ಕುಂಭಮೇಳ ವಾಹನ ಅಪಘಾತ ರಾಜ್ಯದ ನಾಲ್ವರ ದುರ್ಮರಣ

ಮಧ್ಯಪ್ರದೇಶ : ಇಂದೋರ್‌ ಬಳಿ ಶುಕ್ರವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೆಳಗಾವಿ ನಾಲ್ವರು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ. 10 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.  ವಾಹನದಲ್ಲಿದ್ದ  19 ಮಂದಿ ಪ್ರಯಾಣಿಕರು ಕುಂಭಮೇಳಕ್ಕೆ ಧಾವಿಸುತ್ತಿದ್ದರು.

ಮೃತರ ಪೈಕಿ ಇಬ್ಬರು ಬೆಳಗಾವಿಯ ಗಣೇಶಪುರದ ನೀತಾ ಮತ್ತು ಸಾಗರ ಎಂದು ತಿಳಿದುಬಂದಿದ್ದು, ಮಿಕ್ಕವರ ಗುರುತು ಪತ್ತೆಯಾಗಿಲ್ಲ.ಗಾಯಾಳುಗಳನ್ನು ಎಜಿಎಂ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು ಅವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಮಿಕ್ಕವರ ಮಾಹಿತಿಗಾಗಿ ಸಂಸದ ಜಗದೀಶ್‌ ಶೆಟ್ಟರ್‌ ಇಂದೋರ್‌ ಆಡಳಿತದೊಡನೆ ಸಂಪರ್ಕದಲ್ಲಿದ್ದಾರೆಂದು ತಿಳಿದುಬಂದಿದೆ.

Related Articles

ಇತ್ತೀಚಿನ ಸುದ್ದಿಗಳು