Home Uncategorized ಖಾಸಗಿ ಬಸ್‌ ಲಾರಿ ಡಿಕ್ಕಿ , ಆಂಬುಲೆನ್ಸ್‌ ಚಾಲಕರ ನಿರ್ಲಕ್ಷ್ಯ – ಮೂವರು ಸಾ*ವು

ಖಾಸಗಿ ಬಸ್‌ ಲಾರಿ ಡಿಕ್ಕಿ , ಆಂಬುಲೆನ್ಸ್‌ ಚಾಲಕರ ನಿರ್ಲಕ್ಷ್ಯ – ಮೂವರು ಸಾ*ವು

ಹುಣಸೂರು :  ಲಾರಿ ಅಪಘಾತವೊಂದರಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಮೈಸೂರು (Mysore) -ಹುಣಸೂರು ರಸ್ತೆಯ ಮಧುಗಿರಿ ಕೊಪ್ಪಲಿನ ಬಳಿ ಶುಕ್ರವಾರ ಸಂಭವಿಸಿದೆ. ಅಪಘಾತ ನಡೆದ ಕೂಡಲೇ 108 ಆಂಬುಲೆನ್ಸ್‌ ಗೆ ಕರೆ ಮಾಡಿದರೂ ಸಹ ಅವರು ಸಕಾಲಕ್ಕೆ ಬರಲಿಲ್ಲ ಎಂದು ಸ್ಥಳೀಯರು ಮತ್ತು ಪೊಲೀಸರು ಆರೋಪಿಸಿದ್ದಾರೆ.

ಕೊನಗೆ ಪೊಲೀಸ್‌ ವಾಹನದಲ್ಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಗಿದೆ.ಬಸ್‌ ಚಾಲಕ ಸಂಶದ್‌ , ಕ್ಲೀನರ್‌ ದಿನೇಶ್‌  ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಮತ್ತೊಬ್ಬ ವ್ಯಕ್ತಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಖಾಸಗಿ ಬಸ್‌ ಕೇರಳದ ಕೋಳಿಕ್ಕೋಡ್‌ ನಿಂದ ಬರುತ್ತಿತ್ತು. ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ರಸ್ತೆ ಬದಿಯಲ್ಲಿದ್ದ ಒಣಮರವು ಉರುಳಿ ದಾರಿಗೆ ಅಡ್ಡಲಾಗಿ ಬಿದ್ದಿತ್ತು. ಇದನ್ನು ತಪ್ಪಿಸಲು ಚಾಲಕ ಬಸ್‌ ನ್ನು ತಿರುಗಿಸಿದಾಗ ಎದುರಿನಿಂದ ಬರುತ್ತಿದ್ದ ಸಿಮೆಂಟ್‌ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

You cannot copy content of this page

Exit mobile version