Friday, June 20, 2025

ಸತ್ಯ | ನ್ಯಾಯ |ಧರ್ಮ

ದೇಶದ ಯುವಜನರನ್ನು ನಿರುದ್ಯೋಗಿಗಳನ್ನಾಗಿ ಮಾಡುವುದೇ ಮೋದಿ ಸರ್ಕಾರದ ಸಾಧನೆ: ಖರ್ಗೆ

ನವದೆಹಲಿ: ಯುವ ಜನತೆಯನ್ನು ನಿರುದ್ಯೋಗಿಗಳನ್ನಾಗಿ ಮಾಡುವುದೇ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಏಕೈಕ ಸಾಧನೆಯಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಮಂಗಳವಾರ ತಮ್ಮ ಎಕ್ಸ್‌ ಖಾತೆಯಲ್ಲಿ ದೂರಿದ್ದಾರೆ.

ದೇಶದಲ್ಲಿ ನಿರುದ್ಯೋಗ ಸಮಸ್ಯೆ ತೀವ್ರವಾಗಿದೆ. ಈ ಹಲವಾರು ಸಮೀಕ್ಷಾ ಸಂಸ್ಥೆಗಳು ಸಮೀಕ್ಷೆಯನ್ನು ಪ್ರಕಟಿಸಿವೆ. ಆದರೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ‘ಸಿಟಿಗ್ರೂಪ್’ ಸ್ವತಂತ್ರ ವರದಿಯನ್ನು ಮೋದಿ ಸರ್ಕಾರ ನಿರಾಕರಿಸಬಹುದು. ಆದರೆ ಸರ್ಕಾರಿ ದತ್ತಾಂಶವನ್ನು ನಿರಾಕರಿಸಲು ಹೇಗೆ ಸಾಧ್ಯ? ಕಳೆದ 10 ವರ್ಷಗಳಲ್ಲಿ ಕೋಟ್ಯಂತರ ಯುವ ಜನತೆಯ ಕನಸು ಭಗ್ನಗೊಳ್ಳಲು ಮೋದಿ ಸರ್ಕಾರವೇ ಕಾರಣ’ ಎಂದು ದೂರಿದ್ದಾರೆ.

(ಎನ್‌ಎಸ್‌ಎಸ್ಒ) ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿಯ ಸಮೀಕ್ಷಾ ವರದಿಯನ್ನು ಖರ್ಗೆ ಉಲ್ಲೇಖಿಸಿದ್ದಾರೆ. 2015ರಿಂದ 2023ರ ನಡುವೆ ಏಳು ವರ್ಷಗಳ ಅವಧಿಯಲ್ಲಿ ಅಸಂಘಟಿತ ವಲಯದಲ್ಲಿ 54 ಲಕ್ಷ ಉದ್ಯೋಗಗಳು ನಷ್ಟವಾಗಿವೆ ಎಂದು ಆರೋಪಿಸಿದ್ದಾರೆ.

ಸರ್ಕಾರಿ ಉದ್ಯೋಗ, ಖಾಸಗಿ ವಲಯ, ಸ್ವಯಂ ಉದ್ಯೋಗ ಅಥವಾ ಅಸಂಘಟಿತ ವಲಯವೇ ಆಗಿರಲಿ, ನಿರುದ್ಯೋಗಿಗಳನ್ನಾಗಿ ಮಾಡುವುದೇ ಮೋದಿ ಸರ್ಕಾರದ ಗುರಿ ಮತ್ತು ಸಾಧನೆಯಾಗಿದೆ ಎಂದು ಅವರು ತಮ್ಮ ತಮ್ಮ ಎಕ್ಸ್‌ ಖಾತೆಯಲ್ಲಿ ಫೋಸ್ಟ್‌ ಮಾಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page