Wednesday, October 2, 2024

ಸತ್ಯ | ನ್ಯಾಯ |ಧರ್ಮ

ಮೋದಿ ವಿಶ್ವಾಸಘಾತುಕರಿಗೆ ರಾಜ: ಖರ್ಗೆ

ಚಂಡೀಗಢ: ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿರುವ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳುವುದರಲ್ಲಿ ನಿಪುಣರಾಗಿದ್ದಾರೆ ಎಂದು ಬುಧವಾರ ಆರೋಪಿಸಿದ್ದಾರೆ.

“ಇಂದು ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ. ಮಹಾತ್ಮ ಗಾಂಧಿ ಅವರು ನಮಗೆ ಸತ್ಯ ಮತ್ತು ಅಹಿಂಸೆಯನ್ನು ಕಲಿಸಿದ್ದಾರೆ. ನಾನು ಇದನ್ನು ಹೇಳಲು ಬಯಸುವುದಿಲ್ಲ, ಆದರೆ ಅಧಿಕಾರದಲ್ಲಿರುವವರು ಎಷ್ಟು ಸತ್ಯ ಮತ್ತು ಎಷ್ಟು ಸುಳ್ಳನ್ನು ಮಾತನಾಡುತ್ತಾರೆ ಎಂದು ಹೇಳುತ್ತೇನೆ,” ಎಂದು ಚಾರ್ಕಿ ದಾದ್ರಿಯ ಬಧ್ರಾದಲ್ಲಿ ನಡೆದ  ಚುನಾವಣಾ ರ್ಯಾಲಿಯಲ್ಲಿ ಖರ್ಗೆ ಹೇಳಿದರು..

“ಮೋದಿ ಜಿ ತೋ ಭರೋಸಾ ತೋಡ್ನೆ ವಾಲೋ ಕಾ ಭೀ ಸರ್ದಾರ್ ಹೈ (ಮೋದಿ ವಿಶ್ವಾಸಘಾತುಕರಿಗೆ ರಾಜ) ಅವರ ಹಲವಾರು ಸುಳ್ಳುಗಳು, ಭರವಸೆಗಳು, ಅದರ ಬಗ್ಗೆ ನಿಮಗೆ ತಿಳಿದಿದೆ,” ಎಂದು ಅವರು ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ಸಮ್ಮುಖದಲ್ಲಿ ಈ ಟೀಕೆಯನ್ನು ಮಾಡಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page