ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರು ಇಂದು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. 2002 ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಜೂನ್ 26 ರಂದು ತೀಸ್ತಾ ಸೆಟಲ್ವಾಡ್ ಬಂಧನವಾಗಿತ್ತು. ಅಂದಿನಿಂದ 2 ತಿಂಗಳು 8 ದಿನಗಳ ಕಾಲ ಸಬರಮತಿ ಕೇಂದ್ರ ಕಾರಾಗೃಹದಲ್ಲಿದ್ದರು.
2002 ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ತೀಸ್ತಾ ಸೆಟಲ್ವಾಡ್ ಅವರ ಮೇಲೆ ಸುಳ್ಳು ಸಾಕ್ಷಾಧಾರದ ಸೃಷ್ಟಿಸಿದ ಪ್ರಕರಣದಲ್ಲಿ ಬಂಧನವಾಗಿತ್ತು. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 3 ರ ಶುಕ್ರವಾರ ಅವರಿಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು.
ಸೆಷನ್ಸ್ ನ್ಯಾಯಾಲಯದ ಎರಡು ಷರತ್ತುಗಳ ಮೇಲೆ ತೀಸ್ತಾ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿದೆ. ನ್ಯಾಯಾಲಯವು 25,000 ರೂಪಾಯಿಗಳ ವಯುಕ್ತಿಕ ಬಾಂಡ್ ನೀಡುವ ಮತ್ತು ಅನುಮತಿ ಇಲ್ಲದೇ ದೇಶ ತೊರೆಯದಂತೆ ತೀಸ್ತಾ ಸೆಟಲ್ವಾಡ್ ಅವರಿಗೆ ಷರತ್ತು ವಿಧಿಸಿದೆ. ಸುಪ್ರೀಂಕೋರ್ಟಿನ ಜಾಮೀನು ಸಿಕ್ಕ ಒಂದು ದಿನದ ನಂತರ ಸಾಮಾಜಿಕ ಹೋರಾಟಗಾರ್ತಿ ಜೈಲಿನಿಂದ ಹೊರಬಂದಿದ್ದಾರೆ.