ಸಮಾಜ ಎತ್ತ ಸಾಗುತ್ತಿದೆ ತಿಳಿಯುತ್ತಿಲ್ಲ ಈಗಾಗಲೆ ಯುವ ಜನತೆ ಸಮಾಜದ ಬಗ್ಗೆ ಸಾಮಾಜಿಕ ಕಳಕಳಿಯನ್ನು ಮರೆತಂತಿದೆ ಸಮಾಜ ಕಾರ್ಯ ವಿಭಾಗ ಇಡೀ ಸಮಾಜದ ಕೈಗನ್ನಿಡಿಯಾಗಿದೆ, ಸಮಾಜದ ಬೆಳವಣಿಗೆಗೆ ಯಾವ ಕ್ರಮದಲ್ಲಿ ಮತ್ತು ಕನ್ನಡ ಶಾಲೆಗಳು ಸರ್ಕಾರಿ ಶಾಲೆಗಳ ಪರಸ್ಥಿತಿ ಎತ್ತ ಸಾಗುತ್ತಿದೆ ಸರ್ಕಾರಗಳು ಸಾಮಾಜಿಕ ಜವಾಬ್ದಾರಿಗಳನ್ನು ಮರೆತಂತಿದೆ. ಸರ್ಕಾರಿ ಶಾಲೆಗಳನ್ನು ಇಂದು ಸಾಮಾನ್ಯ ಜನರು ದತ್ತು ಪಡೆದು ನಡೆಸುವ ಸಂಧರ್ಭ ಎದುರಾಗಿರುವುದು ಅವಮಾನಕರ ಸಂಗತಿ. ಶಿಕ್ಷಣ ಉಚಿತವಾಗಿ ಎಲ್ಲರಿಗು ಸಿಗಬೇಕು ಆದರೆ ಸರ್ಕಾರಿ ಶಾಲೆಗಳನ್ನು ಅಭಿವೃದ್ದಿ ಪಡಿಸಿ ಸಮಾಜವನ್ನು ಕಟ್ಟುವ ಕೆಲಸ ಸರ್ಕಾರ ಮಾಡಬೇಕು ಇಲ್ಲವಾದರೆ ಮುಂದೆ ದೊಡ್ಡ ಸಮಸ್ಯೆ ಎದರಾಗುವ ಸಾದ್ಯತೆ ಹೆಚ್ಚಾಗಿದೆ ಎಂದರು. ಹಾಗೆಯೆ ಸರ್ಕಾರ ಕೆಲಸ ಮಾಡಿದೆ ಇದ್ದರೆ ನಾವು ಸುಮ್ಮನೆ ಕೂರದೆ ಸಾಮಾಜಿಕ ಕಳಕಳಿ ಉಳ್ಳ ಎಲ್ಲರು ಒಗ್ಗಟ್ಟಾಗಿ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಶಾಲೆಗಳನ್ನು ಅಭಿವೃದ್ಧಿ ಪಡಿಸುವ ಕೆಲಸಗಳನ್ನು ಮಾಡಬೇಕು. ಸಮಾಜ ಕಾರ್ಯದ ಮುಖ್ಯಸ್ತರಾದ ಡಾ. ಎಸ್.ಜೆ ಮಹೇಶ್‌ ರವರು ಮಾತನಾಡುತ್ತಾ ಸಮಾಜ ಕಾರ್ಯ ವಿದ್ಯಾರ್ಥಿಗಳೆಲ್ಲ ಸೇರಿ ಸಮಾಜದ ಸಮಸ್ಯೆಗಳನ್ನು ಮಾಡಿ ಸಮಾಜದಲ್ಲಿ ಪರಿಹರಿಸುವಂತ ಕ್ರಮಗಳನ್ನ ಮಾಡಬೇಕಾಗಿದೆ ಸೋಶಿಯಲ್ ವರ್ಕ್ ಇದೆ ಆರ್ಟ್ ಆಫ್ ಸಮಾಜ ಕಾರ್ಯ ಎಂದರೆ ಸಮಾಜ ಕಾರ್ಯ ಎಂದರೆ ಜನರಿಂದ ಜನರಿಗೋಸ್ಕರ ಜನನಂದನೆ ಮಾಡಿಸುವ ಕಾರ್ಯವನ್ನ ಸಾಮಾಜಿಕ ಎಂದು ಕರೆಯುತ್ತೇವೆ ಸಮಾಜದ ಸಮಸ್ಯೆಗಳನ್ನ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಾ ಸರಕಾರದಿಂದ ಬರುವಂತಹ ಕಾರ್ಯಕ್ರಮಗಳೇನಿದೆ ಸಮಾಜದ ಕಟ್ಟ ಕಡೆಯ ಜನರಿಗೆ ತಲುಪಿಸುವ ಕಾರ್ಯಗಳನ್ನು ಮಾಡಬೇಕಾಗಿದೆ ಸಮಾನತೆಯನ್ನು ಸಾರುವಂತ ಒಂದು ದೇಶವನ್ನು ನಮ್ಮ ಸಮಾಜ ಕಾರ್ಯ ಇಟ್ಕೊಂಡಿದೆ ಎಲ್ಲರನ್ನೂ ಸಮಾನವಾಗಿ ನೋಡುವಂತ ಒಂದು ಕಾರ್ಯಕ್ರಮಗಳನ್ನ ಆಯೋಜನೆಗಳನ್ನು ಮಾಡಬೇಕಾಗಿದೆ ಎಂದರು ಕಾರ್ಯಕ್ರಮದಲ್ಲಿ ಡಾ. ಲೋಕೇಶ್‌ ಎಂ.ಯು, ಡಾ.ಪ್ರದೀಪ್‌, ಡಾ.ಫಟ್ವರ್ದನ್‌, ಡಾ.ವೇದ, ಶ್ರೀಮತಿ ಭಾನು ಇನ್ನಿತರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page