Thursday, June 19, 2025

ಸತ್ಯ | ನ್ಯಾಯ |ಧರ್ಮ

ಕೇರಳದ ನರಬಲಿ ಪ್ರಕರಣ: ಅಕ್ಟೋಬರ್‌ 24 ರವರೆಗೆ ಕಸ್ಟಡಿಗೆ ಸೇರಿದ ಆರೋಪಿಗಳು  

ಕೇರಳ : ಕೇರಳದಲ್ಲಿ ಹೊರಬಂದಿದ್ದ ʼನರಬಲಿʼ ಪಡೆದ ಅರೋಪದಿಂದ ಬಂಧಿತವಾಗಿದ್ದ ಇಬ್ಬರು ದಂಪತಿಗಳು ಮತ್ತು ಶಫಿ ಎಂಬುವವನು ಸೇರಿ ಮೂವರನ್ನು ಅಕ್ಟೋಬರ್‌ 24 ರವರೆಗೆ 12 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಕಳುಹಿಸುವಂತೆ ಎರ್ನಾಕುಲಂ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಆದೇಶ ನೀಡಿದೆ.

ಕೇರಳದಲ್ಲಿ ದಂಪತಿಗಳು ತಮ್ಮ ಕುಟುಂಬದ ಸಂಪತ್ತು ಅಭಿವೃದ್ಧಿ ಮಾಡಿಕೊಳ್ಳಲು ʼನರಬಲಿʼ ನೀಡುವ ಧಾರ್ಮಿಕ ಕ್ರಿಯೆ ನಡೆಸಿರುವ ಘಟನೆ ರಾಜ್ಯದ ಪತ್ತನಂತಿಟ್ಟದ ಎಳಂತೂರು ಗ್ರಾಮದಲ್ಲಿ ನಡೆದಿತ್ತು. ಅಮಾಯಕ ಮಹಿಳೆಯರನ್ನು ವಂಚಿಸಿ ಬಲಿ ನೀಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ಇದೀಗ ಎರ್ನಾಕುಲಂ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ನರಬಲಿ ಪಡೆದ ಮೂರೂ ಜನರನ್ನು ಅಕ್ಟೋಬರ್‌ 24 ರವರೆಗೆ 12 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಕಳುಹಿಸಿದೆ.


Related Articles

ಇತ್ತೀಚಿನ ಸುದ್ದಿಗಳು

You cannot copy content of this page