Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ನೆರೆ ಪರಿಹಾರದ ಕುರಿತು ಸಿದ್ದರಾಮಯ್ಯ ಮಾಡಿರುವ ಆರೋಪ ಸುಳ್ಳು: ಬಿಜೆಪಿ

ನೆರೆ ಪರಿಹಾರದ ಕುರಿತು ಸಿದ್ದರಾಮಯ್ಯ ಮಾಡಿರುವ ಆರೋಪ ಸುಳ್ಳು: ಬಿಜೆಪಿ

0

ಬೆಂಗಳೂರು: ನೆರೆ ಪರಿಹಾರದ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ರಾಜ್ಯ ಬಿಜೆಪಿ ಘಟಕ ಟ್ವೀಟ್‌ ಮಾಡಿದೆ.

ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವುದು ಹೊಸತೇನಲ್ಲ. ಅದನ್ನೇ ಮುಂದುವರಿಸಿಕೊಂಡು ಬಂದಿರುವ ಅವರು 30 ಸಾವಿರ ಕೋಟಿ ನೆರೆ ಪರಿಹಾರವನ್ನು ನಮ್ಮ ಸರ್ಕಾರವು ಕೇಂದ್ರದಿಂದ ಬಯಸಿತ್ತು ಎಂದಿದ್ದಾರೆ. ಅಸಲಿಗೆ ನಮ್ಮ ಸರ್ಕಾರ ಬಯಸಿದ್ದು 8281.8 ಕೋಟಿ ರೂ. ಇಂತಹ ಸುಳ್ಳುಗಳಿಗೆ ಜನರೇ ಉತ್ತರ ನೀಡಲಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಘಟಕ ವಾಗ್ದಾಳಿ ನಡೆಸಿದೆ.

ಬಿಜೆಪಿ ಪೋಸ್ಟರ್

ಸಿದ್ದರಾಮಯ್ಯ ಅವರು, ನಮ್ಮ ರಾಜ್ಯಕ್ಕೆ ಕೇಂದ್ರ ಸರ್ಕಾರ 1200 ಕೋಟಿ ರೂ. ನೆರೆ ಪರಿಹಾರ ನೀಡಿದೆ ಎಂದು ಸುಳ್ಳು ಆರೋಪಿಸಿದ್ದಾರೆ. ಆದರೆ ರಾಜ್ಯಕ್ಕೆ ಒಟ್ಟಾರೆ 5278 ಕೋಟಿ ರೂ. ನೆರೆ ಪರಿಹಾರ ದೊರಕಿದ್ದು, 3965.42 ಕೋಟಿ ರೂ ಮಂಜೂರಾತಿ ಬಗ್ಗೆ ಖುದ್ದು ಸಿದ್ದರಾಮಯ್ಯ ಅವರು ಪ್ರಕಟಿಸಿದ ಪಟ್ಟಿಯಲ್ಲೆ ಇರುವುದು ಅವರ ಸುಳ್ಳಿಗೆ ಹಿಡಿದ ಕೈಗನ್ನಡಿ ಎಂದು ಬಿಜೆಪಿ ದೂರಿದೆ.

You cannot copy content of this page

Exit mobile version