Friday, June 20, 2025

ಸತ್ಯ | ನ್ಯಾಯ |ಧರ್ಮ

ಸಾವರ್ಕರ್ ಕುರಿತು ಬಿಜೆಪಿಗೆ ಪ್ರಿಯಾಂಕ ಖರ್ಗೆ 8 ಪ್ರಶ್ನೆಗಳು

ಬೆಂಗಳೂರು: ವಿ.ಡಿ.ಸಾವರ್ಕರ್ ಅವರ ಕುರಿತು ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಎಂಟು ಪ್ರಶ್ನೆಗಳನ್ನು ಇಟ್ಟಿದ್ದು, ಈ ಪ್ರಶ್ನೆಗಳಿಗೆ ಉತ್ತರಿಸಬಲ್ಲಿರಾ ಎಂಬ ಸವಾಲನ್ನು ಒಡ್ಡಿದ್ದಾರೆ.

ತಮ್ಮ ಫೇಸ್ ಬುಕ್ ನಲ್ಲಿ ಖರ್ಗೆಯವರು ಪ್ರಶ್ನೆಗಳನ್ನು ಮುಂದೊಡ್ಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಪ್ರಿಯಾಂಕ ಖರ್ಗೆ ಬಿಜೆಪಿಗೆ ಕೇಳಿರುವ ಎಂಟು ಪ್ರಶ್ನೆಗಳು ಈ ಕೆಳಕಂಡಂತಿವೆ.

ಡಿಯರ್ ಬಿಜೆಪಿ,

ಸಾವರ್ಕರ್ ಕುರಿತು ಈ ಪ್ರಶ್ನೆಗಳಿಗೆ ಉತ್ತರಿಸಬಲ್ಲಿರಾ?

ಪ್ರಶ್ನೆ 1 : ನೀವು ಹೇಳುವಂತೆ ಸಾವರ್ಕರ್ ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಉತ್ಸುಕರಾಗಿದ್ದಲ್ಲಿ, ಬ್ರಿಟನ್ ನಿಂದ ಭಾರತಕ್ಕೆ ಅವರನ್ನು ಸ್ಥಳಾಂತರಿಸಲು ಬ್ರಿಟಿಷ್ ಸರ್ಕಾರ ಆದೇಶಿಸಿದಾಗ “ನನ್ನನ್ನು ಭಾರತಕ್ಕೆ ಹಸ್ತಾಂತರಿಸುವುದು ಕಾನೂನುಬಾಹಿರ” ಎಂದು ಅವರು ಲಂಡನ್ ಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು ಏಕೆ?

ಪ್ರಶ್ನೆ 2 : ಸಾವರ್ಕರ್ ರ ಕ್ಷಮಾ ಪತ್ರಗಳು ಬರೆದಿದ್ದು ಏಕೆ? 1923ನಲ್ಲಿ ಸಾವರ್ಕರ್ ಜೈಲಿನಿಂದ ಬಿಡುಗಡೆಯಾದ ನಂತರ ಅವರು ಸ್ವಾತಂತ್ರ್ಯಕ್ಕಾಗಿ ಮಾಡಿದ ಹೋರಾಟಗಳು ಯಾವುವು?

ಪ್ರಶ್ನೆ 3 : ಹಿಂದುತ್ವದ ಪ್ರಬಲ ಪ್ರತಿಪಾದಕರಾದ ಸಾವರ್ಕರ್ ಮುಸ್ಲಿಂ ಲೀಗ್‌ನೊಂದಿಗೆ ಹಲವಾರು ರಾಜ್ಯಗಳಲ್ಲಿ ಸರ್ಕಾರಗಳನ್ನು ರಚಿಸಿದ್ದು ಏಕೆ?

ಪ್ರಶ್ನೆ 4 : “ವೀರ ಸಾವರ್ಕರ್” ಸ್ವಾತಂತ್ರ್ಯಕ್ಕಾಗಿ ಇಡೀ ಭಾರತ ಭಾಗಿಯಾಗಿದ್ದ “ಕ್ವಿಟ್ ಇಂಡಿಯಾ” ಚಳವಳಿಯಲ್ಲಿ ಭಾಗವಹಿಸದೇ ಅದನ್ನು ವಿರೋಧಿಸಿದ್ದು ಏಕೆ?

ಪ್ರಶ್ನೆ 5 : ಸಾವರ್ಕರ್ ನಿಮ್ಮ ನಿಜವಾಗಿಯೂ ಹಿಂದುತ್ವದ ಪಿತಾಮಹ ಎಂದು ನೀವು ಒಪ್ಪುವುದಾದರೆ, ಸಾವರ್ಕರ್ ಅವರು

  • ಗೋಪೂಜೆ ವಿರುದ್ಧವಾಗಿದ್ದರು
  • ಗೋವು ಒಂದು ಸಾಮಾನ್ಯ ಪ್ರಾಣಿ ಅಷ್ಟೇ ಎಂದಿದ್ದರು
  • ಗೋಮೂತ್ರ ಕುಡಿಯುವುದು ಬುದ್ದಿ ಹತ್ಯೆಗೆ ಸಮ ಎಂದಿದ್ದರು
  • ಅಮೆರಿಕದಂತೆ ಗೋವನ್ನು ಆರ್ಥಿಕ ರೂಪಕವಾಗಿ ಬಳಸಬೇಕು ಎಂದಿದ್ದರು
    ಗೋಮಾತೆಯ ಕುರಿತು ಅವರ ಈ ನಿಲುವುಗಳನ್ನು ನೀವು ಒಪ್ಪುತ್ತೀರಾ?

ಪ್ರಶ್ನೆ 6 : ದೇಶವನ್ನು ಧರ್ಮದ ಆಧಾರದ ಮೇಲೆ ವಿಭಜಿಸಬೇಕೆಂದು ಮೊದಲು ಸೂಚಿಸಿದ್ದೇ ಸಾವರ್ಕರ್. ಇಂದು ಅವರನ್ನು ನೀವು ವೈಭವೀಕರಿಸುತ್ತಿರುವುದು ಏಕೆ?

ಪ್ರಶ್ನೆ 7 : ನೇತಾಜಿ ಸುಭಾಷ್ ಚಂದ್ರ ಬೋಸ್ ವಿರುದ್ಧ ಹೋರಾಡಲು ಬ್ರಿಟಿಷ್ ಸೇನೆಗೆ ಹಿಂದೂಗಳು ಸೇರಬೇಕು ಎಂದು ಕರೆ ಕೊಟ್ಟಿದ್ದು ಏಕೆ?

ಪ್ರಶ್ನೆ 8 : ಸಾವರ್ಕರ್ ಬ್ರಿಟಿಷರಿಂದ 18 ವರ್ಷಗಳ ಕಾಲ ಪ್ರತಿ ತಿಂಗಳು 60 ರೂಪಾಯಿ ಪಿಂಚಣಿ ಪಡೆಯುತ್ತಿದ್ದದ್ದು ಏಕೆ?

Related Articles

ಇತ್ತೀಚಿನ ಸುದ್ದಿಗಳು

You cannot copy content of this page