ಸಕಲೇಶಪುರ : ತಾಲೂಕಿನ ಹರಗರಹಳ್ಳಿ ಗ್ರಾಮದ ದಿಣಹಳ್ಳಿ ಕಾಫಿ ಎಸ್ಟೇಟ್ನಲ್ಲಿ ಕೆಲಸ ಮಾಡುತ್ತಿದ್ದ ಐವರು ಮಹಿಳಾ ಕಾರ್ಮಿಕರು ಸಿಡಿಲು ಬಡಿದು ಗಾಯಗೊಂಡ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಕಾಫಿ ತೋಟದಲ್ಲಿ ಔಷಧಿ ಸಿಂಪಡಿಸುತ್ತಿದ್ದ ವೇಳೆ ಕುದರಂಗಿ ಗ್ರಾಮದ ರೂಪ, ಸತ್ತಿಗಾಲ್ ಗ್ರಾಮದ ಜಯಮ್ಮ, ಸುಳ್ಳಕ್ಕಿ ಗ್ರಾಮದ ಸುಮಿತ್ರಾ ಹಾಗೂ ಕುದರಂಗಿ ಗ್ರಾಮದ ಲಕ್ಷ್ಮಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ರೂಪ ಅವರಿಗೆ ಗಂಭೀರ ಗಾಯಗಳಾಗಿರುವುದಾಗಿ ತಿಳಿದುಬಂದಿದೆ.
