Saturday, June 21, 2025

ಸತ್ಯ | ನ್ಯಾಯ |ಧರ್ಮ

ಆಪರೇಶನ್‌ ಕಮಲ : TRS ಶಾಸಕರನ್ನು ಖರೀದಿಸುವ ಯತ್ನ : ಮೂವರ ಬಂಧನ

ತೆಲಂಗಾಣ: ತೆಲಂಗಾಣದಲ್ಲಿ TRS ಶಾಸಕರನ್ನು ಬಿಜೆಪಿಯವರು ಖರೀದಿಸಲು ಆಪರೇಶನ್‌ ಕಮಲ ನಡೆಸುತ್ತಿರುವ ಆರೋಪದಡಿ ಹೈದರಾಬಾದ್‌ ಫಾರ್ಮ್‌ಹೌಸ್‌ ಮೇಲೆ ಪೊಲೀಸರು ದಾಳಿ ಮಾಡಿದ್ದು, ಮೂವರನ್ನು ಬಂಧಿಸುದ್ದಾರೆ.

ಗುವಾಲ ಬಾಲರಾಜ್‌, ಭೀರಮ್‌ ಹರ್ಷವರ್ಧನ್‌ ರೆಡ್ಡಿ, ಪೈಲೆಟ್‌ ಹರ್ಷವರ್ಧನ್‌ ರೆಡ್ಡಿ ಮತ್ತು ರೇಗಾಕಾಂತ್‌ ರಾವ್‌ ಈ  ನಾಲ್ವರನ್ನು ಬಿಜೆಪಿ ಪಕ್ಷ ಸೇರಿಕೊಳ್ಳುವ ನೂರು ಕೋಟಿ ಆಫರ್‌ ಕೊಟ್ಟು ಖರೀದಿಸುವ ಪ್ರಯತ್ನ ಮಾಡುತ್ತಿರುವ ಆರೋಪ ಕೇಳಿಬಂದಿದ್ದು ಪೊಲೀಸರು ನೇರದಾಳಿ ಮಾಡಿದ್ದಾರೆ. ಹರಿಯಾಣ, ತಿರುಪತಿ ಮೂಲದ ಸ್ವಾಮಿಗಳು ಮತ್ತು ಹೈದರಾಬಾದ್‌ ಮೂಲದ ಒಬ್ಬ ಹೋಟೆಲ್‌ನ ಉದ್ಯಮಿ ಆಪರೇಶನ್‌ ಕಮಲ ನಡೆಸುತ್ತಿದ್ದು ದೆಹಲಿಯಿಂದ 15 ಕೋಟಿ ಹಣ ತಂದು ನಾಲ್ವರನ್ನು ಬಿಜೆಪಿಗೆ ಖರೀದಿಸುವ ಪ್ರಯತ್ನ ಮಾಡಿದ್ದಾರೆ.

ತೆಲಂಗಾಣದಲ್ಲಿ TRS ಶಾಸಕರನ್ನು ಬಿಜೆಪಿಯವರು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಸಲುವಾಗಿ ಕುದುರೆ ವ್ಯಾಪಾರವನ್ನು ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.  ಪೋಲಿಸರು ಆಪರೇಶನ್‌ ಕಮಲ ಮಾತುಕತೆ ನಡೆಸುತ್ತಿರುವಾಗಲೇ ಪೊಲೀಸರು ಹೈದರಾಬಾದ್‌ ಫಾರ್ಮ್‌ಹೌಸ್‌  ನೇರ ದಾಳಿ ಮಾಡಿದ್ದು, ಮೂವರನ್ನು ಬಂಧಿಸಿ 15 ಕೋಟಿ ರೂಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page