Home ರಾಜಕೀಯ ಕುಮಾರಸ್ವಾಮಿ, ವಿಜಯೇಂದ್ರ ಇಬ್ಬರೂ ದಾರಿ ತಪ್ಪಿದ ಮಕ್ಕಳು: ಸಲೀಂ ಅಹ್ಮದ್‌

ಕುಮಾರಸ್ವಾಮಿ, ವಿಜಯೇಂದ್ರ ಇಬ್ಬರೂ ದಾರಿ ತಪ್ಪಿದ ಮಕ್ಕಳು: ಸಲೀಂ ಅಹ್ಮದ್‌

0

ಕಾಂಗ್ರೆಸ್‌ ಸರಕಾರ ಸಾಕಪ್ಪೋ ಸಾಕು ಎನ್ನುವ ಜೆಡಿಎಸ್‌ ಪಕ್ಷಕ್ಕೆ ದೇವೇಗೌಡರನ್ನು ಪ್ರಧಾನಿ ಮಾಡಲು, ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮುಖ್ಯಮಂತ್ರಿ ಮಾಡಿಸಲು ಬೆಂಬಲ ಪಡೆಯುವಾಗ ಸಾಕಪ್ಪ ಅನ್ನಿಸಿರಲಿಲ್ಲವೇ ಎಂದು ವಿಧಾನ ಪರಿಷತ್‌ ಮುಖ್ಯ ಸಚೇತಕ ಸಲೀಂ ಅಹ್ಮದ್‌ ಪ್ರಶ್ನಿಸಿಸಿದ್ದಾರೆ. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಬ್ಬರೂ ದಾರಿ ತಪ್ಪಿದ ಮಕ್ಕಳು ಎಂದು ಅವರು ಈ ಸಂದರ್ಭದಲ್ಲಿ ಟೀಕಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಅವರು ಅಗತ್ಯ ವಸ್ತುಗಳ ದರ ಹೆಚ್ಚಳದ ಬಗ್ಗೆ ಕೇಂದ್ರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗೆ ಎ.17ರಂದು ಬೆಂಗಳೂರಿನಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ರಾಜ್ಯ ಸರಕಾರ ಅಲ್ಪ ಪ್ರಮಾಣದಲ್ಲಿ ದರ ಹೆಚ್ಚಳ ಮಾಡಿದೆ ಎಂಬ ಕಾರಣಕ್ಕೆ ಬಿಜೆಪಿ ಜನಾಕ್ರೋಶ ಯಾತ್ರೆ ನಡೆಸುತ್ತಿದೆ. ಅವರಿಗೆ ಜನರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಕೇಂದ್ರ ಸರಕಾರದ ವಿರುದ್ಧ ಜನಾಕ್ರೋಶ ಯಾತ್ರೆ ನಡೆಸಲಿ, ಇಲ್ಲವಾದರೆ ಪಶ್ಚಾತ್ತಾಪ ಯಾತ್ರೆ ನಡೆಸಲಿ ಎಂದರು.

ಪ್ರಧಾನಿ ಮೋದಿಗೆ ರಾಜ್ಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಿಎಂ ಸಿದ್ದರಾಮಯ್ಯ ಮನವಿ ಸಲ್ಲಿಸಿದ್ದರೂ ಸ್ಪಂದನೆ ಇಲ್ಲ. ಮಹದಾಯಿ, ಕಳಸಾ-ಬಂಡೂರಿ, ಮೇಕೆದಾಟು ಯೋಜನೆಗೆ ಅನುಮೋದನೆ ನೀಡುತ್ತಿಲ್ಲ ಎಂದರು.

You cannot copy content of this page

Exit mobile version