Home ಬೆಂಗಳೂರು ಕೇತಗಾನಹಳ್ಳಿ ಜಮೀನು ಸರ್ವೇ ರಾಜಕೀಯ ಸೇಡಿಗಾಗಿ ನಡೆಸಲಾಗುತ್ತಿದೆ: ಸಚಿವ ಕುಮಾರಸ್ವಾಮಿ

ಕೇತಗಾನಹಳ್ಳಿ ಜಮೀನು ಸರ್ವೇ ರಾಜಕೀಯ ಸೇಡಿಗಾಗಿ ನಡೆಸಲಾಗುತ್ತಿದೆ: ಸಚಿವ ಕುಮಾರಸ್ವಾಮಿ

0

ಕೇತಗಾನಹಳ್ಳಿ ಜಮೀನು ಸರ್ವೇ ರಾಜಕೀಯ ಸೇಡಿನ ಭಾಗ ಎಂದಿರುವ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ, ಇಷ್ಟು ದಿನ ಐಪಿಎಸ್‌ ಅಧಿಕಾರಿಗಳ ನೇತೃತ್ವದಲ್ಲಿ ಎಸ್‌ಐಟಿ ರಚನೆ ಮಾಡುತ್ತಿದ್ದರು. ಈಗ ಐಎಎಸ್‌ ಅಧಿಕಾರಿಗಳ ಎಸ್‌ಐಟಿಯನ್ನೂ ರಚನೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿ, ಆ ಭೂಮಿಯನ್ನು ಖರೀದಿಸಿ 40 ವರ್ಷಗಳಾಗಿವೆ. ಅಷ್ಟೂ ವರ್ಷಗಳಿಂದ ಈ ವಿಷಯವನ್ನು ಜೀವಂತವಾಗಿಟ್ಟು ನನ್ನನ್ನು ಗುರಿ ಮಾಡಲಾಗುತ್ತಿದೆ. ಸಿನೆಮಾ ಹಂಚಿಕೆದಾರನಾಗಿ ದುಡಿದ ಹಣದಲ್ಲಿ 1984ರಲ್ಲಿ ನಾನು ಈ ಭೂಮಿ ಖರೀದಿಸಿದ್ದು, ಅಂದಿನಿಂದಲೂ ಇದರ ಮೇಲೆ ಕೆಲವರ ಕಣ್ಣು ಇದೆ. ನನ್ನನ್ನು ರಾಜಕೀಯ ವಾಗಿ ಎದುರಿಸಲಾಗದ ಅಸಹಾಯಕತೆ ಯಿಂದ ರಾಜ್ಯ ಕಾಂಗ್ರೆಸ್‌ ಸರಕಾರ ಸರ್ವೇ ಮೂಲಕ ನನ್ನನ್ನು ಹೆದರಿಸುವ ಕೆಲಸ ಮಾಡುತ್ತಿದೆ ಎಂದರು.

1986ರಲ್ಲಿ ಮಾಜಿ ಶಾಸಕ ಸಿ.ಎಂ. ಲಿಂಗಪ್ಪ ಮತ್ತು ಜಿ.ಪಂ. ಸದಸ್ಯ ರಾಮಚಂದ್ರ ಅವರು ಇದೇ ಜಮೀನು ವಿಷಯದಲ್ಲಿ ಆಗಿನ ಪ್ರಧಾನಮಂತ್ರಿ, ಗೃಹ ಮಂತ್ರಿಯವರಿಗೆ ಪತ್ರ ಬರೆದಿದ್ದರು ಎಂದು ಹೇಳಿದರು.

You cannot copy content of this page

Exit mobile version