ಕೇರಳ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಎಂಟನೇ ದಿನಕ್ಕೆ ಪಾದಾರ್ಪಣೆ ಮಾಡಿದ್ದು ಈ ಯಾತ್ರೆಯನ್ನು ಛತ್ತೀಸ್ಗಢದ ಸಿಎಂ ಭೂಪೇಶ್ ಬಘೇಲ್, ಪಕ್ಷದ ಸದಸ್ಯರು ಮತ್ತು ಕಾರ್ಯಕರ್ತರೊಂದಿಗೆ ಕೇರಳದ ಕೊಲ್ಲಂ ನಗರದಲ್ಲಿ ಮುಂದುವರೆಸಿದ್ದಾರೆ.
ಮೊದಲು ಕನ್ಯಾಕುಮಾರಿಯಲ್ಲಿ ಶುರುವಾದ ಭಾರತ್ ಜೋಡೋ ಯಾತ್ರೆ ನಂತರ ತಮಿಳುನಾಡು ತಲುಪಿತ್ತು. ರಾಹುಲ್ ಗಾಂಧಿ ಅವರ ಜೊತೆಗೆ ಹಲವು ಕಾಂಗ್ರೆಸ್ ಮುಖಂಡರು ಎಂಟನೇ ದಿನದ ಯಾತ್ರೆಯನ್ನು ಕೇರಳದ ಕೊಲ್ಲಂ ನಗರದಿಂದ ಆರಂಭ ಮಾಡಿದ್ದಾರೆ.