Home ಬೆಂಗಳೂರು ಲೋಹಿತಾಶ್ವರವರ ಯೋಗಕ್ಷೇಮ ವಿಚಾರಿಸಿದ ಆರ್‌ ಅಶೋಕ್‌ : ಸರ್ಕಾರದ ವತಿಯಿಂದ ಚಿಕಿತ್ಸೆಗೆ ನೆರವು

ಲೋಹಿತಾಶ್ವರವರ ಯೋಗಕ್ಷೇಮ ವಿಚಾರಿಸಿದ ಆರ್‌ ಅಶೋಕ್‌ : ಸರ್ಕಾರದ ವತಿಯಿಂದ ಚಿಕಿತ್ಸೆಗೆ ನೆರವು

0

ಬೆಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಲೋಹಿತಾಶ್ವ ಅನಾರೋಗ್ಯದಿಂದ ಬಳಲುತಿದ್ದು,ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಯೋಗಕ್ಷೇಮ ವಿಚಾರಿಸಲು ಕಂದಾಯ ಸಚಿವರಾದ ಆರ್‌ ಅಶೋಕ್‌ ಆಸ್ಪತ್ರೆಗೆ ಭೇಟಿ ನೀಡಿದ್ದು, ಸರ್ಕಾರದ ವತಿಯಿಂದ  ಚಿಕಿತ್ಸೆಗೆ ನೆರವನ್ನು ಘೋಷಿಸಿದ್ದಾರೆ

ಖ್ಯಾತ ಕಲಾವಿದರಾದ ಲೋಹಿತಾಶ್ವ ಕನ್ನಡ ಚಿತ್ರರಂಗದಲ್ಲಿ ಬಹಳ ಹೆಸರು ಮಾಡಿದ್ದು, ಕನ್ನಡಿಗರ ಮನಗೆದ್ದಿದ್ದಾರೆ. ಆದರೆ ಪ್ರಸ್ತುತ ಅನಾರೋಗ್ಯದ ಸಮಸ್ಯೆಯಿಂದ ನಗರದ ಕುಮಾರಸ್ವಾಮಿ ಬಡಾವಣೆಯಲ್ಲಿರುವ ಸಾಗರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲೋಹಿತಾಶ್ವ ಅವರ ಯೋಗ ಕ್ಷೇಮವನ್ನು ವಿಚಾರಿಸಲು ಇಂದು ಕಂದಾಯ ಸಚಿವ ಆರ್‌ ಅಶೋಕ್‌ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಈ ವಿಚಾರವಾಗಿ ವೈದ್ಯರೊಂದಿಗೆ ಮಾತನಾಡಿದ ಅಶೋಕ್‌ ಲೋಹಿತಾಶ್ವ ಅವರ ಕಡೆ ಹೆಚ್ಚು ಗಮನಹರಿಸಿ ಕಾಳಜಿ ಮಾಡಿ, ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ. ನಂತರ ಕುಟುಂಬದವರಿಗೆ ಧೈರ್ಯ ತುಂಬಿದ್ದು, ಸರ್ಕಾರದ ವತಿಯಿಂದ  ಚಿಕಿತ್ಸೆಗೆ ನೆರವನ್ನು ಘೋಷಿಸಿದ್ದಾರೆ.

You cannot copy content of this page

Exit mobile version