ಹಾಸನ : ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮೊಬೈಲ್ ಕಳ್ಳತನ ಮಾಡಿರುವುದಾಗಿ ಯುವಕನೋರ್ವನಿಗೆ ಮನಬಂದತೆ ಥಳಿಸಲಾಗಿದ್ದು, ಈ ವೇಳೆ ಕಣ್ಣೀರಿಡುತ್ತಾ ಕಾಲಿಗೆ ಬಿದ್ದು ಬೇಡಿಕೊಂಡರು ಸಲ್ಪವಾದರೂ ಮಾನವಿಯತೆ ಇರದ ಸೆಕ್ಯೂರಿಟಿ ಗಾರ್ಡ್ಗಳು ತಮ್ಮ ಕ್ರೌರ್ಯ ಮೆರೆದಿರುವ ಅಮಾನವೀಯ ಘಟನೆ ನಗರದಲ್ಲಿ ನಡೆದಿದೆ. ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಕಳ್ಳತನ ಮಾಡಿದ ಆರೋಪದ ಹಿನ್ನಲೆಯಲ್ಲಿ ಆಲೂರು ಮೂಲದ ಯುವಕ ಎಂಬುವನೇ ಕಳ್ಳತನ ಮಾಡಿ ಸಿಕ್ಕಿ ಬಿದ್ದವನು. ಆತನನ್ನು ಹಿಡಿದ ಸೆಕ್ಯೂರಿಟಿ ಗಾರ್ಡ್ಗಳು ಹಾಗೂ ಪೊಲೀಸರು ಸತತ ಅರ್ಧ ಗಂಟೆಗೂ ಹೆಚ್ಚು ಕಾಲ ಮನಬಂದತೆ ಥಳಿಸಿರುವ ಲಾಠಿಯಿಂದ ಹಲ್ಲೆ ನಡೆಸಿದ ಘಟನೆ ಹಿಮ್ಸ್ ಆಸ್ಪತ್ರೆಯ ಆವರಣದಲ್ಲಿ ನಡೆದಿದೆ. ಹೊಡೆಯುತ್ತಿದ್ದ ಕೋಲು ಮುರಿದರೂ ಕೂಡ ಲೆಕ್ಕಿಸದೇ ಸತತವಾಗಿ ಥಳಿಸಿದ್ದಾರೆ. ಆಸ್ಪತ್ರೆಯ ಮುಂಭಾಗ ಮಳೆ ನಡುವೆಯೂ ಲಾಠಿಗಳಿಂದ ಸೆಕ್ಯೂರಿಟಿ ಗಾರ್ಡ್ಗಳು ಹಲ್ಲೆ ಮಾಡಲಾಗಿದ್ದು, ಕೂಲು ಮುರಿದರೂ ಸುಮ್ಮನಿರದ ಈ ವೇಳೆಕಣ್ಣೀರಿಡುತ್ತಾ ಬೇಡಿಕೊಂಡರು ಸೆಕ್ಯೂರಿಟಿ ಗಾರ್ಡ್ಗಳ ಮನಸ್ಸು ಕರಗಲಿಲ್ಲ. ಇಷ್ಟಕ್ಕೆ ಸುಮ್ಮನಾಗದೆ ನಂತರ ಸರಕಾರಿ ಆಸ್ಪತ್ರೆಯ ಕೊಠಡಿಯೊಳಗೆ ಕರೆದೊಯ್ದು ಮೃಗದ ವರ್ತನೆ ಸೆಕ್ಯೂರಿಟಿ ಗಾರ್ಡ್ಗಳು ಪ್ರದರ್ಶಿಸಿದ್ದಾರೆ. ಸೆಕ್ಯೂರಿಟಿ ಗಾರ್ಡ್ಗಳ ಜೊತೆ ಕರ್ತವ್ಯದಲ್ಲಿದ್ದ ಕಾನ್ಸ್ಟೇಬಲ್ನಿಂದಲೂ ಹಲ್ಲೆ ಮಾಡಿದ್ದು, ಕಣ್ಣೀರಿಡುತ್ತಾ ಕಾಲಿಗೆ ಬಿದ್ದು ಬೇಡಿಕೊಂಡರು ಬೆನ್ನು, ತಲೆ, ಕಾಲು, ಕೈಗಳಿಂದ ಮತ್ತು ಲಾಠಿಯಿಂದ ಹಲ್ಲೆ ಮಾಡಿದ್ದಾರೆ. ಇವರೆಲ್ಲಾ ಡಿಟೆಕ್ಟ್ವೆಲ್ ಸೆಕ್ಯೂರಿಟಿ ಏಜೆನ್ಸಿಗೆ ಸೇರಿದ ಸೆಕ್ಯೂರಿಟಿ ಗಾರ್ಡ್ಗಳು ಎಂದು ತಿಳಿದು ಬಂದಿದೆ. ಸಲ್ಪವಾದರೂ ಮಾನವಿಯ ಗುಣ ಇಲ್ಲದಿರುವುದಕ್ಕೆ ಈ ಸೆಕ್ಯೂರಿಟಿ ಗಾರ್ಡ್ಗಳ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶವ್ಯಕ್ತವಾಗಿದೆ. ಹೊಡೆಯುವ ದೃಶ್ಯ ಮೊಬೈಲಲ್ಲಿ ರೆಕಾರ್ಡ್ ಆಗಿ ಎಲ್ಲಡೆ ಹರಿದಾಡುತ್ತಿದೆ.