Home ಬೆಂಗಳೂರು ರೈತರಿಗೆ ಗೊಬ್ಬರವನ್ನೇ ಕೊಡಲಾಗದವರು, ಟಿವಿ ಚಾನಲ್ ಕೊಡುವರೇ! : ಲಕ್ಷ್ಮೀ ಹೆಬ್ಬಾಳ್ಕರ್‌

ರೈತರಿಗೆ ಗೊಬ್ಬರವನ್ನೇ ಕೊಡಲಾಗದವರು, ಟಿವಿ ಚಾನಲ್ ಕೊಡುವರೇ! : ಲಕ್ಷ್ಮೀ ಹೆಬ್ಬಾಳ್ಕರ್‌

0

ಬೆಂಗಳೂರು : ಬಿಜೆಪಿಯವರು ರೈತರಿಗೆ ಮಾಹಿತಿ ನೀಡಲು ರೈತ ಬಂಧು ಟಿವಿ ಚಾನಲ್ ಪ್ರಾರಂಭಿಸುತ್ತೇವೆ ಎಂದು ಹೇಳಿ ಆ ಬಗ್ಗೆ ಯಾವುದೇ ರೀತಿಯ ಸದ್ದು ಸುದ್ದಿ ಇಲ್ಲದಿರುವ ಕಾರಣ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಈ ಕುರಿತು ಟ್ಚೀಟ್‌ ಮಾಡಿರುವ ಲಕ್ಷ್ಮೀ ಹೆಬ್ಬಾಳ್ಕರ್‌, ʼ ರೈತರಿಗೆ ಮಾಹಿತಿ ನೀಡಲು ರೈತ ಬಂಧು ಟಿವಿ ಚಾನಲ್ ಪ್ರಾರಂಭಿಸುತ್ತೇವೆ ಎಂದು ಬಿಜೆಪಿ ಹೇಳಿತ್ತು . ಆದರೆ ಎಲ್ಲಿ ಆ ಟಿವಿ ಚಾನೆಲ್‌?ʼ ಎಂದು ಪ್ರಶ್ನೆ ಮಾಡಿದ್ದಾರೆ.

ʼನಿಮ್ಮ ಭ್ರಷ್ಟಾಚಾರದ ಕತೆಗಳು ಆ ಚಾನೆಲಿನಲ್ಲೂ ಪ್ರಸಾರವಾದರೆ ಕಷ್ಟ ಎಂದು ಭಯಪಟ್ಟಿರಾ!?ʼ ಎಂದು ಕಿಡಿಕಾರಿದ್ದಾರೆ.

ʼರೈತರಿಗೆ ಕನಿಷ್ಠ ಸಮರ್ಪಕವಾಗಿ ಗೊಬ್ಬರವನ್ನೇ ಕೊಡಲಾಗದವರು ಟಿವಿ ಚಾನಲ್ ಕೊಡುವರೇ!ʼ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಟೀಕಿಸಿದ್ದಾರೆ.

You cannot copy content of this page

Exit mobile version