ಬೆಂಗಳೂರು 110 ಹಳ್ಳಿಗಳಿಗೆ ಐದನೇ ಹಂತದ ತುರಳ್ಳಿ ಅರಣ್ಯ ಪ್ರದೇಶದ ಹೊಸಹಳ್ಳಿ ಗ್ರಾಮಕ್ಕೆ ಕುಡಿಯುವ ನೀರಿನ ಹೊಸ ಸಂಪರ್ಕ ಪಡೆದ ಗ್ರಾಹಕರಿಗೆ ಬೆಂಗಳೂರು ಜಲ ಮಂಡಳಿಯ ಅಧ್ಯಕ್ಷರಾದ ರಾಮ್ ಮನೋಹರ್ ಪ್ರಸಾತ್ ಫಲಾನುಭವಿಗಳಿಗೆ ಮೀಟರ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಸಹಾಯಕ ಕಾರ್ಯ ಅಭಿಯಂತರರಾದ ಜಯಪ್ರಕಾಶ್ ಅವರ ಕಾರ್ಯಧ್ಯಕ್ಷತೆಯನ್ನು ಶ್ಲಾಘಿಸಿ, ಫಲಾನುಭವಿಗಳನ್ನು ಉದ್ದೇಶಿಸಿ ಯಾವುದೇ ಮಧ್ಯವರ್ತಿಗಳಿಲ್ಲದೆ ಬಡವರಿಗೆ ನೀರಿನ ಸೌಲಭ್ಯವನ್ನು ಜಲ ಮಂಡಳಿ ಒದಗಿಸಿಕೊಟ್ಟಿದೆ ನೀರನ್ನು ಮಿತವಾಗಿ ಬಳಸಿ ಮತ್ತು ಬಿಲ್ಲನ್ನು ಸರಿಯಾದ ಸಮಯಕ್ಕೆ ಪಾವತಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳಾದ ವೆಂಕಟೇಶ್ ಜೆ ಇ ನಂದೀಶ್ ಉಪಸ್ಥಿತರಿದ್ದರು