ಬೆಂಗಳೂರು: ಎರಡು ದಿನಗಳ ಧಾರಾಕಾರ ಮಳೆಯಿಂದಾಗಿ ಮಂಗಳವಾರದಂದು ಬೆಂಗಳೂರಿನಲ್ಲಿ ಹಲವರ ಜೀವನವು ಅಸ್ತವ್ಯಸ್ತವಾಗಿದೆ, ದೀರ್ಘ ಟ್ರಾಫಿಕ್ ಅಡೆತಡೆಗಳು, ವ್ಯಾಪಕವಾದ ವಿದ್ಯುತ್ ಕಡಿತ ಮತ್ತು ಭಾರೀ ಪ್ರವಾಹದಿಂದಾಗಿ ಮನೆಗಳಿಗೆ ನೀರು ನುಗ್ಗಿದ್ದು,ಕೆಲವು ಮುಖ್ಯ ರಸ್ತೆಗಳು ಮುಳುಗಿ ಹೋಗಿವೆ. ನಗರದ ಹಲವಾರು ಭಾಗಗಳು ಇನ್ನೂ ಹೆಚ್ಚು ಜಲಾವೃತಗೊಂಡಿರುವುದರಿಂದ, ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊಗಳು ಹರಿದಾಡುತ್ತಿದ್ದು, ಬೆಂಗಳೂರು ನಗರದ ಪರಿಸ್ಥಿತಿಯನ್ನು ವ್ಯಂಗಮಾಡಲಾಗಿದೆ, ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ʼರಾಜಧಾನಿಯಲ್ಲಿ ಭೀಕರ ಮಳೆಯಾಗುತ್ತಿದ್ದು, ಪ್ರಹಾಹ ಭೀತಿಯಲ್ಲಿ ಸಿಲುಕಿರುವ ಜನರ ಪರಿಸ್ಥಿತಿಯ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಬೆಂಗಳೂರು ನಗರವನ್ನು ಮತ್ತು ಭೀಕರ ಪ್ರವಾಹ ಸಮಸ್ಯೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಗಳಿಗೆ ಇಳಿಸಲಾಗುತ್ತಿದ್ದು, ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆʼಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ. ಒಂದು ಕಾಲದಲ್ಲಿ ಮೂಲಸೌಕರ್ಯಕ್ಕಾಗಿ ಹೊಗಳಿದ ಬೆಂಗಳೂರು ಈಗ ಒಂದು ತಮಾಷೆಯಾಗಿ ಮಾರ್ಪಟ್ಟಿದೆ. 2023 ರಲ್ಲಿ, ನಾನು ಇದನ್ನೆಲ್ಲ ಕೊನೆಗಾಣಿಸುತ್ತೇನೆ ಮತ್ತು ನಮ್ಮ ಬೆಂಗಳೂರನ್ನು ಅದರ ಹಿಂದಿನ ವೈಭವಕ್ಕೆ ಮರುಸ್ಥಾಪಿಸುತ್ತೇನೆ ಎಂದು ಭರವಸೆಯ ಮಾತುಗಳನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಬರೆದಿದ್ದಾರೆ.