ದೆಹಲಿ : ಸುಪ್ರೀಂ ಕೋರ್ಟ್ 500 ಮತ್ತು 1000 ರೂಪಾಯಿಗಳ ಕರೆನ್ಸಿ ನೋಟುಗಳನ್ನು ಅಮಾನ್ಯಗೊಳಿಸಿರುವ ಸಂವಿಧಾನ ಪೀಠ ವಿಚಾರಣೆ ನಡೆಸುವ ಬಗ್ಗೆ ದಿನಾಂಕ ಮುಂದೂಡಿದೆ.
ನವೆಂಬರ್ 9, 2016 ರಂದು ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ₹500 ಮತ್ತು ₹1,000 ನೋಟುಗಳು ಇನ್ನು ಮುಂದೆ ಅಸ್ತಿತ್ವದಲ್ಲಿರುವುದಿಲ್ಲ. ಅದನ್ನು ಯಾವುದೇ ವಹಿವಾಟುಗಳಿಗೆ ಬಳಸಲಾಗುವುದಿಲ್ಲ ಎಂದು ಘೋಷಿಸಿದ್ದರು.
₹500 ಮತ್ತು ₹1,000 ರೂಪಾಯಿಗಳ ಕರೆನ್ಸಿ ನೋಟುಗಳನ್ನು ಅಮಾನ್ಯಗೊಳಿಸಿದ ಕಾರಣ ನಿರ್ಧಾರವನ್ನು ಪ್ರಶ್ನಿಸಿ ಹಲವಾರು ಅರ್ಜಿಗಳು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದರು. ಅರ್ಜಿಗಳ ಕುರಿತು ವಿಚಾರಣೆ ನಡೆಸಲು ಸೆಪ್ಟಂಬರ್ 28ಕ್ಕೆ ನ್ಯಾಯಮೂರ್ತಿ ಅಬ್ದುಲ್ ನಜೀರ್ ನೇತೃತ್ವದಲ್ಲಿ ಬಿ.ಆರ್ ಗವಾಯಿ. ಎಎಸ್ ಬೋಪಣ್ಣ, ವಿ ರಾಮಸುಬ್ರಮಣ್ಯನ್ ಮತ್ತು ಬಿವಿ ನಾಗರತ್ನ ರವರನ್ನು ಒಳಗೊಂಡು ಐವರು ನ್ಯಾಯಾಧೀಶರ ಪೀಠವೂ ರಚನೆಯಾಗಿತ್ತು. ಆದರೆ ಸುಪ್ರೀಂ ಕೋರ್ಟ್ ಇಂದು ನಡೆಯಬೇಕಿದ್ದ ನೋಟು ಅಮಾನ್ಯೀಕರಣಕದ ವಿಚಾರಣೆ ಬಗ್ಗೆ ನಿಗದಿ ಪಡಿಸಿದ ದಿನಾಂಕವನ್ನು ಅಕ್ಟೋಬರ್ 12ಕ್ಕೆ ಮುಂದೂಡಿದೆ.