ಬೆಂಗಳೂರು : ಅಕ್ಟೋಬರ್ 2 ಮಹಾತ್ಮ ಗಾಂಧಿಜಿಯವರ ಜನ್ಮದಿನದಂದು ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕಾಂಗ್ರೆಸ್ ನಾಯಕರ ಮತ್ತು ಗಾಂಧಿ ಕುಟುಂಬದ ಬಗ್ಗೆ ಮಾಧ್ಯಮಗಳ ಮುಂದೆ ಟೀಕಿಸಿದ್ದಾರೆ.
ಗಾಂಧಿ ಜಯಂತಿಯ ಬಗ್ಗೆ ಮಾತನಾಡಿದ ಸಿಎಂ ಬೊಮ್ಮಾಯಿ ʼಇಂದು ಗಾಂಧಿ ಜಯಂತಿಯ ದಿನವಾಗಿದೆ. ಆದರೆ ನಕಲಿ ಗಾಂಧಿಗಳ ಬಗ್ಗೆ ನಾನೇಕೆ ಮಾತನಾಡಬೇಕು? ಇಡೀ ಕಾಂಗ್ರೆಸ್ ಪಕ್ಷ ಜಾಮೀನಿನ ಮೇಲೆ ಹೊರಗಿದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಡಿಕೆ ಶಿವಕುಮಾರ್ ಸಹ ಜಾಮೀನಿನ ಮೇಲೆ ಹೊರಗಿದ್ದಾರೆ ಎಂದು ಹೇಳಿದ್ದಾರೆ.
ಹಿಂದೆ ಕಾಂಗ್ರೆಸ್ ಪಾಲಿಗೆ ಕರ್ನಾಟಕ ಅನ್ನೋದು ಎಟಿಎಂ ಆಗಿತ್ತು ಅಷ್ಟೇ ಆದರೆ, ಈಗ ಅದು ನಡೆಯುತ್ತಿಲ್ಲಎಂದು ಸಿಎಂ ಬಸವರಾಜ ಬೊಮ್ಮಾಯಿ ಮಾಧ್ಯಮಗಳ ಮುಂದೆ ಕಾಂಗ್ರೆಸ್ ಬಗ್ಗೆ ವ್ಯಂಗ್ಯ ಮಾತುಗಳನ್ನು ಮಾತನಾಡಿದ್ದಾರೆ.
🔸 ಪೀಪಲ್ ಗ್ರೂಪ್ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo
ಇದನ್ನೂ ನೋಡಿ:ಮಹಾತ್ಮ ಗಾಂಧಿ- ಕಸ್ತೂರ್ಬಾ ಅವರ ದಾಂಪತ್ಯ ಹೇಗಿತ್ತು ಗೊತ್ತೆ? ಕಸ್ತೂರ್ಬಾ ಅವರ ಕೊನೆಯ ಆಸೆ ಏನಾಗಿತ್ತು? ಗಾಂಧೀಜಿ ಅದನ್ನು ಈಡೇರಿಸಿದರೆ? ಈ ಮನಕಲಕುವ ವಿವರಗಳನ್ನು ಬಿಡಿಸಿಟ್ಟಿದ್ದಾರೆ ಚಿಂತಕ ನಿಕೇತ್ ರಾಜ್ ಮೌರ್ಯ.