ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2024 ರ ಅಡಿಯಲ್ಲಿ ನಡೆದ ಚರ್ಚೆಯಲ್ಲಿ ಕೇಂದ್ರದಲ್ಲಿ ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್ಡಿಎ ಸರ್ಕಾರದ ಮೇಲೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ ಮಹಾಭಾರತದ ‘ಚಕ್ರವ್ಯೂಹ’ವನ್ನು ಉದಾಹರಿಸಿ ಬಿಜೆಪಿ ಮೇಲೆ ಮಾತಿನ ದಾಳಿ ನಡೆಸಿದ್ದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚಕ್ರವ್ಯೂಹದ ಕಮಲದ ಸಾದೃಶ್ಯವನ್ನು ಬಳಸಿಕೊಂಡು ಸರ್ಕಾರವನ್ನು ಗುರಿಯಾಗಿಸಿ, ಬಿಜೆಪಿಯಿಂದ ದೇಶದಲ್ಲಿ “ಭಯದ ವಾತಾವರಣ” ನಿರ್ಮಾಣವಾಗಿದೆ ಎಂದು ಹೇಳಿದರು.
21 ನೇ ಶತಮಾನದಲ್ಲಿ, ಪ್ರಧಾನಿ ಮೋದಿ ಎದೆಯ ಮೇಲೆ ಧರಿಸಿರುವ ಕಮಲದ ಚಿಹ್ನೆಯಿಂದ ಪ್ರತಿನಿಧಿಸುವ ಹೊಸ ಚಕ್ರವ್ಯೂಹದಲ್ಲಿ ಭಾರತ ಸಿಕ್ಕಿಬಿದ್ದಿದೆ ಎಂದು ರಾಹುಲ್ ಗಾಂಧಿ ಲೋಕಸಭೆಯಲ್ಲಿ ಹೇಳಿದರು. ಯುದ್ಧಭೂಮಿಯಲ್ಲಿ ಯುವ ಯೋಧ ಅಭಿಮನ್ಯುವನ್ನು ಕೊಂದ ಮಹಾಭಾರತದ ಚಕ್ರವ್ಯೂಹವನ್ನು ಉಲ್ಲೇಖಿಸಿದ ರಾಹುಲ್, ಬಲೆಯ ಕೇಂದ್ರದಲ್ಲಿ ಆರು ಜನರಿದ್ದಾರೆ – ದ್ರೋಣಾಚಾರ್ಯ, ಕರ್ಣ, ಕೃಪಾಚಾರ್ಯ, ಕೃತವರ್ಮ, ಅಶ್ವಥಾಮ ಮತ್ತು ಶಕುನಿ. “ಅಂತೆಯೇ, ಇಂದು ಭಾರತದ ಚಕ್ರವ್ಯೂಹದ ಕೇಂದ್ರದಲ್ಲಿ ಆರು ಜನರಿದ್ದಾರೆ — ಪ್ರಧಾನಿ ಮೋದಿ, ಅಮಿತ್ ಶಾ, ಮೋಹನ್ ಭಾಗವತ್, ಅಜಿತ್ ದೋವಲ್, ಅಂಬಾನಿ ಮತ್ತು ಅದಾನಿ” ಎಂದು ಹೇಳಿದ್ದಾರೆ.
ಈ ಹೇಳಿಕೆಯು ಎನ್ಡಿಎ ಸಂಸದರ ಕೋಲಾಹಲಕ್ಕೆ ಕಾರಣವಾಯಿತು ಮತ್ತು ಸ್ಪೀಕರ್ ಓಂ ಬಿರ್ಲಾ ಅವರ ಮಧ್ಯಸ್ಥಿಕೆಗೆ ಕಾರಣವಾಯಿತು. ಅದಕ್ಕೆ ರಾಹುಲ್, “ನೀವು ಬಯಸಿದರೆ, ನಾನು ಈ ಪಟ್ಟಿಯಿಂದ ಎನ್ಎಸ್ಎ ದೋವಲ್, ಅಂಬಾನಿ ಮತ್ತು ಅದಾನಿ ಹೆಸರನ್ನು ತೆಗೆದುಹಾಕುತ್ತೇನೆ” ಎಂದು ಹೇಳಿದರು.
ಆ ನಂತರ ಬಿಜೆಪಿ ಪಕ್ಷ ಭಾರತದ ಜನರನ್ನು ಅಭಿಮನ್ಯು ಎಂದು ತಿಳಿದಿದ್ದಾರೆ. ಆದರೆ ಭಾರತದ ಮಂದಿ ಇಂದು ಚಕ್ರವ್ಯೂಹ ಬೇದಿಸುವ ಅರ್ಜುನನಾಗಿದ್ದಾರೆ ಎಂದು ಹೇಳಿದರು.