Saturday, June 21, 2025

ಸತ್ಯ | ನ್ಯಾಯ |ಧರ್ಮ

ಲೋಕನುಡಿ: ಕನ್ನಡ ಸಂಶೋಧನಾ ಜಗತ್ತಿಗೊಂದು ಹೊಸ ವೆಬ್‌ಸೈಟ್‌

ಬೆಂಗಳೂರು: ಕನ್ನಡದ ಸಂಶೋಧನಾ ಜಗತ್ತು ಕೂಗುಮಾರಿ ಮಾಧ್ಯಮಗಳು ಹಾಗೂ ಬೆನ್ನು ಕೆರೆಯುವ ಸಾಹಿತ್ಯ ಜಗತ್ತಿನ ಸಡಗರದ ನಡುವೆ ಸೊರಗುತ್ತಿದೆ. ಒಂದೆಡೆ ಒ‍ಳ್ಳೆಯ ಸಂಶೋಧನೆಗಳು ಬರುತ್ತಿರುವ ಕೊರಗಿದ್ದರೆ, ಇನ್ನೊಂದೆಡೆ ಬರುವ ಸಂಶೋಧನೆಗಳೂ ಅದರ ಕುರಿತು ಚರ್ಚೆಗಳೇ ಇಲ್ಲದೆ ಪುಸ್ತಕದ ಕಪಾಟುಗಳಿಗೆ ಸೀಮಿತವಾಗುತ್ತಿವೆಯೆನ್ನುವ ಕೊರಗು ಎಲ್ಲೆಡೆ ಇದೆ.

ಈ ನಿಟ್ಟಿನಲ್ಲಿ ಹಿರಿಯ ಸಾಹಿತಿ, ಚಿಂತಕರು ಮತ್ತು ಲೇಖಕರು ಸೇರಿ ಕನ್ನಡಕ್ಕೆ ಸಂಶೋಧನೆಗೆ ಸಂಬಂಧಿಸಿದ ಹೊಸ ವೆಬ್ಸೈಟ್‌ ಒಂದನ್ನು ತರುವ ನಿಟ್ಟಿನಲ್ಲಿ ಯೋಚಿಸಿ ಅದನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ.

ಪುರುಷೋತ್ತಮ್ ಬಿಳಿಮಲೆ, ರಹಮತ್ ತರೀಕೆರೆ, ಕೆ.ಪಿ. ಸುರೇಶ್, ವೆಂಕಟೇಶ್ ನೆಲ್ಲುಕುಂಟೆ, ರಂಗನಾಥ ಕಂಟನಕುಂಟೆಯವರ ಸಂಪಾದಕೀಯ ಬಳಗವು ಈ ನಿಟ್ಟಿನಲ್ಲಿ ಹೊಸ ಸಂಶೋಧಕರಿಂದ ಬರಹಗಳನ್ನು ಆಹ್ವಾನಿಸಿದೆ.

ಲೇಖಕರು ಕಳುಹಿಸಿದ ಬರಹಗಳನ್ನು ವಿಷಯತಜ್ಞ ಲೇಖಕರಿಗೆ ಕಳುಹಿಸಿ ಅವರಿಂದ ಬರೆಹದ ಕುರಿತು ಟಿಪ್ಪಣಿ ಬರೆಯಿಸಲಾಗುತ್ತದೆ. ವಿಷಯ ತಜ್ಞರು ನಿಮ್ಮ ಬರಹವನ್ನು ಒಪ್ಪಿದಲ್ಲಿ ಅದನ್ನು ವೆಬ್ಸೈಟಿನಲ್ಲಿ ಪ್ರಕಟಿಸಲಾಗುತ್ತದೆ.

ಆಸಕ್ತರು ತಮ್ಮ ಲೇಖನಗಳನ್ನು lokanudi2023@gmail.com ಎನ್ನುವ ಈ ಇ-ಮೇಲ್‌ ವಿಳಾಸಕ್ಕೆ ಕಳುಹಿಸಬಹುದು ಎಂದು ಸಂಪಾದಕೀಯ ಬಳಗ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page