Sunday, June 22, 2025

ಸತ್ಯ | ನ್ಯಾಯ |ಧರ್ಮ

ಕೇರಳದಲ್ಲಿ ರಸ್ತೆ ಅಪಘಾತ – ಐವರು ಸಾವು

ಪಾಲಕ್ಕಾಡ್: ಕೇರಳದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಲಾರಿ ಮತ್ತು ಕಾರು ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಈ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದಾರೆ. ಮಂಗಳವಾರ ರಾತ್ರಿ ಯುವಕರು ಬಾಡಿಗೆ ಕಾರಿನಲ್ಲಿ ಮನ್ನಾರ್ ಕಾಟ್‌ ಎನ್ನುವಲ್ಲಿಗೆ ಹೋಗುತ್ತಿದ್ದಾಗ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ.

ಪಾಲಕ್ಕಾಡ್-ಕೋಝಿಕೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಲ್ಲಡಿಕೋಡ್ ಅಯ್ಯಪ್ಪನಕಾವ್ ಬಳಿ ಕಾರೊಂದು ಮತ್ತೊಂದು ವಾಹನವನ್ನು ಹಿಂದಿಕ್ಕಲು ಯತ್ನಿಸಿದಾಗ ಅಪಘಾತ ಸಂಭವಿಸಿದೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಕಾರನ್ನು ಒಡೆದು ಐವರನ್ನು ಹೊರತೆಗೆದಿದ್ದಾರೆ. ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮರಣ ಹೊಂದಿದ್ದಾರೆ. ಪಾಲಕ್ಕಾಡ್ ಜಿಲ್ಲಾಸ್ಪತ್ರೆಗೆ ಸಾಗಿಸುವಾಗ ಇನ್ನೂ ಒಬ್ಬರು ಮೃತಪಟ್ಟಿದ್ದಾರೆ. ಮೃತ ದೇಹಗಳನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಮೃತರನ್ನು ಕೊಂಗಾಡ್ ಕೀರ್ಮುರಿಯ ಮನ್ನಂತರ ವಿಜೇಶ್ (35), ತೊಟ್ಟಲ್‌ನ ಟಿ.ವಿ.ವಿಷ್ಣು (28), ವಿಂಟುಪ್ಪರ ರಮೇಶ್ (31) ಮತ್ತು ಮಾಣಿಕಸ್ಸೆರಿಯ ಮೊಹಮ್ಮದ್ ಅಫ್ಜಲ್ (17) ಎಂದು ಗುರುತಿಸಲಾಗಿದೆ. ಐದನೇ ವ್ಯಕ್ತಿ ತಾಚಂಪಾರದ ಮಹೇಶ್.

Related Articles

ಇತ್ತೀಚಿನ ಸುದ್ದಿಗಳು

You cannot copy content of this page