Home ರಾಜ್ಯ ಧಾರವಾಡ ರಂಗೋಲಿ ಚಿತ್ರ ಬಿಡಿಸಿ ಅಪ್ಪುಗೆ ಗೌರವ ಅರ್ಪಿಸಿದ ದಿನೇಶ್ ಚಿಲ್ಲಾಳ

ರಂಗೋಲಿ ಚಿತ್ರ ಬಿಡಿಸಿ ಅಪ್ಪುಗೆ ಗೌರವ ಅರ್ಪಿಸಿದ ದಿನೇಶ್ ಚಿಲ್ಲಾಳ

0

ಹುಬ್ಬಳ್ಳಿ : ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಪುಣ್ಯ ಸ್ಮರಣೆ ಮತ್ತು ಗಂಧದಗುಡಿ ಬಿಡುಗಡೆಯ ಅಂಗವಾಗಿ  ಇಂದು ಹುಬ್ಬಳ್ಳಿಯ ಅರ್ಬನ್ ಓಯಾಸಿಸ್ ಮಾಲ್ನಲ್ಲಿ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಲರ್ ಮೈ ಸಿಟಿ ಸಂಸ್ಥಾಪಕರಾದ ಕಿರಣ್ ಉಪ್ಪಾರ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮದಲ್ಲಿ ಖ್ಯಾತ ರಂಗೋಲಿ ಚಿತ್ರ ಕಲಾವಿದ ದಿನೇಶ್ ಚಿಲ್ಲಾಳರವರು ಪುನೀತ್ ರಾಜಕುಮಾರ್ ಅವರನ್ನು ರಂಗೋಲಿಯಲ್ಲಿ ಚಿತ್ರ ಬಿಡಿಸಿ ಗೌರವವನ್ನು ಅರ್ಪಿಸಿದ್ದಾರೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಸುರೇಶ್ ಗೋಕಾಕ್ ಅವರು ಕಲಾವಿದ ದಿನೇಶ್ ಚಿಲ್ಲಾಳ ಅವರಿಗೆ ಸನ್ಮಾನಿಸಿ ಶುಭ ಹಾರೈಸಿದರು.

ಕಾರ್ಯಕ್ರಮಲ್ಲಿ ಕಲರ್ ಮೈ ಸಿಟಿ ತಂಡದ ಸದಸ್ಯರಾದ ನವೀನ್ ಅತ್ತಿಬೆಳಗಲ್, ಶಿವಪ್ರಸಾದ್ ಅನ್ವೇರಿ, ಸಾಗರ್, ಬಳ್ಳಾರಿ ಪರಶುರಾಮ್, ಮಂಜುನಾಥ್, ಶಾಬಾದ್ ಮತ್ತಿತರ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

You cannot copy content of this page

Exit mobile version