Saturday, May 4, 2024

ಸತ್ಯ | ನ್ಯಾಯ |ಧರ್ಮ

ಪೆನ್ ಡ್ರೈವ್ ಪ್ರಕರಣ : ಮಾಡೆಲ್ ಕಂ ಆಂಕರ್ ರಶ್ಮಿ ಗೌತಮ್ ಬೋಲ್ಡ್ ಹೇಳಿಕೆ

ಪ್ರಜ್ವಲ್ ರೇವಣ್ಣನ ಲೈಂಗಿಕ ದೌರ್ಜನ್ಯದ ಅಶ್ಲೀಲ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುತೇಕ ಮಂದಿ ಸೆಲೆಬ್ರಿಟಿಗಳ ಮೌನ ಒಂದು ಕಡೆಯಾದರೆ ಕೆಲವೇ ಕೆಲವು ಸೆಲೆಬ್ರಿಟಿಗಳು ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ದಾಖಲಿಸಿ ಈ ದುರ್ಘಟನೆಯನ್ನು ಖಂಡಿಸಿದ್ದಾರೆ. ಅದರಲ್ಲಿ ತೀರಾ ಗಮನ ಸೆಳೆದದ್ದು ತೆಲುಗಿನ ಸ್ಟಾರ್ ಆಂಕರ್ ಕಂ ಮಾಡೆಲ್ ರಶ್ಮಿ ಗೌತಮ್ ಹೇಳಿಕೆ.

ಆಮಿಷಕ್ಕೋ ಅಥವಾ ಬೇರಿನ್ನಾವ ಅಗತ್ಯಕ್ಕೋ ವಿಕೃತ ಮನುಷ್ಯ ಪ್ರಜ್ವಲ್ ರೇವಣ್ಣನ ಕಾಮತೃಷೆಗೆ ಬಲಿಯಾಗಿರುವ ಹೆಣ್ಣು ಮಕ್ಕಳು ಈಗ ಪೆನ್ ಡ್ರೈವ್ ಲೀಕ್ ಆಗುತ್ತಿದ್ದಂತೆ ತತ್ತರಿಸಿ ಹೋಗಿದ್ದಾರೆ. ಮನೆ ಕೆಲಸದಾಕೆಯನ್ನೂ ಬಿಡದ ಕಾಮ ಪಿಶಾಚಿ ಪ್ರಜ್ವಲ್ ರೇವಣ್ಣನ ವಿಚಾರವಾಗಿ ಈಗ ತೆಲುಗಿನ ಆಂಕರ್ ತಮ್ಮ ಬೋಲ್ಡ್ ಹೇಳಿಕೆ ದಾಖಲಿಸಿದ್ದಾರೆ. ಈ ಪೋಸ್ಟ್ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಅಷ್ಟಕ್ಕೂ ನಿರೂಪಕಿ ರಶ್ಮಿ ಗೌತಮ್ ಯಾರೊಬ್ಬರ ಬಗ್ಗೆ ಈ ಹೇಳಿಕೆ ನೀಡಿದ್ದಾರೆ, ಯಾರನ್ನು ಉದ್ದೇಶಿಸಿ ಎಂಬ ಬಗ್ಗೆ ಯಾರ ಹೆಸರೂ ಉಲ್ಲೇಖವಿಲ್ಲ. ಇದರ ಹೊರತಾಗಿಯೂ ಕರ್ನಾಟಕದಲ್ಲಿನ ಪೆನ್​ಡ್ರೈವ್​ ಕೇಸ್​ಗೆ ರಶ್ಮಿ ಅವರ ಈ ಹೇಳಿಕೆಯನ್ನು ಹೋಲಿಕೆ ಮಾಡಲಾಗುತ್ತಿದ್ದು, ನಟಿ ಇದೇ ಉದ್ದೇಶಕ್ಕೇ ಇದನ್ನು ಹೇಳಿರುವುದಾಗಿ ಹೇಳಲಾಗುತ್ತಿದೆ.

ಆ ಪೋಸ್ಟ್​ನಲ್ಲಿ ಇರುವುದರಲ್ಲಿ “ಹೆಚ್ಚಿನ ಪುರುಷರು ಈ ಜಗತ್ತಿನಲ್ಲಿ ಒಳ್ಳೆಯರಾಗಿದ್ದರೆ ವ್ಯಭಿಚಾರ ಎಂಬುದು ಇರುತ್ತಲೇ ಇರಲಿಲ್ಲ ಎನ್ನುವ ಮೂಲಕ ಈ ಪೋಸ್ಟ್​ ಶುರುವಾಗುತ್ತದೆ.. ಆ ನಂತರ “ಬಡತನದಲ್ಲಿರುವಾಗ ಮತ್ತು ಹಸಿವಿನಿಂದ ಬಳಲುತ್ತಿರುವಾಗ ನಾವು ಮನುಷ್ಯರಾಗಿ ಅವರ ಬಾಯಿಗೆ ಆಹಾರ ಇಡಬೇಕೇ ಹೊರತು ಖಾಸಗಿ ಅಂಗವನ್ನಲ್ಲ” ಎಂದು ಬರೆಯಲಾಗಿದೆ.

ಕರ್ನಾಟಕದಲ್ಲಿ ನಡೆಯುತ್ತಿರುವ ಘಟನೆಗೂ, ಈ ವಿಷಯಕ್ಕೂ ನೆಟ್ಟಿಗರು ತಾಳೆ ಮಾಡಿದ್ದು, ರಶ್ಮಿ ಅವರು ಇದೇ ಉದ್ದೇಶಕ್ಕಾಗಿ ಇದನ್ನು ಸ್ಟೋರಿಯಲ್ಲಿ ಹಾಕಿರುವುದಾಗಿ ಹೇಳಲಾಗುತ್ತಿದೆ. ಈ ಪೋಸ್ಟ್​ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು