ಬಿಸಿಲ ಬೇಗೆಯಿಂದ ಪಾರಾಗಲು ಜೇಬಿನಲ್ಲಿ ಈರುಳ್ಳಿ ಇಟ್ಟುಕೊಳ್ಳಿ: ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ

ಗುಣ: ಬೇಸಿಗೆಯ ಪ್ರಖರ ಬಿಸಿಲಿನಿಂದ ಪಾರಾಗಲು ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರು ಒಂದು ತಂತ್ರವನ್ನು ಹಂಚಿಕೊಂಡಿದ್ದಾರೆ. ಭಾನುವಾರ ಸಂಜೆ ತಮ್ಮ ಗುಣ ಕ್ಷೇತ್ರಕ್ಕೆ ಸೇರಿದ ಪಿಚೋರ್-ಶಿವಪುರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು, ಪ್ರತಿಯೊಬ್ಬರ ಜೇಬಿನಲ್ಲಿ ಇಂದು ಮೊಬೈಲ್ ಫೋನ್ ಇರುತ್ತದೆ, ಆದರೆ ನಾನು ನನ್ನ ಜೇಬಿನಲ್ಲಿ ಈರುಳ್ಳಿ ಇಟ್ಟುಕೊಳ್ಳುತ್ತೇನೆ ಎಂದು ತಿಳಿಸಿದರು.

ತೀವ್ರ ಬಿಸಿಯ ವಾತಾವರಣದಲ್ಲಿ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ ಎಂದು ವಿವರಿಸಿದ ಸಚಿವರು, ಆಶ್ಚರ್ಯಕರವಾಗಿ ತಮ್ಮ ಜೇಬಿನಿಂದ ಈರುಳ್ಳಿಯನ್ನು ತೆಗೆದು ತೋರಿಸಿದರು. “ನಾನು ನನ್ನ ಕಾರಿನಲ್ಲಿ ಎಸಿ (AC) ಬಳಸುವುದಿಲ್ಲ, ಅದರ ಬದಲು ಜೇಬಿನಲ್ಲಿ ಒಂದು ಈರುಳ್ಳಿ ಇಟ್ಟುಕೊಳ್ಳುತ್ತೇನೆ” ಎಂದು ಅವರು ಹೇಳಿದರು.

“ಜೇಬಿನಲ್ಲಿ ಈರುಳ್ಳಿ ಇಟ್ಟುಕೊಳ್ಳಿ; 51 ಡಿಗ್ರಿ ಬಿಸಿಲಿದ್ದರೂ ಏನೂ ಆಗುವುದಿಲ್ಲ” ಎಂದು ಸಚಿವರು ವಿಶ್ವಾಸದಿಂದ ನುಡಿದರು. ಸಚಿವರು ಈ ಸಲಹೆ ನೀಡುತ್ತಿದ್ದಂತೆಯೇ, ಸಭೆಯಲ್ಲಿದ್ದ ವೃದ್ಧರೊಬ್ಬರು ನಗುತ್ತಾ ತಮ್ಮ ಜೇಬಿನಿಂದಲೂ ಈರುಳ್ಳಿಯನ್ನು ತೆಗೆದು ಸಚಿವರ ಮಾತಿಗೆ ಬೆಂಬಲ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.

Related Articles

ಇತ್ತೀಚಿನ ಸುದ್ದಿಗಳು