ಹೊಸದಿಲ್ಲಿ : ಪರೀಕ್ಷೆ ಬರಿಯದೇ ಮಗಳಿಗೆ ವೈದ್ಯಕೀಯ ಸೀಟು ನೀಡುವಂತೆ ಸುಪ್ರೀ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಅರ್ಜಿಧಾರೆಯೊಬ್ಬರ ಅಹವಾಲವನ್ನು ಬುಧವಾರದಂದು ಸುಪ್ರೀಂ ಕೋರ್ಟ್ ಮೊಬೈಲ್ ಫೋನ್ ಮೂಲಕ ಆಗಿಸಿದೆ, ನಂತರ ಪ್ರಕರಣ ಸಂಬಂಧ ಪರಿಹಾರವನ್ನು ನೀಡಲು ನ್ಯಾಯಮೂರ್ತಿಗಳದ ಡಿ. ವೈ ಚಂದ್ರೆ ಚೂಡ್ ಮತ್ತು ಹಿಮಾ ಕೊಹ್ಲಿ ಅವರ ಪೀಠ ಅದನ್ನು ನಿರಾಕರಿದೆ.
ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗೆ ಹಾಜರಾಗದ ತಮ್ಮ ಪುತ್ರಿಗೆ ವೈದ್ಯಕೀಯ ಸೀಟು ನೀಡುವಂತೆ ಕೋರಿ ಅರ್ಜಿದಾರರು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ಉದ್ಯೋಗಿಗಳ ರಾಜ್ಯ ವಿಮಾ ನಿಗಮದ ಸಂಸ್ಥೆಯಲ್ಲಿ ವಿಮಾದಾರರ ಕೋಟಾದಡಿ ತಮ್ಮ ಪುತ್ರಿಗೆ ಪ್ರವೇಶ ಪಡೆಯಲು ಅವರು ಬಯಸಿದ್ದರು. ಈ ಕುರಿತು ಬುಧವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಅರ್ಜಿದಾರೆಯೊಬ್ಬರ ಅಹವಾಲನ್ನು ಮೊಬೈಲ್ ಫೋನ್ ಮೂಲಕ ಆಲಿಸಿತು.
ವಿಚಾರಣೆಯ ನಂತರ ನ್ಯಾಯಮೂರ್ತಿಗಳದ ಡಿ. ವೈ ಚಂದ್ರೆ ಚೂಡ್ ಮತ್ತು ಹಿಮಾ ಕೊಹ್ಲಿ ಅವರ ಪೀಠ ನೀಟ್ ಪರೀಕ್ಷೆಗೆ ಹಾಜರಾಗದ ಕಾರಣ ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಹೇಳಿತು.
ಪರೀಕ್ಷೆಯಲ್ಲಿ ಹಾಜರಾದ ಬಳಿಕ ಸುಪ್ರೀಂ ಕೋರ್ಟ್ ಅಥವಾ ಸಂಬಂಧಪಟ್ಟ ಹೈಕೋರ್ಟ್ಗಳಿಗೆ ತೆರಳುವ ಸ್ವಾತಂತ್ರ್ಯವನ್ನು ಅರ್ಜಿದಾರರಿಗೆ ಕಲ್ಪಿಸಿದ್ದು, ನಂತರ ಅರ್ಜಿಯನ್ನು ವಿಲೇವಾರಿ ಮಾಡಿತು.