ನವದೆಹಲಿ: ಮುಂಬರುವ ವಿಧಾನಸಭಾ ಚುನಾವಣೆ ಮುಗಿದ ಕೂಡಲೇ ಆಮ್ ಆದ್ಮಿ ಪಕ್ಷ (ಎಎಪಿ) ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ಸೌಲಭ್ಯ ನೀಡುವುದಾಗಿ ಭರವಸೆ ನೀಡಿದೆ.
ಬುಧವಾರ ಪತ್ರಿಕಾಗೋಷ್ಠಿ ನಡೆಸಿರುವ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್, ‘60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ಸೌಲಭ್ಯ ಒದಗಿಸಲು ‘ಸಂಜೀವಿನಿ ಯೋಜನೆ’ಯನ್ನು ಘೋಷಣೆ ಮಾಡುತ್ತಿದ್ದೇವೆ. ದೆಹಲಿ ವಿಧಾನಸಭೆ ಚುನಾವಣೆ ಮುಗಿದ ಬಳಿಕ ಈ ಯೋಜನೆಯನ್ನು ಜಾರಿಗೆ ತರುತ್ತೇವೆ’ ಎಂದು ಘೋಷಿಸಿದರು.
ಈ ಹಿಂದೆ ದೆಹಲಿಯ ಕೊಂಡ್ಲಿ ವಿಧಾನಸಭಾ ಕ್ಷೇತ್ರದ ಆಟೋ ಚಾಲಕರೊಬ್ಬರ ಕುಟುಂಬ ಸದಸ್ಯರ ಜೊತೆ ಮಧ್ಯಾಹ್ನದ ಊಟ ಸವಿದು, ಆಟೊ ಡ್ರೈವರ್ಗಳಿಗೆ ₹10 ಲಕ್ಷದ ವಿಮೆ, ಅವರ ಹೆಣ್ಣುಮಕ್ಕಳ ಮದುವೆಗೆ ₹1 ಲಕ್ಷ ಸಹಾಯಧನ ನೀಡಲಾಗುವುದು. ಜೊತೆಗೆ ವರ್ಷಕ್ಕೆ ಎರಡು ಬಾರಿ ತಲಾ ₹2,500ನಂತೆ ಸಮವಸ್ತ್ರ ಭತ್ಯೆ , ‘PoochO’ಆ್ಯಪ್ ರೀಲಾಂಚ್ ಮತ್ತು ಮಕ್ಕಳಿಗೆ ಉಚಿತ ಕೋಚಿಂಗ್ ನೀಡುವ ಆಶ್ವಾಸನೆಯನ್ನು ಕೇಜ್ರಿವಾಲ್ ನೀಡಿದ್ದನ್ನು