ಬೆಂಗಳೂರು: ಇಂದು ಬೆಂಗಳೂರಿನ ವಿಮಾನ ನಿಲ್ದಾಣದ ಬಳಿಯ ನಾಡ ಪ್ರಭು ಕೆಂಪೇಗೌಡ ಅವರ 108 ಅಡಿ ಎತ್ತರದ ಕಂಚಿನ ಪ್ರತಿಮೆಯ ನಿರ್ಮಾಣ ಕಾರ್ಯವನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರಿ ನಿರ್ಮಲಾನಂದನಾಥ ಸ್ವಾಮಿಜಿ ಅವರು ವೀಕ್ಷಿಸಿದರು.
ನಾಡಪ್ರಭು ಕೆಂಪೇಗೌಡರು ದೂರದೃಷ್ಟಿಯ ಆಡಳಿತಗಾರ, ಸಮಾಜ ಸುಧಾರಕ ಆಗಿದ್ದರು. ಜಾಗತಿಕ ಪ್ರತಿಷ್ಠೆಯ ಬೆಂಗಳೂರನ್ನು ಅವರು ನಿರ್ಮಿಸಿದ್ದು ಐದು ಶತಮಾನಗಳ ಹಿಂದೆ.

ಬೆಂಗಳೂರಿನ ವಿಮಾನ ನಿಲ್ದಾಣದ ಬಳಿ ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಇನ್ನೇನು ಅನಾವರಣಗೊಳ್ಳಲಿದೆ. ಅದರ ಸುತ್ತ ಥೀಮ್ ಪಾರ್ಕ್ ಕೂಡ ಅಭಿವೃದ್ಧಿಯಾಗಲಿದೆ. ಖಡ್ಗಧಾರಿಯಾಗಿ ತಲೆ ಎತ್ತಿ ನಿಂತಿರುವ ಕೆಂಪೇಗೌಡರು ಕನ್ನಡಿಗರ ಸ್ವಾಭಿಮಾನದ ಪ್ರತೀಕವಾಗಿದೆ.