Home ಬ್ರೇಕಿಂಗ್ ಸುದ್ದಿ ಬಾಬು ಜಗಜೀವನ್ ರಾಂ ರವರ ಮಾರ್ಗದಲ್ಲಿ ನಾವೆಲ್ಲರು ನಡೆಯೋಣ ಎಸ್.ಪಿ -ಶುಭಾನ್ವಿತ 

ಬಾಬು ಜಗಜೀವನ್ ರಾಂ ರವರ ಮಾರ್ಗದಲ್ಲಿ ನಾವೆಲ್ಲರು ನಡೆಯೋಣ ಎಸ್.ಪಿ -ಶುಭಾನ್ವಿತ 

ಹಾಸನ:- ಸಮಾಜದಲ್ಲಿ ಶಾಂತಿಯುತವಾಗಿ, ಪರಸ್ಪರ ಬಾಂಧವ್ಯದಿಂದ, ಸರಳವಾಗಿ ಬದುಕನ್ನು ಯಾವ ರೀತಿಯಲ್ಲಿ ನೆಡಸಬೇಕು ಎಂದು ಬಾಬು ಜಗಜೀವನ್ ರಾಮ್ ರವರು ಅವರು ತಿಳಿಸಿಕೊಟ್ಟಿದ್ದಾರೆ. ಅವರ ನೀಡಿರುವ ಮಾರ್ಗದಲ್ಲಿ ಜೀವನ ಸಾಗಿಸುವ ಮೂಲಕ ಅವರಿಗೆ ಗೌರವ ಸಲ್ಲಿಸೋಣ ಎಂದು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತ ರವರು ತಿಳಿಸಿದ್ದಾರೆ. ಜಿಲ್ಲಾಧಿಕಾರಿಯವರ ಕಚೇರಿ ಆವರಣದಲ್ಲಿ ಇಂದು ಬಾಬು ಜಗಜೀವನ್ ರಾಮ್ ರವರು ಜಯಂತಿ ಅಂಗವಾಗಿ ಏರ್ಪಡಿಸಿದ್ದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಜಗದೀಶ್ ಗಂಗಣ್ಣ ನವರ್,ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ದೂದ್ ಫೀರ್ ಹಾಗೂ ಸಮುದಾಯ ಮುಖಂಡರುಗಳು ಹಾಜರಿದ್ದರು.

You cannot copy content of this page

Exit mobile version