Monday, June 9, 2025

ಸತ್ಯ | ನ್ಯಾಯ |ಧರ್ಮ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸೌಹಾರ್ದ ಕದಡುವ 36 ಮಂದಿ ಗಡಿಪಾರಿಗೆ ಪ್ರಕ್ರಿಯೆ ಆರಂಭ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸಂಘರ್ಷವನ್ನು ಹುಟ್ಟುಹಾಕುವ ಮತ್ತು ಗಲಭೆಗಳಲ್ಲಿ ಭಾಗಿಯಾಗುವವರ ಪಟ್ಟಿ ಮಾಡಿ ಅವರ ಗಡಿಪಾರಿಗೆ ಪೊಲೀಸ್ ಇಲಾಖೆ ಮುಂದಾಗಿದೆ. ನಿರಂತರವಾಗಿ ಗಲಭೆ ನಡೆಸುವವರ ವಿರುದ್ಧ ಸರ್ಕಾರ ಕ್ರಮಕ್ಕೆ ಮುಂದಾಗಿದ್ದು ಹಿಂದೂ ಪರ ಸಂಘಟನೆಯ ಪ್ರಮುಖರು ಸೇರಿ 36 ಮಂದಿ ಗಡೀಪಾರಿಗೆ ಕಾನೂನು ಪ್ರಕ್ರಿಯೆ ಆರಂಭಿಸಿದೆ.

ರಾಜ್ಯದಲ್ಲಿ ನಕ್ಸಲ್ ನಿಗ್ರಹ ಪಡೆಯ ಮಾದರಿಯಲ್ಲೇ, ಕೋಮು ಸಂಬಂಧಿತ ಗಲಭೆ ಮತ್ತು ಹತ್ಯೆ ಪ್ರಕರಣಗಳಲ್ಲಿ ನೇರ ಮತ್ತು ಪರೋಕ್ಷ ಹಸ್ತಕ್ಷೇಪ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಸರ್ಕಾರ ಪ್ರಸ್ತಾಪಿಸಿತ್ತು‌. ಅದರ ಮೊದಲ ಹಂತವಾಗಿ ಈ ಪ್ರಕ್ರಿಯೆ ಶುರುವಾಗಿದೆ.

ಗಡೀಪಾರಿಗೆ ಪ್ರಸ್ತಾವನೆ ಸಲ್ಲಿಸಿದವರ ಹೆಸರು ಮತ್ತು ಠಾಣಾ ವ್ಯಾಪ್ತಿ:
ಬಂಟ್ವಾಳ ನಗರ ಠಾಣೆ: ಹಸೈನಾರ್(46), ಮಹಮ್ಮದ್ ಸಫಾನ್(26), ರಾಜು ಅಲಿಯಾಸ್ ರಾಜೇಶ್(35)
ಬಂಟ್ವಾಳ ಗ್ರಾಮಾಂತರ: ಭರತ್ ರಾಜ್ ಬಿ ಅಲಿಯಾಸ್ ಭರತ್ ಕುಮ್ಡೇಲು(38), ಪವನ್ ಕುಮಾರ್(33), ಚರಣ್ ಅಲಿಯಾಸ್ ಚರಣ್ ರಾಜ್(28), ಅಬ್ದುಲ್ ಲತೀಫ್(40), ‘ಮಹಮ್ಮದ್ ಅಶ್ರಫ್(44), ಮೊಯ್ದಿನ್ ಅಮ್ನಾನ್ ಅಲಿಯಾಸ್ ಅದ್ದು(24)
ವಿಟ್ಲ ಠಾಣೆ: ಗಣೇಶ ಅಲಿಯಾಸ್ ಗಣೇಶ ಪೂಜಾರಿ(35), ಅಬ್ದುಲ್ ಖಾದರ್ ಅಲಿಯಾಸ್ ಸೌಕತ್(34), ಚಂದ್ರಹಾಸ(23)
ಪುಂಜಾಲಕಟ್ಟೆ ಠಾಣೆ: ಭುವಿ ಅಲಿಯಾಸ್ ಭುವಿತ್ ಶೆಟ್ಟಿ(35)
ಬೆಳ್ತಂಗಡಿ ಠಾಣೆ: ಮಹೇಶ್ ಶೆಟ್ಟಿ ತಿಮರೋಡಿ(53), ಅಶ್ರಫ್ ಬಿ ಅಲಿಯಾಸ್ ಗರಗಸ ಅಶ್ರಫ್ (43), ಮನೋಜ್ ಕುಮಾರ್(37)
ಪುತ್ತೂರು ನಗರ: ಅರುಣ್ ಕುಮಾರ್ ಪುತ್ತಿಲ(54), ಹಕೀಮ್ ಕೂರ್ನಡ್ಕ (38), ಅಜಿತ್ ರೈ (39), ಮನೀಶ್ ಎಸ್ (34), ಅಬ್ದುಲ್ ರಹಿಮಾನ್(38), ಕೆ ಅಝೀಜ್ (48)
ಪುತ್ತೂರು ಗ್ರಾಮಾಂತರ: ಕಿಶೋರ್ (34), ರಾಕೇಶ್ ಕೆ. (30) ನಿಶಾಂತ್ ಕುಮಾರ್(22)
ಕಡಬ ಠಾಣೆ : ಮಹಮ್ಮದ್ ನವಾಝ್(32 )
ಉಪ್ಪಿನಂಗಡಿ ಠಾಣೆ: ಸಂತೋಷ್ ಕುಮಾರ್ ರೈ ಅಲಿಯಾಸ್ ಸಂತು(35), ಜಯರಾಮ(25), ಸಂಶುದ್ದೀನ್(36), ಸಂದೀಪ(24), ಮಹಮ್ಮದ್ ಶಾಕಿರ್(35), ಅಬ್ದುಲ್ ಅಝೀಜ್ ಅಲಿಯಾಸ್ ಕರಾಯ ಅಝೀಜ್(36 )
ಸುಳ್ಯ ಠಾಣೆ : ಲತೇಶ್ ಗುಂಡ್ಯ(32), ಮನೋಹರ ಅಲಿಯಾಸ್ ಮನು(32)
ಬೆಳ್ಳಾರೆ ಠಾಣೆ: ಪ್ರಸಾದ್(35), ಶಮೀರ್ ಕೆ(38)

Related Articles

ಇತ್ತೀಚಿನ ಸುದ್ದಿಗಳು

You cannot copy content of this page