ಚಿಕ್ಕಬಳ್ಳಾಪುರ: ʼನಾವು ಮತ್ತೆ ಅಧಿಕಾರಕ್ಕೆ ಬಂದರೆ ನಾಡಿನ ಜನತೆಗೆ 10 ಕೆಜಿ ಅಕ್ಕಿಯನ್ನ ಉಚಿತವಾಗಿ ಕೊಡುತ್ತೆವೆʼ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಗೌರಿಬಿದನೂರು ತಾಲೂಕಿನ ವಿಧುರಾಶ್ವತ್ಥದಲ್ಲಿ ಕಾಂಗ್ರೆಸ್ ಪಾದಯಾತ್ರೆಯ ಸಂದರ್ಭದಲ್ಲಿ ಮಾತನಾಡಿದ ಅವರು, ʼಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರಬೇಕಾ?ʼ ಎಂದು ಜನತೆಯನ್ನ ಪ್ರಶ್ನಿಸಿದ್ದು, ಬಿಜೆಪಿ ಅವರು ಬಡವರಿಗೆ ಕೊಟ್ಟ ಅಕ್ಕಿಯನ್ನ ಕಸಿದುಕೊಂಡರು. ಪ್ರತಿಸಲ 7ಕೆಜಿ ಅಕ್ಕಿಯನ್ನ ಉಚಿತವಾಗಿ ಕೊಡುವಂತ ಕೆಲಸವನ್ನು ಸರ್ಕಾರ ಮಾಡಬೇಕಿತ್ತು, ಆದರೆ ಅದನ್ನ ಅವರು ಮಾಡಲಿಲ್ಲ ಎಂದು ಸರ್ಕಾರವನ್ನು ಟೀಕಿಸಿದರು.
ಮುಂದುವರೆದು ಮಾತನಾಡಿದ ಅವರು ನಾವು ಅಧಿಕಾರಕ್ಕೆ ಬಂದರೆ ಎಷ್ಟು ಹಣ ಖರ್ಚಾದರು ಪರವಾಗಿಲ್ಲ, ನಾಡಿನ ಜನತೆಗೆ 10.ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡುತ್ತೆವೆ ಮತ್ತು ನಾಡಿನಲ್ಲಿ ಯಾರೂ ಕೂಡ ಹಸಿದು ಬದುಕಲಾರದ ಹಾಗೆ ನಾವು ಮಾಡಿತೋರಿಸುತ್ತೆವೆ ಎಂದು ಭರವಸೆ ನೀಡಿದರು.