ಯಾದಗಿರಿ : ಬುಧವಾರದಂದು ಯಾದಗಿರಿ ಮತ್ತು ಗುಲ್ಬರ್ಗಾ ದಲ್ಲಿ ಜನಸಂಕಲ್ಪ ಯಾತ್ರೆ ಹಮ್ಮಿಕೊಂಡಿದ್ದು, ಕಾಂಗ್ರೆಸ್ ಆಡಳಿತದ ಬಗ್ಗೆ ಮತ್ತು ತಮ್ಮ ಬಿಜೆಪಿ ಸರ್ಕಾರದ ಯೋಜನೆಗಳ ಬಗ್ಗೆ ಮಾತನಾಡಿದರು.
ಯಾದಗಿರಿ ಮತು ಗುಲ್ಬಾರ್ಗ ದಲ್ಲಿ ನಡೆಯುತ್ತಿರುವ ಜನಸಂಕಲ್ಪಯಾತ್ರೆಯಲ್ಲಿ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಯಿ ಮತ್ತು ಹಲವು ಬಿಜೆಪಿ ಪ್ರಮುಖರು ಭಾಗವಹಿಸಿದ್ದಾರೆ.
ಯಾದಗಿರಿಯ ಸುರಪುರದಲ್ಲಿ ನಡೆದ ಜನಸಂಕಲ್ಪ ಯಾತ್ರೆಯ ಕಾರ್ಯಕ್ರಮದಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ʼ ಹೈದರಾಬಾದ್ ಕರ್ನಾಟಕ ಹಿಂದುಳಿದ ಪ್ರದೇಶವನ್ನು ಮುಂದೆ ತರಬೇಕಾದರೆ, ರೈತರಿಗಾಗಿ ನೀರಾವರಿ ,ಕೆಲಸಕ್ಕಾಗಿ ಕೈಗಾರಿಕೆ, ಶಾಲೆಗಳು ಆಸ್ಪತ್ರೆಗಳು , ರಸ್ತೆ ಈ ಭಾಗದ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು ಎಂದರು.
ʼ371ಜೆ ಸುಲಭವಾಗಿ ಬಂದಿಲ್ಲ. ಸುಮಾರು 3 ದಶಕಗಳ ಕಾಲ ಹೋರಟದಿಂದ ಬಂದಿದೆ.ಯಾವಾಗ ಆಂಧ್ರ ತೆಲಂಗಾಣ ಆಯ್ತು ಆಗ ಕೇಂದ್ರ ಅನಿವಾರ್ಯವಾಗಿ 371ಜೆ ಕೊಡಬೇಕಾಯಿತು. 371 ಜೆ ಕೊಡದೆ ಇದ್ದಿದ್ದರೆ ಕಾಂಗ್ರೆಸ್ನವರು ಓಡಾಡುವುದು ಕೂಡ ಕಷ್ಟ ಆಗುತ್ತಿತ್ತು. ಈಗ ಹೇಳ್ತಾರೆ 371ಜೆ ನಾವು ತಂದಿದ್ದೇವೆ ಎಂದು. ಹಣ ಕೊಡದೆ ಸರಿಯಾಗಿ ಅಭಿವೃದ್ಧಿ ಮಾಡದೆ ಇದ್ರೆ 371ಜೆ ತಂಗೊಂಡು ಏನು ಮಾಡೋದು. ಇಂತಹ ಸಂದರ್ಭದಲ್ಲಿ ಯಡಿಯೂರಪ್ಪನವರು ಹೈದರಾಬಾದ್ ಕರ್ನಾಟಕ ಬೋರ್ಡ್ಗೆ 1500 ಕೋಟಿ ಕೊಟ್ಟಿದ್ದಾರೆ. ನಾನು ಮುಖ್ಯ ಮಂತ್ರಿಯಾದ ಮೇಲೆ 3000 ಕೋಟಿ ರೂ ಕೊಟ್ಟಿದ್ದೇನೆʼ ಎಂದು ಹೇಳಿದರು.
ʼಕಾಂಗ್ರೆಸ್ ನವರು 1000 ಕೋಟಿ ರೂ ಹಣ ಇದ್ರೆ 100, 200 ಕೋಟಿ ರೂ ಖರ್ಚು ಮಾಡ್ತಿದ್ರು. ಕ್ರಿಯಾ ಯೋಜನೆ ಒಂದೊಂದು ವರ್ಷ ಆಗುತ್ತಿರಲಿಲ್ಲ. ನಾವು ಬಂದಮೇಲೆ ಈ ವರ್ಷ ಕ್ರಿಯಾ ಯೋಜನೆಗೆ 3000 ಕೋಟಿ ಬಿಡುಗಡೆ ಮಾಡಿದ್ದೇವೆ. ಸುಮಾರು 2000 ಶಾಲಾ ಕೊಠಡಿಗಳ ಮಾಡಬೇಕು ಅನ್ನೋ ಇಚ್ಚೆ ಇದೆ. ಈಗಾಗಲೇ 1400 ಶಾಲಾ ಕಾಲೇಜುಗಳಿಗೆ ಅನುಮೋದನೆ ನೀಡಿದ್ದೇವೆ. ಇನ್ನೊಂದು ತಿಂಗಳಲ್ಲಿ ಉಳಿದ ಶಾಲಾ ಕಾಲೇಜುಗಳನ್ನು ಹೈದರಾಬಾದ್ ಕರ್ನಾಟಕದಲ್ಲಿ ಮಾಡುತ್ತಾ ಇದ್ದೇವೆ. ಹೊಸದಾಗಿ 50 ಪಿಎಚ್ ಡಿ ಸೆಂಟರ್ಗಳು ಮತ್ತು ಆರೋಗ್ಯ ಕೇಂದ್ರ ಒಂದೊಂದಕ್ಕು 8 ಕೋಟಿ ಕೊಟ್ಟಿ ಅಂದುಕೊಂಡಿದ್ದೇವೆ. ನೀರಾವರಿಗೆ ಅಪ್ಪರ್ ಕೃಷ್ಣ ಯೋಜನೆಯಡಿಯಲ್ಲಿ, ಗುಲ್ಬರ್ಗಾ ಡಿವಿಶನ್ ಯೋಜನೆಗಳ ಅಡಿಯಲ್ಲಿ 5000 ಕೋಟಿಗಿಂತ ಹೆಚ್ಚು ಅನುದಾನವನ್ನು ಈ ವರ್ಷ ನಾವು ಕೊಡುತ್ತೇವೆʼ ಎಂದು ಮಾತನಾಡಿದರು.