Tuesday, June 10, 2025

ಸತ್ಯ | ನ್ಯಾಯ |ಧರ್ಮ

ಆಪರೇಷನ್ ಕಾಗರ್ ಹೆಸರಿನಲ್ಲಿ ನಡೆಸುತ್ತಿರುವ ಕಾನೂನು ಬಾಹಿರ ಹತ್ಯೆಗಳನ್ನು ನಿಲ್ಲಿಸಿ: ಎಡಪಕ್ಷಗಳಿಂದ ಪ್ರಧಾನಿಗೆ ಪತ್ರ

ದೆಹಲಿ: ಸಿಪಿಎಂ, ಸಿಪಿಐ, ಸಿಪಿಐ(ಎಂಎಲ್), ಆರ್‌ಎಸ್‌ಪಿ, ಎಐಎಫ್‌ಬಿ ಪ್ರಧಾನ ಕಾರ್ಯದರ್ಶಿಗಳಾದ ಎಂಎ.ಬೇಬಿ, ಡಿ.ರಾಜ, ದೀಪಂಕರ್ ಭಟ್ಟಾಚಾರ್ಯ, ಮನೋಜ್ ಭಟ್ಟಾಚಾರ್ಯ, ಜಿ.ದೇವರಾಜನ್ ಸೋಮವಾರ ಪ್ರಧಾನಿ ಮೋದಿಗೆ ಜಂಟಿಯಾಗಿ ಪತ್ರ ಬರೆದು, ಆಪರೇಷನ್ ಕಾಗರ್ ಹೆಸರಿನಲ್ಲಿ ಛತ್ತೀಸ್‌ಗಢ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿರುವ ನರಮೇಧವನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.

ಹಲವಾರು ಹಿರಿಯ ಮಾವೋವಾದಿ ನಾಯಕರು ಪ್ರಸ್ತುತ ಭದ್ರತಾ ಪಡೆಗಳ ವಶದಲ್ಲಿದ್ದಾರೆ ಮತ್ತು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕೆಂದು ಅವರು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.

”ಛತ್ತೀಸ್‌ಗಢ ಪ್ರದೇಶದಲ್ಲಿ ಭದ್ರತಾ ಪಡೆಗಳ ಸಂಪೂರ್ಣ ನಿಯೋಜನೆಯಿಂದಾಗಿ ಸಾಮಾನ್ಯ ಜೀವನವು ಅಸ್ತವ್ಯಸ್ತವಾಗುತ್ತಿದೆ ಎಂದು ಅಲ್ಲಿನ ಬುಡಕಟ್ಟು ಜನಾಂಗದವರು ದೂರುತ್ತಿದ್ದಾರೆ. ಸಮಸ್ಯೆಗಳನ್ನು ಪರಿಹರಿಸಲು ಮಾತುಕತೆ ನಡೆಸುವಂತೆ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಸಾಮಾಜಿಕ ಗುಂಪುಗಳು ಈಗಾಗಲೇ ಸರ್ಕಾರವನ್ನು ಕೋರಿವೆ.

ಇದನ್ನು ಮನಸ್ಸಿನಲ್ಲಿಟ್ಟುಕೊಂಡು, ಸರ್ಕಾರವು ಕಾನೂನುಬಾಹಿರ ಹತ್ಯೆಗಳು ಮತ್ತು ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸಬೇಕು” ಎಂದು ಪ್ರಧಾನಿಗೆ ಬರೆದ ಈ ಪತ್ರದಲ್ಲಿ ಒತ್ತಾಯಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page