ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ವರ್ಣಭೇದ ನೀತಿ ಮತ್ತು ಅಸಹಿಷ್ಣುತೆ ಕುರಿತು ವಿಶೇಷ ತಜ್ಞರಾಗಿ ಭಾರತದ ಪ್ರಪ್ರಥಮ ತಜ್ಞೆ ಕೋಲಾರ ಮೂಲದ ಡಾ ಕೆ ಪಿ ಅಶ್ವಿನಿ ನೇಮಕವಾಗಿದ್ದಾರೆ. ಇವರು ಹೆಮ್ಮೆಯ ಕನ್ನಡತಿಯಾಗಿ, ಅಂಬೇಡ್ಕರ್ವಾದಿ ಯುವತಿಯಾಗಿ, ಸ್ವಾಭಿಮಾನಿ ದಲಿತ ಚಿಂತಕಿಯಾಗಿ ದೇಶದ ಮುಡಿಗೊಂದು ಹೆಮ್ಮೆಯ ಕಿರೀಟ ತೊಡಿಸಿದ್ದಾರೆ; ಯುವಜನತೆಯಲ್ಲಿ ಕನಸುಗಳನ್ನು ಬಿತ್ತಿದ್ದಾರೆ. ಇವರ ಅದ್ಭುತ ಸಾಧನೆಯನ್ನು ಪೀಪಲ್ ಮೀಡಿಯಾವು ಸಂಭ್ರಮಿಸುತ್ತಾ ಆಭಿನಂದನೆಗಳು ಮತ್ತು ಅಭಿವಂದನೆಗಳನ್ನು ಸಲ್ಲಿಸುತ್ತದೆ. ಪೀಪಲ್ ಟೀವಿಗಾಗಿ ಪತ್ರಕರ್ತ, ಲೇಖಕ ಹರ್ಷಕುಮಾರ್ ಕುಗ್ವೆ ನಡೆಸಿರುವ ಮಾತುಕತೆಯ ಪೂರ್ಣ ಪಾಠವನ್ನು ನಿಮಗಾಗಿ ಇದು ಪ್ರಸ್ತುತ ಪಡಿಸುತ್ತಿದೆ.
ಪೀಪಲ್ ಮೀಡಿಯಾ: ಮೇಡಂ, ಮೊದಲನೆಯದಾಗಿ ನಿಮಗೆ ಅಭಿನಂದನೆಗಳು. ನೀವು ವಿಶ್ವಸಂಸ್ಥೆಯ UNHRC ಯ ವಿಶೇಷ ತಜ್ಞರಾಗಿ ಆಯ್ಕೆಯಾಗಿದ್ದೀರಿ ಈ ಪ್ರಕ್ರಿಯೆಯ ಬಗ್ಗೆ ತಿಳಿಸಿ ಹಾಗೂ ನಿಮ್ಮ ಕೆಲಸದ ಸ್ವರೂಪ ಹೇಗಿರುತ್ತದೆ ತಿಳಿಸಿಕೊಡಿ.
ಡಾ.ಕೆ.ಪಿ.ಅಶ್ವಿನಿ: ವಿಶ್ವಸಂಸ್ಥೆಯ ಸ್ಪೆಷಲ್ ರಾಪೊರ್ಟರ್ (rapporteur) ಒಂದು ಸ್ವತಂತ್ರ ಪರಿಣಿತರ ಹುದ್ದೆಯಾಗಿದೆ, ವಿಶ್ವಸಂಸ್ಥೆಯಲ್ಲಿ ಬಹಳ ನಿಯೋಗಗಳಿವೆ (mandates). ಇಲ್ಲಿ ಜನಾಂಗೀಯ ಭೇದ, ಮೈನಾರಿಟಿ ಇಶ್ಯೂ, ಸ್ಯಾನಿಟೇಶನ್, ಹೌಸಿಂಗ್ ಈ ರೀತಿ ಬೇರೆ ಬೇರೆ ಮ್ಯಾಂಡೇಟ್ಸ್ ಇದೆ. ಪ್ರತೀ ಮ್ಯಾಂಡೇಟ್ಗಳಿಗೆ ಒಬ್ಬರು ತಜ್ಞರಿರುತ್ತಾರೆ. ಸ್ಪೆಷಲ್ ರಾಪೊರ್ಟರ್ ಅಂದರೆ ಸ್ವತಂತ್ರ ತಜ್ಞರು ಅಂತ. ನನ್ನದು ರೇಸಿಸಂ, ಜನಾಂಗೀಯ ತಾರತಮ್ಯ, ಕ್ಸೆನೋಫೋಬಿಯಾಕ್ಕೆ (ಬೇರೆ ದೇಶದವರ ಮೇಲಿನ ದ್ವೇಷ) ಸಂಬಂಧಿಸಿದ ಅಸಹನೆ. ವರ್ಣಭೇದ, ಜನಾಂಗೀಯ ಭೇದನೀತಿ ಇವುಗಳ ಕುರಿತು ಗಮನ ಹರಿಸುವುದಿರುತ್ತದೆ. ಒಬ್ಬ ಸ್ಪೆಷಲ್ ರಾಪರ್ಟರ್ ಆಗಿ ನಾನು ಬೇರೆ ಬೇರೆ ದೇಶಗಳನ್ನು ಭೇಟಿ ಮಾಡಬಹುದು. ಯಾವುದಾದರೂ ದೇಶದಲ್ಲಿ ಜನಾಂಗೀಯ ಭೇದದ ಘಟನೆಗಳು ನಡೆದಾಗ ಅವುಗಳ ಕುರಿತು ಎಮರ್ಜೆನ್ಸಿ ಅಪೀಲ್ಸ್ ಕೊಡಬಹುದು. ಹಾಗೆಯೇ ಇಂಡಿಪೆಂಡೆಂಟ್ ಎಕ್ಸ್ಪರ್ಟ್ ಆಗಿರುವುದರಿಂದ UN ನಲ್ಲಿ ರೇಸಿಸಂ ಅನ್ನು ಅಡ್ರೆಸ್ ಮಾಡೋದಿಕ್ಕೆ ಬೇರೆ ಬೇರೆ ರೀತಿಯ ಮೆಕಾನಿಸಮ್ – ಕನ್ವೆನ್ಷನ್ಸ್ ಇವೆ. ಆ ವಿಷಯಗಳ ಮೇಲೆ ಯುನೈಟೆಡ್ ನೇಶನ್ಸ್ ಎಷ್ಟು ಎಫೆಕ್ಟೀವ್ ಆಗಿ ಅಡ್ರೆಸ್ ಮಾಡುತ್ತದೆ ಎಂಬುದನ್ನು ಮಾನಿಟರ್ ಮಾಡುವಂತಹ ಜವಾಬ್ದಾರಿ ಸ್ಪೆಷಲ್ ರಾಪೊರ್ಟರ್ ಗೆ ಇರುತ್ತೆ.
ಪೀಪಲ್ ಮೀಡಿಯಾ: ಈವರೆಗೆ ಆ ಪೊಸಿಶನ್ ಗೆ ಆಯ್ಕೆ ಆಗುತ್ತಿದ್ದುದು ಆಫ್ರಿಕನ್ಸ್. ಆದ್ರೆ ಈಗ ಮೊದಲ ಬಾರಿಗೆ ಭಾರತದಿಂದ ಆಯ್ಕೆ ಆಗಿದ್ದೀರಾ. ನೀವೇ ಆಯ್ಕೆಯಾಗಿದ್ದು ಹೇಗೆ?

ಡಾ.ಕೆ.ಪಿ.ಅಶ್ವಿನಿ: ಜಾತಿ ಮತ್ತು ಜನಾಂಗೀಯ ತಾರತಮ್ಯದ ಕುರಿತಾಗಿಯೇ ನಾನು ಪಿಎಚ್ಡಿ ಫೋಕಸ್ ಮಾಡಿರುವುದು. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಈ ಹುದ್ದೆಗೆ ವೇಕೆನ್ಸಿ ಇತ್ತು. ನಾನು ಇದಕ್ಕೆ ಅಪ್ಲೈ ಮಾಡಿದ್ದೆ. ಇದಕ್ಕೆ ಪ್ರಪಂಚದ ಎಲ್ಲಾ ಕಡೆಗಳಿಂದ ಬಂದಿರುವ ಅರ್ಜಿಗಳನ್ನು ಸ್ವೀಕರಿಸಿ 12 ಜನರನ್ನು ಅಂತಿಮ ಗೊಳಿಸಿದ್ದರು. ಅಮೆರಿಕ, ಚೀನಾ, ಇಂಡಿಯಾ ಮತ್ತು ಬೇರೆ ಬೇರೆ ಆಫ್ರಿಕನ್ನರು ತುಂಬಾ ಜನ ಇದ್ರು. ಅವರನ್ನ ಶಾರ್ಟ್ ಲಿಸ್ಟ್ ಮಾಡಿ ಸಂದರ್ಶನ ಮಾಡ್ತಾರೆ. ಅದನ್ನು ಸಂದರ್ಶನ ಪ್ರತಿನಿಧಿಗಳು ಮಾಡ್ತಾರೆ. ಇನ್ಕ್ಲೂಡಿಂಗ್ ಕನ್ಸಲ್ಟೇಟೀವ್ಸ್ ಸೇರಿ ಮೂವರು ಪರ್ಮನೆಂಟ್ ರೆಪ್ರೆಸೆಂಟೇಟಿವ್ಸ್ ಇರ್ತಾರೆ. ಸಂದರ್ಶನ ಬಹಳ ಇಂಟೆನ್ಸಾಗಿರುತ್ತದೆ. ಸಂದರ್ಶನದ ನಂತರ ಮೂರು ಜನರ ಹೆಸರನ್ನು ಶಾರ್ಟ್ಲಿಸ್ಟ್ ಮಾಡಿ, ಅದನ್ನು ಮತ್ತೆ ಮಾನವ ಹಕ್ಕು ಮಂಡಳಿಯ ಅಧ್ಯಕ್ಷರಿಗೆ ಕಳಿಸಿ, ಅಲ್ಲಿ ಮತ್ತೆ ನಮ್ಮ ಪರಿಣತಿ, ಪ್ರಾತಿನಿಧ್ಯ, ಜೆಂಡರ್ ಡೈವರ್ಸಿಟಿ ಇದನ್ನೆಲ್ಲಾ ಗಮನದಲ್ಲಿ ಇಟ್ಟುಕೊಂಡು ಆಯ್ಕೆ ಮಾಡ್ತಾರೆ. ನನ್ನ ತಿಳುವಳಿಕೆ ಪ್ರಕಾರ ನನ್ನ ಪರಿಣತಿ, ಐಡೆಂಟಿಟಿ ಎಲ್ಲವನ್ನೂ ಪರಿಗಣಿಸಿ ನನ್ನ ನೇಮಕ ಮಾಡಿದ್ದಾರೆ.
ಪೀಪಲ್ ಮೀಡಿಯಾ: ನಿಮ್ಮ ಹಿನ್ನೆಲೆ ಮತ್ತು ನಿಮ್ಮ ಕುಟುಂಬದ ಹಿನ್ನೆಲೆ ಬಗ್ಗೆ ಕೊಂಚ ತಿಳಿಸಿಕೊಡಿ.
ಡಾ.ಕೆ.ಪಿ.ಅಶ್ವಿನಿ: ಬೇಸಿಕಲಿ ನನ್ನ ಊರು ಕೋಲಾರ. ನಮ್ಮ ತಂದೆ ಕೆಎಎಸ್ ಅಧಿಕಾರಿಯಾಗಿದ್ರು. ಅದರಿಂದಾಗಿ ನಾನು ಕರ್ನಾಟಕದ ಉದ್ದಗಲಕ್ಕೆ ವಿದ್ಯಾಭ್ಯಾಸ ಮಾಡಿದ್ದೀನಿ- ಮಂಗಳೂರು, ಗುಲ್ಬರ್ಗ, ಮೈಸೂರು ಇಲ್ಲೆಲ್ಲ. ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬಿ ಎ ಪದವಿ ಓದಿದೆ. ಸೆಂಟ್ ಜೋಸೆಫ್ ಕಾಲೇಜ್ ಬೆಂಗಳೂರಲ್ಲಿ ಎಂಎ ಓದಿದೆ. ದೆಹಲಿಯ JNU – ಜವಾಹರಲಾಲ್ ನೆಹರೂ ಯೂನಿವರ್ಸಿಟಿಯಲ್ಲಿ ಎಂ ಫಿಲ್, ಪಿಎಚ್ ಡಿ ಮಾಡಿದೆ. ನನ್ನ ಪಿಎಚ್ ಡಿ ವಿಷಯ ಇದ್ದಿದ್ದು ಸೌತ್ ಏಷಿಯನ್ ಸ್ಟಡೀಸ್ ಕುರಿತು. ಹೀಗಾಗಿ ದಲಿತ್ ಹ್ಯೂಮನ್ ರೈಟ್ಸ್ ಬಗ್ಗೆ ಫೋಕಸ್ ಮಾಡಿ, ಇಂಡಿಯಾ ನೇಪಾಳ ಎರಡೂ ದೇಶಗಳು ಕ್ಯಾಸ್ಟ್ನ್ನು ಹೇಗೆ ಗ್ಲೋಬಲ್ ಪ್ಲಾಟ್ಫಾರ್ಮ್ ನಲ್ಲಿ ಅಡ್ರೆಸ್ ಮಾಡಿದಾರೆ ಅನ್ನೋದರ ಬಗ್ಗೆ ಕಂಪೇರಿಟೀವ್ ಸ್ಟಡಿ ಮಾಡಿದಿನಿ.
ಪೀಪಲ್ ಮೀಡಿಯಾ: ರೇಸಿಸಂ ಅಂತ ಹೇಳ್ದಾಗ ಈ ಹಿಂದೆ ಇಂಡಿಯಾದಲ್ಲಿರುವ ಅಸ್ಪೃಶ್ಯತೆ, ಕ್ಯಾಸ್ಟಿಸಂ ʼಈಸ್ ಇಟ್ ಎ ಫಾರ್ಮ್ ಆಫ್ ರೇಸಿಸಂ? ಎಂಬ ಪ್ರಶ್ನೆಯ ಸುತ್ತ ಚರ್ಚೆಗಳು ನಡೆದಿವೆ. ಈ ಹಿಂದೆ ವಾಜಪೇಯಿ ಸರ್ಕಾರ ಇದ್ದಾಗ 2002ರಲ್ಲಿ ಡರ್ಬನ್ನಲ್ಲಿ ಒಂದು ಕನ್ವೆನ್ಶನ್ ನಡೆದಾಗ ಭಾರತ ಸರ್ಕಾರದ ನಿಲುವು ಕ್ಯಾಸ್ಟಿಸಂ ಅನ್ನೋದು ರೇಸಿಸಂ ಅಲ್ಲ ಅನ್ನೋ ರೀತಿಲಿ ಇತ್ತು. ಸೋ ಇದನ್ನು ನಾವು ಅಂದ್ರೆ ಭಾರತದ ಜಾತಿ ವ್ಯವಸ್ಥೆಯನ್ನು ಅಲ್ಲಿ ರೇಸಿಸಂ ಚೌಕಟ್ಟಿನಲ್ಲಿ ತರಲು ಸಾಧ್ಯವೇ? ಈ ಕುರಿತು ನಿಮ್ಮ ಅಭಿಪ್ರಾಯ?
ಡಾ.ಕೆ.ಪಿ.ಅಶ್ವಿನಿ: ಇದು ತುಂಬಾ ಟ್ರಿಕ್ಕಿ ಪ್ರಶ್ನೆ. ನಿಜಾ ಅಂದ್ರೆ ಸುಮಾರು 30 ವರ್ಷಗಳಿಂದ ಗ್ಲೋಬಲ್ ಪ್ಲಾಟ್ಫಾರ್ಮ್ ನಲ್ಲಿ ಕ್ಯಾಸ್ಟ್, ರೇಸ್ ಬಗ್ಗೆ ತುಂಬಾ ಡಿಬೇಟ್ಸ್ ನಡೆದಿದೆ. ಅದರಲ್ಲೂ ಡರ್ಬನ್ ಕಾನ್ಫ್ರೆನ್ಸ್ ಆದಮೇಲೆ ಕ್ಯಾಸ್ಟ್ ಮೇಲೆ ಬಹಳ ಫೋಕಸ್ ಮಾಡಿದಾರೆ. ದಲಿತ್ ಆಕ್ಟಿವಿಸ್ಟ್ ಆಗ್ಲಿ, ಅಕಾಡೆಮಿಕ್ಸ್ ಆಗ್ಲಿ, ಸರ್ಕಾರದ ಪ್ರತಿನಿಧಿಗಳಾಗಲೀ ಗಂಭೀರವಾಗಿ ಪರಿಗಣಿಸಿದ್ದಾರೆ. ಸರ್ಕಾರ ಕೂಡಾ ಇದನ್ನು ಗಂಭೀರ ವಿಷಯ ಎಂದು ಪರಿಗಣಿಸಿದೆ. ಇದೊಂದು, ಮೇಜರ್ ಕನ್ಸರ್ನ್, ಇದನ್ನು ನಾವು ಪರಿಣಾಮಕಾರಿಯಾಗಿ ಅಡ್ರೆಸ್ ಮಾಡಬೇಕು. UN ಅಲ್ಲಿ ಒಂದು ಕನ್ವೆನ್ಶನ್ ಇದೆ- ಎಲಿಮಿನೇಶನ್ ಆಫ್ ರೇಶಿಯಲ್ ಡಿಸ್ಕ್ರಿಮಿನೇಶನ್ ಅಂತ. ಇದರಲ್ಲಿ ಬೇರೆ ಬೇರೆ ಅಂಶಗಳನ್ನು ಸೇರಿಸಿದ್ದಾರೆ. ರೇಸ್, ಕ್ಸೆನೋಫೋಬಿಯಾ ಅದರಲ್ಲಿ ಡಿಸೆಂಟ್ (ಕುಲಮೂಲ) ಮತ್ತು ಉದ್ಯೋಗಾಧಾರಿತ ತಾರತಮ್ಯ ಹೇಗೆ ಎಂದು ನೋಡಲಾಗುತ್ತದೆ. ಭಾಗಶಃವಾಗಿ ನೋಡಿದರೆ ಜಾತಿ ಅನ್ನೋದು ಹುಟ್ಟಿನಿಂದ ಬರುವ ಮತ್ತು ಉದ್ಯೋಗಾಧಾರಿತ ತಾರತಮ್ಯ. ಆದರೆ ಬಹಳ ಮಂದಿ ದಲಿತ್ ಆಕ್ಟಿವಿಸ್ಟ್, ಅಕಾಡೆಮಿಶಿಯನ್ಸ್, ಪ್ರೊಗ್ರೆಸ್ಸೀವ್ ಲಿಬರಲ್ಸ್ ಅಭಿಪ್ರಾಯದಲ್ಲಿ ಜಾತಿ ಎಂದೇ ಸ್ಪಷ್ಟವಾಗಿ ಹೇಳುವುದರಿಂದ ಅದನ್ನ ಪರಿಣಾಮಕಾರಿಯಾಗಿ ಅಡ್ರೆಸ್ ಮಾಡಬಹುದು. ಯಾಕೆಂದರೆ ಈಗ ಕ್ಯಾಸ್ಟ್ ಎಂಬುದು ಇಂಡಿಯಾ, ಸೌತ್ ಏಷ್ಯಾಗೆ ಸೀಮಿತವಾದುದಲ್ಲ. ಬದಲಿಗೆ ಅದೊಂದು ಗ್ಲೋಬಲ್ ಫಿನಾಮಿನಾನ್ ಆಗಿದೆ ಅಂತ. ನನಗಿಂತ ಮುಂಚೆ ಇದ್ದ ರಾಪೋರ್ಟರ್ ಕೂಡಾ ತಮ್ಮ ವರದಿಯಲ್ಲಿ ಜಾತಿ ಕುರಿತು ತಿಳಿಸಿದ್ದಾರೆ. ಯಾರೂ ಗುರುತಿಸುತ್ತಿಲ್ಲ ಎಂದಲ್ಲ. ಕ್ಯಾಸ್ಟ್ ಈಸ್ ಎ ಗ್ಲೋಬಲ್ ಫಿನಾಮೆನಾನ್; ಇಟ್ ಶುಡ್ ಬಿ ಅಡ್ರೆಸ್ಡ್ ಅಂಡ್ ಯುನೈಟೆಡ್ ನೇಶನ್ಸ್ನಲ್ಲಾಗಲೀ ಬೇರೆ ಸಿವಿಲ್ ಸೊಸೈಟಿ ಗುಂಪುಗಳಲ್ಲಾಗಲೀ ಈ ಬಗ್ಗೆ ಮಾತನಾಡಿದಾರೆ. ಆದರೆ ಅಕಾಡೆಮಿಕ್ ನರೆಟಿವ್ ಏನು ಎಂದರೆ ಜಾತಿ ಅಸ್ಪೃಶ್ಯತೆಗಳು ರೇಸಿಸಂಗಿಂತಲೂ ಕೆಟ್ಟದ್ದು ಅಂತ. ಸ್ಪಲ್ಪ ಅಕಾಡೆಮಿಶಿಯನ್ಸ್ ಮತ್ತು ಆಕ್ಟಿವಿಸ್ಟ್ ದೃಷ್ಟಿಕೋನ ಅದು. ಆದರೆ ಈಗ ಈ ವಿಷಯ ನೋಡುವುದರಲ್ಲಿ ಬದಲಾವಣೆಯಾಗಿದೆ. ಇಂದು ಜಾತಿ ತಾರತಮ್ಯದ ವಿಷಯವನ್ನು ಅಧಿಕೃತವಾಗಿಯೇ ಗುರುತಿಸುವ ಕೆಲಸ ಕೂಡಾ ಆಗುತ್ತಿದೆ.
ಪೀಪಲ್ ಮೀಡಿಯಾ: ಇಂಡಿಯಾ ಅಂದರೆ ದೊಡ್ಡ ಕಲ್ಚರ್ ಅಂತಾ ಹೇಳ್ತಾ ಭಾರತದ ಸಮಸ್ಯೆಗಳಾದ ಕ್ಯಾಸ್ಟ್, ರೇಸಿಸಂ ಈ ರೀತಿಯದನ್ನು ಮುಚ್ಚಿಡುವ ಪ್ರಯತ್ನಗಳು ನಡಿತಾ ಇವೆ. ಬಹುಶಃ ಈಗ, ನೀವು ಇಂಡಿಯಾದಿಂದ ಈ ಸಮಸ್ಯೆ ಬಗ್ಗೆ ಮಾತಾಡ್ಲಿಕ್ಕೆ ಹೋಗ್ತಿದಿರಾ, ಭಾರತದ ಸಮಸ್ಯೆಯನ್ನು ಹೊರಗಡೆ ನೀವು ಮಾತಾನಾಡೋದಕ್ಕೆ ಅಥವಾ ರೆಪ್ರಸೆಂಟ್ ಮಾಡೋದಿಕ್ಕೆ ಹೊರಟಿದ್ದಿರಾ. ಇದನ್ನು ಎಲ್ಲರೂ ಸಕಾರಾತ್ಮಕವಾಗಿ ಸ್ವೀಕರಿಸುತ್ತಾರೆ ಎಂದು ನಿಮಗೆ ಅನಿಸಿದೆಯಾ?
ಡಾ.ಕೆ.ಪಿ.ಅಶ್ವಿನಿ: ನಾನು ಇಂಡಿಯಾ ರೆಪ್ರೆಸೆಂಟ್ ಮಾಡಲ್ಲ . ನಾನು ಒಬ್ಬ ಸ್ವತಂತ್ರ ಪರಿಣತಳಾಗಿರುತ್ತೇನೆ. ನಾನು ವಿಶ್ವಸಂಸ್ಥೆಯನ್ನೂ ಪ್ರತಿನಿಧಿಸುವುದಿಲ್ಲ. ಒಬ್ಬ ಸ್ವತಂತ್ರ ತಜ್ಞೆಯಾಗಿ ವಿಶ್ವಸಂಸ್ಥೆಯ ಮಿತಿಗಳನ್ನು ಸಹ ಹೈಲೆಟ್ ಮಾಡಿ ಹೇಳಬಹುದು. ನನ್ನ ಮ್ಯಾಂಡೇಟ್ ಅಲ್ಲಿ ಏನ್ ಬರುತ್ತೆ ಅಂದ್ರೆ ಮುಖ್ಯವಾಗಿ ವರ್ಣಬೇಧ, ರೇಸಿಸಂ, ರೇಶಿಯಲ್ ಡಿಸ್ಕ್ರಿಮಿನೇಶನ್, ಕ್ಸೆನೋಫೋಬಿಯಾಗಳಿರುತ್ತವೆ. ಇದನ್ನು ಜಾತಿ ತಾರತಮ್ಯಕ್ಕೂ ವಿಸ್ತರಿಸಬಹುದು. ನಾನು ಪಿಎಚ್ ಡಿ ಮಾಡುವಾಗ ವಿಶ್ವಸಂಸ್ಥೆಯ ರಾಯಭಾರಿಯೊಬ್ಬರು ಈ ವಿಷಯವನ್ನು ಅಲ್ಲಿ ಗುರುತಿಸಿ ಹೇಳಿರುವ ಕುರಿತು ಓದಿದ್ದೆ. ದಲಿತರು ಹೇಗೆ ತಾರತಮ್ಯಕ್ಕೊಳಗಾಗುತ್ತಾರೆ ಎಂಬ ಸಂಗತಿಗಳನ್ನು ಅವರು ದಾಖಲಿಸಿದ್ದರು. ಅದೇ ರೀತಿ ಅದನ್ನು ಹೈಲೈಟ್ ಮಾಡಿ ಜನಾಂಗೀಯ ತಾರತಮ್ಯ ಎಷ್ಟು ಮುಖ್ಯವಾದದ್ದು ಎಂದು ತಿಳಿಸುವ ರೀತಿಯಲ್ಲಿ ಭಾರತದ ಪ್ರತಿನಿಧಿಗಳು ಪ್ರೊಆಕ್ಟೀವ್ ಆಗಿ ಇನ್ವಾಲ್ವ್ ಅಗಿದಾರೆ. ಈಗಿರೋ ಟೆಕ್ನಾಲಾಜಿಕಲ್ ಅಡ್ವಾನ್ಸ್ಮೆಂಟ್ನಲ್ಲಿ ಯಾವ ಮೂಲೇಲಿ ಏನು ನಡೆಯುತ್ತೆ ಅಂತ ಎಲ್ಲರಿಗೂ ಗೊತ್ತಾಗುತ್ತೆ. ಅದನ್ನು ಎಷ್ಟು ಮುಚ್ಚಿಟ್ಟರೂ ಮುಚ್ಚಿಡೋ ಅಂತ ಸ್ಥಿತಿ ಇಲ್ಲ ಈಗ. ಎಲ್ಲರೂ ಮಾತಾಡ್ತಾರೆ. ಮಾತಾಡ್ಲೇ ಬೇಕಾಗಿದೆ ಈಗ.
ಪೀಪಲ್ ಮೀಡಿಯಾ: ಕ್ಸೆನೋಪೋಭಿಯಾದ ಬಗ್ಗೆ ಹೇಳಿದ್ರಿ, ಒಂದು ದೇಶದವರು ಮತ್ತೊಂದು ದೇಶದವರ ಮೇಲೆ ತೋರುವ ದ್ವೇಷ- ಇದರ ಬಗ್ಗೆ ನಿಮ್ಮ ಅನಿಸಿಕೆ ಏನು ? ಇದು ಬೇರೆ ಕಡೆಗಳಲೆಲ್ಲಾ ಹೇಗಿದೆ?
ಡಾ.ಕೆ.ಪಿ.ಅಶ್ವಿನಿ: ಹೆಚ್ಚಾಗಿ ಡಯಾಸ್ಪೋರಾ ಕಮ್ಯೂನಿಟಿ, ಅನಿವಾಸಿ ಪ್ರಜೆಗಳು ಇರುವ ಕಡೆ ಇದನ್ನು ಕಾಣುತ್ತೇವೆ. ತುಂಬಾ ಕಡೆ ಏಷಿಯನ್ನರನ್ನು ತಾರತಮ್ಯದಿಂದ ನೋಡಲಾಗತ್ತೆ. ಯುರೋಪ್ನಲ್ಲಾಗಲೀ, ನಾರ್ತ್ ಅಮೇರಿಕಾದಲ್ಲಾಗಲಿ ಏಷಿಯನ್ಸ್ ನ ಡಿಸ್ಕ್ರಿಮಿನೇಟ್ ಮಾಡೋದೊಂದು ರೀತಿ ಜನಾಂಗೀಯ ತಾರತಮ್ಯದ ರೀತಿ. ನನ್ನ ಮ್ಯಾಂಡೇಟ್ ನಲ್ಲಿ ಅದು ಒಂದು ಭಾಗ. ಹೇಗೆ ಮುಸ್ಲಿಂ ಸಮುದಾಯಗಳು, ಅಲ್ಪಸಂಖ್ಯಾತ ಸಮುದಾಯಗಳು ತಾರತಮ್ಯಕ್ಕೆ ಒಳಗಾಗುತ್ತವೆ ಎಂದು ನೋಡುವುದು. ನನಗಿಂತ ಮೊದಲಿದ್ದ ಸ್ಪೆಶಲ್ ರಾಪೋರ್ಟರ್ ಮಾಡಿದ್ದ ಒಂದು ವರದಿಯಲ್ಲಿ ಹೇಗೆ ವಲಸಿತ ಸಮುದಾಯಗಳ ಮೇಲೆ ತಾರತಮ್ಯ ಎಸಗಲಾಗಿದೆ ಎಂದು ತಿಳಿಸಿದ್ದರು. ಒಂದು ದೇಶದಿಂದ ಮತ್ತೊಂದು ದೇಶಕ್ಕೆ ವಲಸೆ ಹೋಗಿ ಜೀವನಾವಕಾಶಗಳನ್ನು ಹುಡುಕುವ ಸಮುದಾಯಗಳಿರುತ್ತವೆ. ಇಂತಹ ವಲಸಿಗರನ್ನು ಬೇರೆ ರೀತಿಯಾಗಿ ನೋಡುವುದು ಕೂಡಾ ಜನಾಂಗೀಯ ತಾರತಮ್ಯದ ಒಂದು ರೀತಿ. ಇದು ತುಂಬಾ ಮುಖ್ಯ . ಈಗ ಓದೋದಿಕ್ಕೆ ಅಂತ ತುಂಬಾ ಜನ ಹೋಗ್ತಾರೆ. ಭಾರತೀಯ ವಿದ್ಯಾರ್ಥಿಗಳು ಎಲ್ಲಾ ಕಡೆ ಇದ್ದಾರೆ. ಅವರಿಗೆ ಈ ಜನಾಂಗೀಯ ತಾರತಮ್ಯ ಅನುಭವಕ್ಕೆ ಬಂದಿರುತ್ತದೆ. ಜೊತೆಗೆ ಉದ್ಯೋಗಕ್ಕಾಗಿ ತುಂಬಾ ಜನ ಭಾರತೀಯರು ಹೊರದೇಶಗಳಲ್ಲಿದ್ದಾರೆ. ಅಮೆರಿಕ ಮತ್ತು ಎಲ್ಲಾ ದೇಶಗಳಲ್ಲಿ. ನೀವು ವೆಸ್ಟ್ ಏಷಿಯನ್ ದೇಶಗಳಲ್ಲಿ ನೋಡಿದರೆ ಅಲ್ಲಿರುವುದು ವೈಟ್ ಕಾಲರ್ ಜಾಬ್ಸ್ ಅಲ್ಲ. ಬ್ಲೂ ಕಾಲರ್ ಜಾಬ್ಸ್, ಲೇಬರ್ಸ್ ಕಾಲರ್ ಅಲ್ಲಿಯೂ ಇದೆ. ಅವರೆಲ್ಲಾ ಯಾವ ರೀತಿ ಡಿಸ್ಕ್ರಿಮಿನೇಟ್ ಮಾಡ್ತಾರೆ ಅನ್ನೋದರ ಬಗ್ಗೆ ಫೋಕಸ್ ಮಾಡಬಹುದು.
ಪೀಪಲ್ ಮೀಡಿಯಾ: ಕೆಲವು ಬಾರಿ ನಮ್ಮ ದೇಶದಲ್ಲೇ, ನಮ್ಮ ದೇಶದ ಒಂದು ಭಾಗದವರ ತಾರತಮ್ಯ ಆಗುತ್ತೆ. ಉದಾಹರಣೆಗೆ ಈಗ ಈಶಾನ್ಯ ಭಾರತದ ಮಣಿಪುರದಂತಹ ಕಡೆಗಳಿಂದ ಬರುವ ಜನರನ್ನು ಚೈನೀಸ್ ನೇಪಾಳೀಸ್ ಅಂತ ಟ್ರೀಟ್ ಮಾಡ್ತಾರೆ. ಅದೂ ಕೂಡ ಬರುತ್ತಾ ಇದರಲ್ಲಿ?
ಡಾ.ಕೆ.ಪಿ.ಅಶ್ವಿನಿ ಖಂಡಿತಾ. ಅದೂ ಸಹ ಸೇರಿಕೊಳ್ಳುತ್ತದೆ. ಅದೇ ರೇಸಿಸಂ. ನೀವು ಅವರನ್ನು ಒಂದು ರೀತಿ ಕಾಣ್ತೀರಾ ಅನ್ನುವ ಕಾರಣದಿಂದ ಅದು ಇದರಲ್ಲಿ ಸೇರುತ್ತೆ.
ಪೀಪಲ್ ಮೀಡಿಯಾ: ನಿಮಗೆ ಈ ರೀತಿಯ ವಿಷಯಗಳು ಮುಖ್ಯ ಅನ್ನಿಸಲು ಮತ್ತು ನಿಮ್ಮ ಪಿಎಚ್ಡಿ ಅಧ್ಯಯನದಲ್ಲೂ ಇಂತಹ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಕಾರಣವೇನು?
ಡಾ.ಕೆ.ಪಿ.ಅಶ್ವಿನಿ: ನನಗೆ ಚಿಕ್ಕವಳಿಂದ ಸ್ವಲ್ಪ ದಲಿತ್ ಮೂವ್ ಮೆಂಟ್ ಬಗ್ಗೆ ಓರಿಯೆಂಟೇಶನ್ ಮನೆಯಿಂದಲೇ ಸಿಕ್ಕಿದೆ. ನನ್ನ ಪೇರೆಂಟ್ಸ್ನ ಅಕಾಡೆಮಿಕ್ ಓರಿಯೆಂಟೇಶನ್ ನಂಗೆ ಬಹಳ ಸಿಕ್ಕಿದೆ. ಎಸ್ಪೆಶಲಿ ಆಂಟಿ ಕಾಸ್ಟ್ ಮೂವ್ಮೆಂಟ್ ವಿಷಯದಲ್ಲಿ. ಅಂಬೇಡ್ಕರೈಟ್ ಐಡಿಯಾಲಜಿ, ಫಿಲಾಸಫಿ ವಿಷಯಗಳಲ್ಲಿ. ಚಿಕ್ಕವಳಾಗಿದ್ದಾಗಿಂದಲೂ ಈ ರೀತಿಯ ಸೋಶಿಯಲ್ ಇಶ್ಯೂ, ಪೊಲಿಟಿಕಲ್ ಇಶ್ಯೂ ಬಗ್ಗೆ ಓದೋದಿಕ್ಕೆ ಬಹಳ ಆಸಕ್ತಿ ಇತ್ತು. ನಾನು ಮಾಸ್ಟರ್ಸ್ ಥೀಸೀಸ್ ಮಾಡಿದಾಗ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಕ್ಯಾಸ್ಟ್ ಅಂಡ್ ಲ್ಯಾಂಡ್ ರಿಫಾರ್ಮ್ಸ್ ಬಗ್ಗೆ ಮಾಡಿದ್ದೆ. ಸೋ ಅದರಲ್ಲಿ ಜಾತಿ ತಾರತಮ್ಯದ ವಿಷಯವನ್ನು ನನ್ನ ಅಕಾಡೆಮಿಕ್ ಅಧ್ಯಯನ ಮತ್ತು ಆಕ್ಟಿವಿಸಂನಲ್ಲಿ ಸೇರಿಸಿಕೊಳ್ಳಲು ಪ್ರಯತ್ನ ಮಾಡಿದ್ದೆ. ನಮ್ಮ ಫ್ಯಾಮಿಲಿ ಫ್ರೆಂಡ್ಸ್ ತುಂಬಾ ಜನ ದಲಿತ್ ಆಕ್ಟಿವಿಸಂ ನಲ್ಲಿದಾರೆ. ಆರ್ಗನೈಸೇಶನ್ಸ್ ಇದೆ. ಸೋ ನಾನು ವಾಲೆಂಟ್ರಿ ಮಾಡ್ತಿನಿ. ಹೀಗಾಗಿ ನನಗೆ ಒಂದು ನಿಜವಾದ ಕನ್ವಿಕ್ಷನ್ ಇತ್ತು. ಜೊತೆಗೆ ದಮನಿತ ಸಮುದಾಯದಿಂದ ಬಂದಿರೋದ್ರಿಂದ ಒಂದು ಅನುಭವ ಇರುತ್ತದೆ. ಈಗ ನೀವೊಂದು ಶೋಷಿತ ವರ್ಗದಿಂದ ಬಂದಿರ್ತೀರಾ ಅಂದ್ರೆ ಅಥವಾ ನೀವು ಒಂದು ಎಜುಕೇಟೆಡ್, ಅಪ್ಪರ್ ಮಿಡಲ್ ಕ್ಲಾಸ್ ಫ್ಯಾಮಿಲಿಯಿಂದ ಬಂದ್ರೂ ಎಲ್ಲೋ ಒಂದು ಕಡೆ ನಿಮ್ಮನ್ನ ಟಾಂಟ್ ಮಾಡ್ತಾರೆ. ʼಓ ರಿಸರ್ವೇಶನ್ʼ ಅಂತ ಮಾತನಾಡಬಹುದು. ಮೆರಿಟ್ ಅಂತ ಮಾತನಾಡಬಹುದು. ಇಂತದನ್ನೆಲ್ಲಾ ನೋಡಿ ನನಗೆ, ಇಟ್ಸ್ ಇಂಪಾರ್ಟೆಂಟ್ ಟು ಸ್ಪೀಕ್ ಅಬೌಟ್ ದೀಸ್ ಇಶ್ಯೂಸ್ ಅನಿಸಿತು. ಅದರಲ್ಲೂ ಒಂದು ಎಜುಕೇಟೆಡ್ ಫ್ಯಾಮಿಲಿಯಿಂದ ಬಂದಾಗ, ಒಂದು ಬ್ಯಾಕಪ್ ಇದ್ದಾಗ, ಒಂದು ಸೋಶಿಯಲ್ ಕ್ಯಾಪಿಟಲ್ ಇದ್ದಾಗ ಕಮ್ಯೂನಿಟಿಯಲ್ಲಿ ಇರೋರಿಗೆ ಅಸರ್ಟೀವ್ ಆಗಿ ಮಾತಾಡುವ ಅವಶ್ಯಕತೆ ಇದೆ ಅಂತ ಅನಿಸಿತು. ಅಂಡ್ ಐ ಟೇಕ್ ಇನ್ಸ್ಪಿರೇಶನ್ ಬೈ ಬಾಬಾಸಾಹೇಬ್ಸ್ ಫಿಲಾಸಫಿ. (ಬಾಬಾಸಾಹೇಬರ ತತ್ವಸಿದ್ಧಾಂತದಿಂದ ನಾನು ಪ್ರೇರಣೆ ಸ್ಪೂರ್ತಿ ಪಡೆಯುತ್ತೇನೆ)
ಪೀಪಲ್ ಮೀಡಿಯಾ: ನಿಮ್ಮ ರೀತಿ ಯೋಚನೆ ಮಾಡೋರು ತುಂಬಾ ಕಡಿಮೆ ಇದಾರೆ. ಸಾಮಾನ್ಯವಾಗಿ ದಲಿತ ಮತ್ತಿತರ ತುಳಿತಕ್ಕೊಳಗಾದ ಸಮುದಾಯಗಳಿಗೆ ಹೊರಗಡೆ ತಮ್ಮ ಬಗ್ಗೆ, ತಮ್ಮ ಜಾತಿಯ ಬಗ್ಗೆ ಹೇಳಿಕೊಳ್ಳೋದಿಕ್ಕೆ ಹಿಂಜರಿಕೆ ಇರುತ್ತೆ. ಅಥವಾ ಅವರಲ್ಲಿ ಕೀಳರಿಮೆ ಇರಬಹುದು. ಈ ರೀತಿಯ ಸಮಸ್ಯೆಯನ್ನು ನೀವು ಹೇಗೆ ನೋಡ್ತಿರಾ?
ಡಾ.ಕೆ.ಪಿ.ಅಶ್ವಿನಿ: ಈ ಪ್ರಶ್ನೆಯನ್ನು ತುಂಬಾ ಜನ ಕೇಳ್ತಾರೆ. ನಾನು ವಿದ್ಯಾರ್ಥಿಯಾಗಿದ್ದಾಗ, ಫ್ಯಾಕಲ್ಟಿಯಾಗಿ ಪಾಠ ಮಾಡುವಾಗ, ಯೂನಿವರ್ಸಿಟಿಯಲ್ಲಿರುವಾಗ ಈ ಪ್ರಶ್ನೆ ಬಂದಿದೆ. ಕೆಲವರಿಗೆ ಸೋಶಿಯಲ್ ಕ್ಯಾಪಿಟಲ್ ಇರುತ್ತೆ. ಈಗ ನನಗೆ ಒಂದು ಸರ್ಟನ್ ಪ್ರಿವಿಲೈಜ್ಡ್ ಸೋಶಿಯಲ್ ಕ್ಯಾಪಿಟಲ್ ಇದೆ. ಧೈರ್ಯವಾಗಿ, ಅಸರ್ಟೀವ್ ಆಗಿ ಮಾತಾಡುವ ಸ್ಪೇಸ್ ಇದೆ. ನಂಗೆ ಆ ಓರಿಯೆಂಟೇಶನ್ ಸಿಕ್ಕಿದೆ. ನಾನು ಅದಕ್ಕೆ ತುಂಬಾ ಲಕ್ಕಿ. ನಾನು ಯಾವತ್ತೂ ನನ್ನ ಐಡೆಂಟಿಟಿಯನ್ನು ಹೇಳ್ಕೋಳೋದ್ರಲ್ಲಿ ಹಿಂಜರಿದಿಲ್ಲ. ಆದರೆ ಆದೇ ವೇಳೆಗೆ ನಾನು ಎಲ್ಲರಿಗೂ ನೀವು ಐಡೆಂಟಿಟಿಯನ್ನ ಹೇಳಿಕೊಳ್ಳಿ ಎಂದೂ ಹೇಳೋಕಾಗಲ್ಲ ಅನ್ನೋದನ್ನೂ ಗುರುತಿಸಿಕೊಂಡಿದ್ದೇನೆ. ಕೆಲವರು ಹಣಕಾಸು ಸ್ಥಿತಿ, ಸಾಮಾಜಿಕ ಸ್ಥಿತಿಗತಿ ಇತ್ಯಾದಿ ಕಾರಣದಿಂದ ತಮ್ಮ ಜಾತಿ ಬಗ್ಗೆ ಹೇಳ್ಕೊಳೋಕೆ ಆಗದೇ ಇರಬಹುದು. ನಾನು ಅವರನ್ನು ದೂರುವುದಿಲ್ಲ. ಇದಕ್ಕೆ ಕೀಳರಿಮೆ ಅಂತ ಹೇಳುವುದಕ್ಕಿಂತಲೂ ಅವರು ಹೇಳ್ಕೊಂಡಾಗ ಒಂದು ಪ್ರಿವಿಲೈಜ್ಡ್ ಕಮ್ಯೂನಿಟಿಯಿಂದ ಬರುವಂತಹ ಪ್ರತಿಕ್ರಿಯೆಗಳಿಗೆ ಅಂಜಿ ಅವರು ಹೇಳಿಕೊಳ್ಳದೇ ಇರಬಹುದು. ಆದರೆ ನಾನು ಯಾವಾಗಲೂ ಹೇಳುವುದೇನೆಂದರೆ ಅಕಡೆಮಿಕ್ಸ್ನಲ್ಲಿ, ಬ್ಯೂರೋಕ್ರಸಿಯಲ್ಲಿ ಅಥವಾ ರಾಜಕಾರಣದಲ್ಲಿ ಇರುವ ಎಜುಕೇಟೆಡ್ ಕ್ಲಾಸ್ ಧೈರ್ಯದಿಂದ ತಮ್ಮ ಐಡೆಂಟಿಟಿಯನ್ನು ಅಸರ್ಟೀವ್ ಆಗಿ ಹೇಳ್ಕೊಳ್ಳಬಹುದು. ಅವರು ಅಂಬೇಡ್ಕರ್ವಾದದ ಬಗ್ಗೆ , ಬಾಬಾಸಾಹೇಬರ ಫಿಲಾಸಫಿ ಬಗ್ಗೆ, ತಮ್ಮ ಐಡೆಂಟಿಟಿ ಬಗ್ಗೆ ಹೇಳ್ಕೊಬಹುದು. ಸೋ ಐ ಫೀಲ್ ದಟ್ ಎಜುಕೇಟೆಡ್ ಕ್ಲಾಸ್ ಅಟ್ಲೀಸ್ಟ್ ಶುಡ್ ಬಿ ಅಸರ್ಟೀವ್.
ಪೀಪಲ್ ಮೀಡಿಯಾ: ಇತ್ತೀಚೆಗೆ 15-20 ವರ್ಷಗಳಿಂದ ನಾವು ಅಂಬೇಡ್ಕರ್ ಬಗ್ಗೆ ಹೆಚ್ಚು ಮಾತಾಡ್ತಾ ಇದೀವಿ. ನಿಮಗೆ ಅಂಬೇಡ್ಕರ್ ಚಿಂತನೆ ಯಾವ ರೀತಿ ಪ್ರೇರಣೆ ನೀಡಿದೆ ಅಥವಾ ಇಂದು ಅಂಬೇಡ್ಕರ್ ಅವರ ಪಾತ್ರ ಏನು?
ಡಾ.ಕೆ.ಪಿ.ಅಶ್ವಿನಿ: ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ನಾನು ಒಬ್ಬ ಆದರ್ಶ ವ್ಯಕ್ತಿಯಾಗಿ ನೋಡುತ್ತೇನೆ. ಯಾಕಂದ್ರೆ ನಾನು ಚಿಕ್ಕವಳಿದ್ದಾಗಿನಿಂದಲೂ ಮನೇಲಿ ಬಾಬಾಸಾಹೇಬರ ಕಥೆಗಳನ್ನು ಕೇಳಿಕೊಂಡು ಬೆಳೆದಿರೋದು. ಅದು ಯಾವ ರೀತಿ ನನ್ನ ಮೇಲೆ ಪ್ರಭಾವ ಆಗಿದೆ ಅಂದ್ರೆ, ಇಟ್ಸ್ ರಿಯಲಿ ಇಂಪಾರ್ಟೆಂಟ್ ಲೈಕ್… ಯು ಕೆನಾಟ್ ಡಿಸ್ಮಿಸ್ ಬಾಬಾಸಾಹೇಬ್ ಅಂಬೇಡ್ಕರ್ ಫ್ರಂ ಅಕಾಡೆಮಿಕ್ಸ್, ಆಕ್ಟಿವಿಸಂ, ಈವನ್ ಇನ್ ಡೈಲಿ ಲೈಫ್ ಸಿಚುಯೇಶನ್. 20 ವರ್ಷದಿಂದ ಅನ್ನೋದಕ್ಕಿಂತ 1950ರ ದಶಕದಿಂದಲೂ ಅವರು ಯಾವಾಗ ಸೋಶಿಯಲ್ ಮೂವ್ಮೆಂಟ್ನ ಮೈನ್ಸ್ಟ್ರೀಮ್ ಗೆ ತಂದ್ರೋ ಆಗ್ಲಿಂದ ಬಾಬಾ ಸಾಹೇಬ್ ಬಗ್ಗೆ ಎಲ್ಲಾ ಕಡೆ ಮಾತನಾಡಿದಾರೆ.
ಪೀಪಲ್ ಮೀಡಿಯಾ: ನಿಜ, ದಲಿತ್ ಮೂವ್ಮೆಂಟ್ಸ್ ಆ ಕೆಲಸವನ್ನು ಮೊದಲಿಂದಲೂ ಮಾಡ್ತಾನೇ ಇವೆ. ಆದರೆ ದಲಿತೇತರರು ಅಥವಾ ಜನರಲ್ ಪಬ್ಲಿಕ್, ಅಥವಾ ಪಬ್ಲಿಕ್ ಇಂಟಲೆಕ್ಚುಯಲ್ಸ್, ಲೆಫ್ಟ್ ಐಡಿಯಾಲಜಿ ಇರುವಂತವರು ಕೂಡ ಅಂಬೇಡ್ಕರ್ ಬಗ್ಗೆ ಮಾತಾಡ್ತಿರೋದು ತೀರಾ ಇತ್ತೀಚೆಗೆ.
ಡಾ.ಕೆ.ಪಿ.ಅಶ್ವಿನಿ: ನಿಜ ಸರ್.. ಈಗ ಯಾವ ಕಂಡೀಷನ್ ಗೆ ಬಂದಿದೆ ಅಂದ್ರೆ ಒಂದು ಕ್ಲಾಸ್ ಕ್ರಿಯೇಟ್ ಆಗಿದೆ. ದಲಿತ ಸಮುದಾಯದೊಳಗೇ ಒಂದು ವರ್ಗ. ಅವರಲ್ಲಿ ಬಹಳ ಜನ ಅಸರ್ಟಿವ್ ಆಗಿ ದಲಿತ್ ಇಶ್ಯೂಸ್ ಬಗ್ಗೆ ಮಾತಾಡ್ತಾರೆ. ನಾನು ವಿದ್ಯಾರ್ಥಿ ಚಳವಳಿಯಲ್ಲಿದ್ದೆ. ಜೆ ಎನ್ ಯುನಲ್ಲಿ ನಾನು ಯುನೈಟೆಡ್ ದಲಿತ್ ಸ್ಟೂಡೆಂಟ್ಸ್ ಫ್ರಂಟ್ ನ ಭಾಗವಾಗಿದ್ದೆ . ಸೋ ದಲಿತ್ ಆಕ್ಟಿವಿಸಂ, ಸ್ಟೂಡೆಂಟ್ ಆಕ್ಟಿವಿಸಂನಲ್ಲಿ ತುಂಬಾ ಅಸರ್ಟೀವ್ ಆಗಿ, ಆಕ್ಟೀವ್ ಆಗಿ ಕ್ಯಾಂಪಸ್ ಗಳಲ್ಲಿವೆ. ಸೋ ನಾವು ಕ್ಯಾಸ್ಟ್ ಬಗ್ಗೆ, ಡಿಸ್ಕ್ರಿಮಿನೇಶನ್ ಬಗ್ಗೆ ಮಾತಾಡಿದಾಗ, ಸಂವಿಧಾನದ ಬಗ್ಗೆ ಮಾತಾಡಿದಾಗ ಅದರ ಸಿದ್ಧಾತಗಳು ಲೆಫ್ಟ್ ಆಗಲೀ, ಮತ್ಯಾವುದೇ ರಾಜಕೀಯ ಪಕ್ಷಗಳಾಗಲಿ ಯಾರೂ ಇಂದು ಅಂಬೇಡ್ಕರ್ ಅವರನ್ನು ಕಡೆಗಣಿಸಲು ಆಗದಂತಹ ಪರಿಸ್ಥಿತಿ ಬಂದೊದಗಿದೆ. ಈಗ ಅವರಿಗೆ ಬಾಬಾಸಾಹೇಬರ ಬಗ್ಗೆ ಮಾತಾಡಲೇ ಬೇಕು. ಅದೇನೋ ಮಾತಾಡಲೇಬೇಕು ಅಂತಲ್ಲ. ಅಂಬೇಡ್ಕರ್ ನೀಡಿರುವ ಕೊಡುಗೆಗಳು ಹಾಗಿವೆ. ಒಂದು ಸಂವಿಧಾನದಿಂದ ಹಿಡಿದು ಪಾಲಿಸಿ ಮೇಕಿಂಗ್ ಆಗಲೀ, ಯಾವ ರೀತಿ ಒಂದು ಡೆಮೋಕ್ರಟಿಕ್ ಸ್ಟೇಟ್ ಆಪರೇಟ್ ಮಾಡಬೇಕು, ಹೇಗೆ ಫಂಕ್ಷನ್ ಮಾಡಬೇಕು ಇವುಗಳನ್ನೆಲ್ಲಾ ಯಾವುದೇ ಸಿದ್ಧಾಂತ ಇರುವ ಯಾವುದೇ ರಾಜಕೀಯ ಪಕ್ಷವೂ ಇಗ್ನೋರ್ ಮಾಡಲು ಸಾಧ್ಯವಿಲ್ಲ. ಅಕಾಡೆಮಿಕ್ ಆಗ್ಲಿ, ಆಕ್ಟಿವಿಸಂ ಆಗ್ಲಿ, ಬಾಬಾಸಾಹೇಬರ ಫಿಲಾಸಫಿ ಈ ಜಂಕ್ಚರ್ ಗೆ ಎಷ್ಟು ಇಂಪಾರ್ಟೆಂಟ್ ಇದೆ ಅನ್ನೋದನ್ನ ಸಿದ್ಧಾಂತಗಳ ಆಚೆಗೂ ಯಾರೂ ಕಡೆಗಣಿಸಲು ಸಾಧ್ಯವಿಲ್ಲ.
ಪೀಪಲ್ ಮೀಡಿಯಾ: ನೀವು ಈಗ ಈ ಹುದ್ದೆಗೆ ಅಪಾಯಿಂಟ್ ಆಗಿದ್ದೀರಾ… ನಿಮ್ಮಿಂದ ನಾವೆಲ್ಲಾ ಯಾವ ನಿರೀಕ್ಷೆ ಇಟ್ಟುಕೊಳ್ಳಬಹುದು?
ಡಾ.ಕೆ.ಪಿ.ಅಶ್ವಿನಿ: ಇದು ಬಹುದೊಡ್ಡ ಹೊಣೆಗಾರಿಕೆ. ಯಾವುದೇ ಒಂದೇ ದೇಶದ ಮೇಲೆ ಫೋಕಸ್ ಮಾಡಲ್ಲ. ಗ್ಲೋಬಲಿ ಐ ವುಡ್ ಬಿ ಫೋಕಸಿಂಗ್ ಆನ್ ಡಿಫರೆಂಟ್ ಇಶ್ಯೂಸ್ ಅಂಡ್ ಡಿಫರೆಂಟ್ ಕಂಟ್ರೀಸ್. ನಿಮಗೇ ಗೊತ್ತು ರೇಸಿಸಂ ಅಂದ್ರೆ ಜಸ್ಟ್ ರೇಸಿಸಂ ಅಲ್ಲ. ಅದ್ರಲ್ಲಿ ಬೇರೆ ಬೇರೆ ಇಶ್ಯೂಸ್ ಇರತ್ತೆ. ಕ್ಸೆನೋಫೋಬಿಯಾ ಅಂದರೆ ಪ್ರಾಯಶಃ ಇಂಡಿಯಾದಲ್ಲಿ ಬೇರೆ ತರ ಇರುತ್ತೆ ಶ್ರೀಲಂಕಾದಲ್ಲಿ ಬೇರೆ ಇರುತ್ತೆ. ಅಮೆರಿಕದಲ್ಲಿ ಬೇರೆ ರೀತಿಯಾಗಿರುತ್ತದೆ. ಆದರೆ ನಾನು ಯಾವಾಗಲೂ ಗಮನ ನೀಡುವ ಒಂದು ಮುಖ್ಯ ವಿಷಯ ಅಂದರೆ ಜೆಂಡರ್. ರೇಸಿಸಂ ಇರಲಿ, ಜಾತಿ ತಾರತಮ್ಯ ಇರಲಿ, ಕ್ಸೆನೋಫೋಬಿಯಾ ಇರಲಿ, ಅದರಲ್ಲಿ ಜೆಂಡರ್ ಹೇಗೆ ಕೆಲಸ ಮಾಡುತ್ತದೆ ಎಂದು ಗುರುತಿಸಿರುವುದು ಕಡಿಮೆ. ಬಟ್ ರೇಸಿಸಂ ಅಂತ ಬಂದಾಗ ಜೆಂಡರ್ ನಲ್ಲಿ ರೇಸಿಸಂ ಹೇಗೆ ಅಪ್ಲೈ ಅಗತ್ತೆ ಅಂತ. ಒಂದು ವುಮೆನ್, ಎಲ್ಜಿಬಿಟಿಕ್ಯೂ ಕಮ್ಯೂನಿಟಿ ಆಗ್ಲಿ, ಅವರ ಮೇಲೆ ರೇಸಿಸಂ ನ ಟ್ರಿಪಲ್ ಡಿಸ್ಕ್ರಿಮಿನೇಶನ್ ಇರತ್ತೆ, ಮಲ್ಟಿಲೇಯರ್ಸ್, ಇಂಟರ್ಸೆಕ್ಷಾನಾಲಿಟಿ ಇರುತ್ತೆ. ಆ ವಿಷಯಾನ ಹೈಲೈಟ್ ಮಾಡಬೇಕು ಅಂತ ನಂಗೆ ತುಂಬಾ ಇಂಟರೆಸ್ಟ್ ಇದೆ.
ಪೀಪಲ್ ಮೀಡಿಯಾ: ನೀವು ಹೇಳಿದ ಜೆಂಡರ್ ಇಂಟರ್ ಸೆಕ್ಷನಾಲಿಟಿ ಆಫ್ರಿಕನ್ಸ್ ಅಮೇರಿಕನ್ಸ್ ಡಿಸ್ಕೋರ್ಸ್ನಲ್ಲಿ ಬಹಳ ಮುಖ್ಯವಾಗಿ ಬಂದಿದೆ. ಕೆಲವು ಜನಪ್ರಿಯ ಸಿನಿಮಾಗಳು ಸಹ ಇದನ್ನು ಮುನ್ನೆಲೆಗೆ ತಂದಿವೆ. ಉದಾಹರಣೆಗೆ ಕಲರ್ ಪರ್ಪಲ್. ಆದರೆ ಇಂಡಿಯಾದಲ್ಲಿ ಒಂದೋ ಜೆಂಡರ್ ನೋಡ್ತೀವಿ ಇಲ್ವೇ ಕ್ಯಾಸ್ಟ್ ಇಶ್ಯೂ ನೋಡ್ತಿವಿ. ಜೆಂಡರ್ ಮೂವ್ಮೆಂಟ್ಸ್ ಇದೆ ಅಥವಾ ಕ್ಯಾಸ್ಟ್ ಮೂವ್ಮೆಂಟ್ಸ್ ಇದೆ. ಆದರೆ ಅವೆರಡನ್ನೂ ಬ್ಲೆಂಡ್, ಮಾಡೋ ರೀತಿಯಲ್ಲಿ ಜೆಂಡರ್ ಒಳಗೆ ಕ್ಯಾಸ್ಟ್ ಇಶ್ಯೂ ಅಥವಾ ಕ್ಯಾಸ್ಟ್ ಒಳಗೆ ಜೆಂಡರ್ ಇಶ್ಯೂನ ನೋಡೋ ಅಂತಹ ಬ್ಯಾಲೆನ್ಸ್ ಇಲ್ಲ ಅಂತ ಅನಿಸುತ್ತೆ ನನಗೆ. ಇದರ ಬಗ್ಗೆ ನಿಮ್ಮ ಅನಿಸಿಕೆ?
ಡಾ.ಕೆ.ಪಿ.ಅಶ್ವಿನಿ: ಕಂಪ್ಲೀಟ್ಲಿ ಇಲ್ಲ ಅಂತ ಹೇಳೋಕಾಗಲ್ಲ. ಬಟ್ ಅದಕ್ಕೆ ಸ್ಪೇಸ್ ಸ್ವಲ್ಪ ಲಿಮಿಟೆಟ್ ಆಗಿದೆ ಅದನ್ನು ಹೇಳ್ತಿನಿ. ಟ್ವೆಂಟಿಯತ್ ಸೆಂಚುರಿಯಿಂದ ತಗೊಂಡ್ರೆ ಮೂವ್ಮೆಂಟ್ನಲ್ಲಿ ದಲಿತ್ ಕಮ್ಯೂನಿಟಿಯ ಬಹಳ ಹೆಣ್ಣು ಮಕ್ಕಳ ರೆಪ್ರೆಸೆಂಟೇಶನ್ ಕಾಣಬಹುದು. ಬಾಬಾ ಸಾಹೇಬರ ಮೂವ್ಮೆಂಟ್ ನಡೀಬೇಕಾದ್ರೆ ಕಾಳಾರಾಂ ದೇವಸ್ಥಾನ ಎಂಟ್ರಿಯಿಂದ ಹಿಡಿದು ಹಲವು ಚಳವಳಿಗಳಲ್ಲಿ ಕಮ್ಯುನಿಟಿ ಹೆಣ್ಣು ಮಕ್ಕಳು ತುಂಬಾ ಪ್ರೋಆಕ್ಟೀವ್ ಆಗಿ ಪಾರ್ಟಿಸಿಪೇಟ್ ಮಾಡಿದಾರೆ. ಅಲ್ಲದೇ ಬೇಬಿತಾಯಿ ಕಾಂಬ್ಳೆ, ಶಿವಗಾಮಿ, ಆಗ್ಲಿ ಬೇರೆ ಬೇರೆ ದಲಿತ್ ರೈಟರ್ಸ್, ಬಾಮಾ ಇವರೆಲ್ಲರೂ ದಲಿತ್ ವಿಮೆನ್ ಎಕ್ಸಪೀರಿಯನ್ಸ್ ನ ತುಂಬಾ ಆರ್ಗನಿಕ್ ಆಗಿ ಹೇಗಿದೆಯೋ ಹಾಗೆ ಬರೆದಿದ್ದಾರೆ. ಈಗ ಇರೋ ಪರಿಸ್ಥಿತಿಯಲ್ಲಿ ಜೆಂಡರ್ ನ ಸಂಪೂರ್ಣ ಇಗ್ನೋರ್ ಮಾಡಿದಾರೆ ಅಂತ ಹೇಳಲ್ಲ ನಾನು. ದಲಿತ್ ಮೂವ್ಮೆಂಟ್ ಅಲ್ಲಿ ಜೆಂಡರ್ ಮಾತಾಡ್ತಿದಾರೆ.
ಪೀಪಲ್ ಮೀಡಿಯಾ: ಚಳವಳಿಯಲ್ಲಿ ಆ ರೀತಿ ಆಗಿದ್ದಿದೆಯಾ?
ಡಾ.ಕೆ.ಪಿ.ಅಶ್ವಿನಿ: ಮಹಾರಾಷ್ಟ್ರದಲ್ಲಿ, ಕರ್ನಾಟಕದಲ್ಲೂ ತುಂಬಾ ಕಡೆ ನೋಡಿದರೆ ಒಂದು ದಲಿತ್ ಫೆಮಿನಿಸಂ ಅನ್ನೋ ಕಾನ್ಸೆಪ್ಟೇ ಬಂದಿದೆ. ಬೇಬಿತಾಯಿ ಕಾಂಬ್ಳೆ ಅವರು ತುಂಬಾ ವರ್ಷದ ಹಿಂದೆಯೇ ಬರೆದಿದ್ರು. ಅದು ಒಂದು ಅಕಾಡೆಮಿಕ್ ಅಮ್ನೀಶಿಯಾ ಅಂತಾರಲ್ವಾ.. ಹಾಗೆ..
ಪೀಪಲ್ ಮೀಡಿಯಾ: ಕರ್ನಾಟಕದಲ್ಲಿ ಅಷ್ಟು ದೊಡ್ಡ ದಲಿತ್ ಮೂವ್ಮೆಂಟ್ ಆದ್ರೂ ಕೂಡ ಒಬ್ಬ ದಲಿತ್ ವುಮನ್ ರೈಟರ್ ಕಾಣೋದಿಲ್ಲ ಅಲ್ವಾ?
ಡಾ.ಕೆ.ಪಿ.ಅಶ್ವಿನಿ: ಹಾಗೇನಿಲ್ಲ … ಇದಾರೆ ತುಂಬಾ ಜನ…ದು. ಸರಸ್ವತಿ ನೋಡಿ ಅವರು ಬಹಳ ಬರ್ದಿದಾರೆ.
ಪೀಪಲ್ ಮೀಡಿಯಾ: ಅವರು ಇತ್ತೀಚಿನವರು. ದಲಿತ್ ಮೂವ್ ಮೆಂಟ್ ತುಂಬಾ ಉತ್ತುಂಗದಲ್ಲಿದ್ದಾಗ ಆತರದ್ದು ಒಂದು ಆಗ್ಲಿಲ್ಲ ಅಂತ.. ಅಲ್ಲಿ ಇನ್ಕ್ಲೂಶನ್ ಕಡಿಮೇ ಅಂತನಾ?
ಡಾ.ಕೆ.ಪಿ.ಅಶ್ವಿನಿ: ಹಾ ಇರಬಹುದು… ಈಗ ನೀವು ನೋಡಿದರೆ… ಸ್ವಲ್ಪ ಬದಲಾವಣೆ ಆಗಿದೆ… ಅಂಡ್ ಅಟ್ ಸಮ್ ಪಾಯಿಂಟ್ ಆಫ್ ಟೈಮ್ ನೀವು ಬ್ಲಾಕ್ ಮೂವ್ಮೆಂಟ್ ಆಗ್ಲಿ, ದಲಿತ್ ಮೂವ್ಮೆಂಟ್ ಆಗ್ಲಿ ನೋಡಿದ್ರೆ ಅದರ ಪ್ರೈಯಾರಿಟೀಸ್, ಟೈಮ್ ಗೆ ತಕ್ಕಂತೆ ಇದನ್ನ ಅಡ್ರೆಸ್ ಮಾಡೋಣ ಅನ್ನುವ ರೀತಿಯ ಒಂದು ಡೈನಮಿಕ್ಸ್ ಕೂಡಾ ಇರತ್ತೆ. ಬಟ್ ಈಗ್ಲೂ ಕೂಡ ಇಟ್ಸ್ ರಿಯಲಿ ಇಂಪಾರ್ಟೆಂಟ್, ಜೆಂಡರ್ನ ನಾವು ಹೇಗೆ ಅಡ್ರೆಸ್ ಮಾಡಬೇಕು ಅಂತ. ಈಗ ದಲಿತ್ ಅಕಾಡೆಮಿಶಿಯನ್ಸ್ ಇದಾರೆ. ವಿಮೆನ್ ಅಕಾಡೆಮಿಶಿಯನ್ಸ್, ಪೊಲಿಟಿಶಿಯನ್ಸ್ ಇದಾರೆ, ಆಕ್ಟಿವಿಸಂ ಅಲ್ಲಿ ಇದಾರೆ , ಐ ಥಿಂಕ್ ಇಟ್ಸ್ ಹೈ ಟೈಮ್ ದಟ್ ನಾವು ವಿಮೆನ್ ರೆಪ್ರೆಸೆಂಟೇಟಿವ್ಸ್ ಗೆ ಫ್ರಂಟ್ ಆಫ್ ಪ್ಲೇಸ್ ಕೊಡಬೇಕು.
ಪೀಪಲ್ ಮೀಡಿಯಾ: ತುಂಬಾ ಧನ್ಯವಾದಗಳು.
ಸಂದರ್ಶನ: ಹರ್ಷಕುಮಾರ್ ಕುಗ್ವೆ