Home ರಾಜಕೀಯ ‘ಕ್ಷಮಿಸಿ, ತಪ್ಪು ಮಾಡಿದೆ’: ಕಾಂಗ್ರೆಸ್ ಗೆ ಮರುಸೇರ್ಪಡೆಯಾಗಿ ಕೈ ಮುಗಿದು ಕ್ಷಮೆ ಯಾಚಿಸಿದ ಬಂಡಾಯ ನಾಯಕ

‘ಕ್ಷಮಿಸಿ, ತಪ್ಪು ಮಾಡಿದೆ’: ಕಾಂಗ್ರೆಸ್ ಗೆ ಮರುಸೇರ್ಪಡೆಯಾಗಿ ಕೈ ಮುಗಿದು ಕ್ಷಮೆ ಯಾಚಿಸಿದ ಬಂಡಾಯ ನಾಯಕ

0

ದೆಹಲಿ ಕಾಂಗ್ರೆಸ್ ಉಪಾಧ್ಯಕ್ಷ ಅಲಿ ಮೆಹದಿ ಅವರು ಆಮ್ ಆದ್ಮಿ ಪಕ್ಷಕ್ಕೆ ಸೇರಿದ ಕೆಲವೇ ಗಂಟೆಗಳ ನಂತರ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರುಸೇರ್ಪಡೆಯಾಗಿದ್ದಾರೆ. ಜೊತೆಗೆ ಆಮ್ ಆದ್ಮಿ ಪಕ್ಷ ಸೇರ್ಪಡೆಯಾದ ತಪ್ಪಿಗೆ ಕ್ಷಮೆಯಾಚಿಸಿದ್ದಾರೆ.
ಇತ್ತೀಚೆಗೆ ನಡೆದ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಚುನಾಯಿತರಾದ ಸಬಿಲಾ ಬೇಗಂ ಮತ್ತು ನಾಜಿಯಾ ಖಾತೂನ್ ಅವರೊಂದಿಗೆ ಅಲಿ ಮೆಹದಿ AAP ಗೆ ಸೇರ್ಪಡೆಗೊಂಡಿದ್ದರು. ವಾರ್ಡ್ ಸಂಖ್ಯೆ 243 ರಿಂದ ಸಬಿಲಾ ಬೇಗಂ ಗೆದ್ದರೆ, ಮುಸ್ತಫಾಬಾದ್, ನಾಜಿಯಾ ಖಾತೂನ್ ವಾರ್ಡ್ ಸಂಖ್ಯೆ 245 ಮತ್ತು ಬ್ರಿಜ್ ಪುರಿಯಿಂದ ಗೆದ್ದಿದ್ದಾರೆ.

ಮೆಹದಿ ಅವರ ನಿರ್ಧಾರದ ವಿರುದ್ಧ ಮುಸ್ತಫಾಬಾದ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರ ಕಡೆಯಿಂದ ವ್ಯಾಪಕ ಟೀಕೆಗಳು ಹೊರಬಂದವು. ಆ ನಂತರ ಮೆಹೆದಿಯವರು ತನ್ನ ತಪ್ಪಿಗೆ ಟ್ವಿಟ್ ಮೂಲಕ ಕ್ಷಮೆ ಯಾಚಿಸಿದ್ದಾರೆ.

“ನನಗೆ ಯಾವುದೇ ಹುದ್ದೆ ಬೇಡ. ನಾನು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಕಾರ್ಯಕರ್ತನಾಗಿ ಉಳಿಯುತ್ತೇನೆ. ನಾನು ದೊಡ್ಡ ತಪ್ಪು ಮಾಡಿದ್ದೇನೆ. ನನ್ನ ತಪ್ಪಿಗೆ ನಾನು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಕ್ಷಮೆಯಾಚಿಸುತ್ತೇನೆ. ನಾನು ಕಾಂಗ್ರೆಸ್ ಪಕ್ಷದಲ್ಲಿ ಇದ್ದೆ, ಇದ್ದೇನೆ, ಮುಂದೆಯೂ ಇರುತ್ತೇನೆ. ಕಾಂಗ್ರೆಸ್ ನನ್ನ ಹೃದಯದಲ್ಲಿದೆ. ನನ್ನ ತಂದೆ 40 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ನಾನು ಮಾಡಿದ ತಪ್ಪಿಗೆ ಕ್ಷಮೆ ಯಾಚಿಸುತ್ತೇನೆ” ಎಂದು ಅಲಿ ಮೆಹದಿ ವಿಡಿಯೋದಲ್ಲಿ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಇಬ್ಬರು ಕೌನ್ಸಿಲರ್ ಗಳು ಮತ್ತು ಪಕ್ಷದ ನಾಯಕ ಅಲಿ ಮೆಹದಿಯವರ ಕಾಂಗ್ರೆಸ್ ಮರು ಸೇರ್ಪಡೆಗೆ ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲ್ ಚೌಧರಿ ಎಲ್ಲವನ್ನೂ ಕ್ಷಮಿಸುವುದಾಗಿ ಹೇಳಿದ್ದಾರೆ.

You cannot copy content of this page

Exit mobile version