ರಾಹಲ್‌ ಗಾಂಧಿಗೆ ಅರುಣಾಚಲದ ಬಗ್ಗೆ ಆಳವಾದ ಜ್ಞಾನವಿಲ್ಲ : ಸಿಎಂ ಪೆಮಾ ಖಂಡು

ಅರುಣಾಚಲ ಪ್ರದೇಶ : ಈಶಾನ್ಯ ಭಾರತದ ಬಗ್ಗೆ ಮಾತನಾಡಿದ ರಾಹುಲ್‌ ಗಾಂಧಿಯ ವಿರುದ್ಧ ಅರುಣಾಚಲ ಪ್ರದೇಶದ ಸಿಎಂ ಕಿಡಿಕಾರಿದ್ದಾರೆ.

ಈ ಹಿನ್ನಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ “ಪ್ರಧಾನಿಯವರು ಯಾವುದೇ ಹೋರಾಟವಿಲ್ಲದೆ ಲಡಾಖ್‌ನಲ್ಲಿನ 1000 ಚದರ ಕಿಲೋಮೀಟರ್ ಪ್ರದೇಶವನ್ನು ಚೀನಾಕ್ಕೆ ನೀಡಿದ್ದಾರೆ. ಏಪ್ರಿಲ್ 2020ರ ಯಥಾಸ್ಥಿತಿಯನ್ನು ಮರುಸ್ಥಾಪಿಸುವ ಭಾರತದ ಬೇಡಿಕೆಯನ್ನು ಒಪ್ಪಿಕೊಳ್ಳಲು ಚೀನಾ ನಿರಾಕರಿಸಿದೆ. ಚೀನಾಗೆ ಕೊಟ್ಟಿರುವ ಪ್ರದೇಶವನ್ನು  ಹೇಗೆ ಹಿಂಪಡೆಯುತ್ತೀರಿ? ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದರು. 

ಈ ಕುರಿತು ಟ್ವೀಟ್‌ ಮಾಡಿದ ಅರುಣಾಚಲ ಪ್ರದೇಶದ ಸಿಎಂ ಪೆಮಾ ಖಂಡು “ರಾಹುಲ್ ಗಾಂಧಿಯವರಿಗೆ ಈಶಾನ್ಯ,ಅರುಣಾಚಲದ ಬಗ್ಗೆ ಆಳವಾದ ಜ್ಞಾನವಿಲ್ಲ ಆದ್ದರಿಂದಲೇ ಈಶಾನ್ಯದ ಇಂತಹ ಸಮಸ್ಯೆಗಳನ್ನು ಎತ್ತಿ ಮಾತನಾಡುತ್ತಾರೆ” ಎಂದು ಹೇಳಿದ್ದಾರೆ. 

Related Articles

ಇತ್ತೀಚಿನ ಸುದ್ದಿಗಳು