Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ಪೇಸಿಎಂ ಪೋಸ್ಟರ್‌ ವಿವಾದ: ಸಿದ್ದರಾಮಯ್ಯ ಸರಣಿ ಟ್ವೀಟ್

ಪೇಸಿಎಂ ಪೋಸ್ಟರ್‌ ವಿವಾದ: ಸಿದ್ದರಾಮಯ್ಯ ಸರಣಿ ಟ್ವೀಟ್

0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಪೇಸಿಎಂ ಪೋಸ್ಟರ್ ಅಭಿಯಾನವು ಭಾರೀ ಸಂಚಲವನ್ನು ಉಂಟುಮಾಡಿದ್ದು‌, ರಾಜ್ಯ ಸರ್ಕಾರ ತೀವ್ರ ಮುಜುಗರ ಪಟ್ಟುಕೊಳ್ಳುವಂತೆ ಮಾಡಿದೆ. ಈ ಹಿಂದೆ ಪೋಸ್ಟ್‌ ಅಂಟಿಸಿದವರ ವಿರುದ್ದ ಕ್ರಮ ಕೈಗೊಳ್ಳುವಂತೆ ಸರ್ಕಾರ ಪೋಲೀಸರಿಗೆ ಸೂಚಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಪೋಲೀಸರು ಕೆಲವು ಕಾಂಗ್ರೆಸ್‌ ಕಾರ್ಯಕರ್ತರನ್ನು ಬಂಧಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಆರೋಪ ಮಾಡಿತ್ತು.

ಇದರ ಬೆನ್ನಲ್ಲೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಸರಣಿ ಟ್ವೀಟ್‌ ಮಾಡುವ ಮೂಲಕ ರಾಜ್ಯ ಸರ್ಕಾರದ ಆಡಳಿತವನ್ನು ಪ್ರಶನೆ ಮಾಡಿದೆ. ಟ್ವೀಟ್‌ ನಲ್ಲಿ ಅವರು, ಮುಖ್ಯಮಂತ್ರಿಗೆ ಮಸಿ ಬಳಿಯುತ್ತೇವೆ ಎಂದಿದ್ದ ಶ್ರೀರಾಮಸೇನೆಯ ಪುಂಡನೊಬ್ಬನ ಹೇಳಿಕೆಯಿಂದ #PayCM ಗೆ ಅವಮಾನ ಆಗಲಿಲ್ಲವೇ? ಕಾನೂನು ಸುವ್ಯವಸ್ಥೆಗೆ ಸವಾಲು ಹಾಕುವ ಆತನ ವಿರುದ್ಧ ಕ್ರಮ ಕೈಗೊಳ್ಳಲು ತೊಡೆ ನಡುಗುತ್ತದೆಯೇ? ಭ್ರಷ್ಟಾಚಾರದ ಮಹಾಪೋಷಕ @BSBommai ಅವರಿಗೆ ಭ್ರಷ್ಟರ, ಸಮಾಜಘಾತುಕರ ವಿಷಯ ಬಂದಾಗ ದಮ್ಮು ಕೆಮ್ಮು ಬರುವುದೇ? ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನು ಮುಂದುವರೆದು ನನ್ನ ವಿರುದ್ದ ಬಿಜೆಪಿ ಸರ್ಕಾರ ಮಾಡಿರುವ ಆರೋಪದ ಕುರಿತು ಹೇಳಿರುವ ಸಿದ್ದರಾಮಯ್ಯ, @BJP4Karnataka ಪಕ್ಷದವರು ನನ್ನ ವಿರುದ್ಧ ಸ್ಕ್ಯಾಮ್ ರಾಮಯ್ಯ ಎಂಬ ಪುಸ್ತಕ ಹೊರತಂದಿದ್ದಾರೆ. ಈ ಪುಸ್ತಕದಲ್ಲಿರುವ ಯಾವುದಾದರೂ ಒಂದು ಆರೋಪವನ್ನು ಬಿಜೆಪಿಯವರು ಹಿಂದಿನ 3 ವರ್ಷಗಳ ಕಾಲ ಸದನದ ಒಳಗೆ ಅಥವಾ ಸದನದ ಹೊರಗೆ ಪ್ರಸ್ತಾಪ ಮಾಡಿದ್ದಾರ? ಇಲ್ಲ. ಬಿಜೆಪಿ ಅವರ ಆರೋಪ ಶುದ್ದ ಸುಳ್ಳಾಗಿದೆ ಎಂದು ಹೇಳಿದರು. ಬೊಮ್ಮಾಯಿ ಅವರೇ, ನಿಮ್ಮದೇ ಭಾಷೆಯಲ್ಲಿ ಹೇಳುವುದಾದರೆ “ದಮ್ ಇದ್ದರೆ, ತಾಕತ್ ಇದ್ದರೆ” ನಮ್ಮ ಮೇಲೆ ನೀವು ಮಾಡಿರುವ ಆರೋಪ ಮತ್ತು ನಿಮ್ಮ ಸರ್ಕಾರದ ಮೇಲಿನ ನಮ್ಮ ಆರೋಪಗಳ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶ ನೀಡಿ. ನಮ್ಮ ಸರ್ಕಾರದ ಕಾಲದಲ್ಲಿ ಹಗರಣಗಳು ನಡೆದಿದ್ದರೆ ಕೇಂದ್ರದಲ್ಲಿ ಬಿಜೆಪಿಯದ್ದೇ ಸರ್ಕಾರ ಇತ್ತು. ಸಿಬಿಐ, ಇಡಿ, ಐಟಿ ಎಲ್ಲವೂ ಇವರ ಕೈಯಲ್ಲಿಯೇ ಇತ್ತಲ್ಲಾ, ಆಗ ಇವರೇನು ಕತ್ತೆ ಕಾಯುತ್ತಿದ್ರಾ? ಸುಳ್ಳೇ ಬಿಜೆಪಿಯವರ ಮನೆ ದೇವರು. ಸರ್ಕಾರ ಈ ಅವಮಾನದಿಂದ ತಪ್ಪಿಸಿಕೊಳ್ಳಲು ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಎಂದು ಹರಿಹಾಯ್ದರು.

ಇಡೀ ಸರ್ಕಾರವೇ 40% ಕಮಿಷನ್‌ಗಾಗಿ ಲಜ್ಜೆಗೆಟ್ಟು ಕೈಚಾಚುವಾಗ ಅಡ್ಡಿಯಾಗದ ಸ್ವಾಭಿಮಾನ #PayCM ಪೋಸ್ಟರ್ ಕಂಡಾಗ ಮಾತ್ರವೇಕೆ? ಗೋಡೆಗಳಿಗೆ ಅಂಟಿಸಿದ ಭಿತ್ತಿಚಿತ್ರವನ್ನು ನೀವು ಹರಿದು ಹಾಕಬಹುದು ಆದರೆ ನಿಮ್ಮ ದುರಾಡಳಿದ ಬಗೆಗಿನ ಆಕ್ರೋಶವನ್ನು ಜನರ ಮನದಿಂದ ಅಳಿಸಿಹಾಕಲು ಸಾಧ್ಯವಿಲ್ಲ ನಮ್ಮ ಸರ್ಕಾರದ ಕಾಲದಲ್ಲಿ 35,000ಕ್ಕೂ ಮಿಕ್ಕಿ ಪೊಲೀಸ್ ಸಿಬ್ಬಂದಿಗಳ ನೇಮಕಾತಿ ಮಾಡಿದ್ದೆವು. ಇದನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳೇ ಶ್ಲಾಘಿಸಿದ್ದರು. ಇದಕ್ಕಾಗಿ ಇಂಡಿಯನ್ ಛೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ವಿಶೇಷ ಪ್ರಶಸ್ತಿ ನೀಡಿತ್ತು ಎಂದು ಸಿದ್ದರಾಮಯ್ಯನವರು ಹೇಳಿದರು.

ಈ ಬಾರಿ ವಿಧಾನಸಭೆಯಲ್ಲಿ ನಮಗೆ ಮಾತನಾಡಲು ಅವಕಾಶ ನೀಡಿಲ್ಲ. ಇದನ್ನು ಇಲ್ಲಿಗೆ ಬಿಡಲ್ಲ. ಈಗಾಗಲೇ 40% ಕಮಿಷನ್ ಕುರಿತು ಅಭಿಯಾನ ಆರಂಭ ಮಾಡಿದ್ದೇವೆ. ಜನರ ಬಳಿಗೆ ಹೋಗಿ ಸತ್ಯ ಹೇಳುತ್ತೇವೆ. ಜನ ಮುಂದಿನ ಚುನಾವಣೆಯಲ್ಲಿ ತೀರ್ಮಾನ ಕೈಗೊಳ್ಳುತ್ತಾರೆ. ಈ ಹಿಂದಿನ 12 ಮಂದಿ ಶಿಕ್ಷಕರ ಅಕ್ರಮ ನೇಮಕಾತಿ ಬಗ್ಗೆ ಶಾಸಕ ರಾಜೀವ್ ಆರೋಪ ಮಾಡಿದ್ದಾರೆ. ಇವರಲ್ಲಿ 3 ಜನ ನಮ್ಮ ಕಾಲದಲ್ಲಿ ನೇಮಕವಾಗಿದ್ದು, ಉಳಿದ ಶಿಕ್ಷಕರಿಗೆ ನೇಮಕಾತಿ ಪತ್ರ ಸಿಕ್ಕಿದ್ದು, ಡಿ.ಕೆ.ರವಿ, ಡಿವೈಎಸ್‌ಪಿ ಗಣಪತಿ ಹಾಗೂ ಅನುರಾಗ್ ತಿವಾರಿ ಆತ್ಮಹತ್ಯೆ, ಅಕ್ರಮ ಲಾಟರಿ ಪ್ರಕರಣ, ಪರೇಶ್ ಮೇಸ್ತಾ ಸಾವು, ಸೌಜನ್ಯ ಮತ್ತು ಎಂ.ಎಂ.ಕಲಬುರ್ಗಿ ಕೊಲೆ ಪ್ರಕರಣ ಹಾಗೂ ರಾಮನಗರ-ಮಂಡ್ಯ ನಗರಾಭಿವೃದ್ದಿ ಪ್ರಕರಣದ ಅವ್ಯವಹಾರ ಸೇರಿದಂತೆ ಎಂಟು ಪ್ರಕರಣಗಳನ್ನು ನಾವು ಸಿಬಿಐ ತನಿಖೆಗೆ ಒಪ್ಪಿಸಿದ್ದೆವು.

ರೀಡೂ ಬಗ್ಗೆ ಪರಿಶೀಲನೆಗಾಗಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಕೇಶವ ನಾರಾಯಣ ಅವರ ನೇತೃತ್ವದಲ್ಲಿ ಒಂದು ಸಮಿತಿ ರಚಿಸಿದ್ದರು. ಸಂದೀಪ್ ಧವೆ (ನಿವೃತ್ತ ಐಎಎಸ್ ಅಧಿಕಾರಿ) ಹಾಗೂ ಮೇಘರಿಕ್ ( ನಿವೃತ್ತ ಐಪಿಎಸ್ ಅಧಿಕಾರಿ) ಅವರು ಈ ಸಮಿತಿಯ ಸದಸ್ಯರಾಗಿದ್ದಾರೆ. ಎಂದು ಹೇಳಿದರು.

You cannot copy content of this page

Exit mobile version