ಬೆಂಗಳೂರು : ಕಾಂಗ್ರೆಸ್ನ ಡರ್ಟಿ ಪಾಲಿಟಿಕ್ಸ್ ಎಂದು ಮಾತನಾಡಿದ್ದ ಸಿಎಂ ಬೊಮ್ಮಾಯಿ ವಿರುದ್ದ ರಾಜ್ಯ ಕಾಂಗ್ರೆಸ್ ಘಟಕ ವಾಗ್ದಾಳಿ ನಡೆಸಿದೆ.
ಈ ಕುರಿತು ಟ್ವೀಟ್ ಮಾಡಿದ ಕಾಂಗ್ರೆಸ್ ಘಟಕ “ಡರ್ಟಿ ಪಾಲಿಟಿಕ್ಸ್ ಯಾರದ್ದು ಬೊಮ್ಮಾಯಿ ಅವರೇ, ಅಂಬೇಡ್ಕರ್ರವರು ಬರೆದ ಸಂವಿಧಾನದ ವಿರುದ್ಧವಾಗಿ ಆಪರೇಷನ್ ಕಮಲ ಮಾಡಿ ಅಸಂವಿಧಾನಿಕ ಸರ್ಕಾರ ರಚಿಸಿದ್ದು, ಮುಂಬೈ ಹೋಟೆಲ್ನಲ್ಲಿಟ್ಟು ಹನಿಟ್ರಾಪ್, ಸಿಡಿ ಮಾಡಿ ಬ್ಲಾಕ್ಮೇಲ್ ಮಾಡಿದ್ದು ಮತ್ತು ಆಪರೇಷನ್ ಕಮಲಕ್ಕೆ ₹1000 ಕೋಟಿ ಖರ್ಚು ಮಾಡಿದ್ದು ಎಲ್ಲವೂ ಏನು? ಬಿಜೆಪಿ ಡರ್ಟಿ ಪಾಲಿಟಿಕ್ಸ್ ಅಲ್ಲವೇ ?” ಎಂದು ಪ್ರಶ್ನಿಸಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಕಿಡಿಕಾರಿದ್ದಾರೆ.