ತಿರುಮಲ: ಕಾಲ್ನಡಿಗೆಯ ದಾರಿಯಲ್ಲಿ ಕುಸಿದ ಭಕ್ತರ ಸಂಖ್ಯೆ

ತಿರುಪತಿ: ಕಾಲ್ನಡಿಗೆಯಲ್ಲಿ ತಿರುಮಲಕ್ಕೆ ತೆರಳುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಬಾಲಕಿಯ ಮೇಲೆ ಚಿರತೆಯ ದಾಳಿ ನಡೆದ ಕಾರಣ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಮಧ್ಯಾಹ್ನ 2 ಗಂಟೆಯ ನಂತರ ನಡಿಗೆಯ ದಾರಿಯಲು ಹೋಗಲು ಆಡಳಿತ ಮಂಡಳಿ ಈಗ ಬಿಡುತ್ತಿಲ್ಲ.

ಇದರಿಂದಾಗಿ ಮಕ್ಕಳೊಂದಿಗೆ ತಿರುಪತಿಗೆ ಬರುವ ಜನರು ಅನಿವಾರ್ಯವಾಗಿ ವಾಹನದ ಮೂಲಕವೇ ಬೆಟ್ಟ ಹತ್ತಬೇಕಾಗಿದೆ.

ಪ್ರತಿದಿನ 12,000 ರಿಂದ 24,000 ಜನರು ವಾಕ್‌ವೇನಲ್ಲಿ ನಡೆದು ದೇವರ ದರ್ಶನಕ್ಕೆ ಹೋಗುತ್ತಿದ್ದರು. ಆದರೆ ಬುಧವಾರ ಕೇವಲ 8,200 ಮಂದಿ ಮಾತ್ರ ಅಲಿಪಿರಿ ಮಾರ್ಗದಲ್ಲಿ ತಿರುಮಲಕ್ಕೆ ತೆರಳಿದ್ದರು. ಗುರುವಾರವೂ ಇದೇ ಸ್ಥಿತಿ ಕಂಡುಬಂತು.
ಕಾಲ್ನಡಿಗೆ ದಾರಿಯಲ್ಲಿ ಭದ್ರತಾ ಸಿಬ್ಬಂದಿ ದೊಣ್ಣೆಗಳನ್ನು ಹಿಡಿದುಕೊಂಡು ತಿರುಗುತ್ತಿರುವುದು ಕಂಡುಬಂದಿತು.

Related Articles

ಇತ್ತೀಚಿನ ಸುದ್ದಿಗಳು