ಬೇಲೂರು : ಕಸಾಪ ವತಿಯಿಂದ ಹಾಗು ಶಾಸಕ ಹೆಚ್ ಕೆ ಸುರೇಶ್ ರವರಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಗೆ ಸನ್ಮಾನ.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಬೇಲೂರು ಇವರ ವತಿಯಿಂದ 625ಕ್ಕೆ 624 ಅಂಕ ತೆಗೆದ ಹಂಸ ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆ ಈ ವಿದ್ಯಾರ್ಥಿ ಯನ್ನು ಅಭಿನಂದಿಸ ಲಾಯಿತು .
ರಾಜ್ಯಕ್ಕೆ ದ್ವಿತೀಯ ಹಾಗು ಜಿಲ್ಲೆ ತಾಲೂಕುಗಳಿಗೆ ಪ್ರಥಮ ಸ್ಥಾನವನ್ನು ತಂದುಕೊಟ್ಟ ಬೇಲೂರು ತಾಲೂಕಿನ ಹೆಮ್ಮೆಯ ವಿದ್ಯಾರ್ಥಿನಿ ಹಂಸ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಾ ನ ಮಂಜೇಗೌಡ ಈ ವಿದ್ಯಾರ್ಥಿಯನ್ನು ಸನ್ಮಾನಿಸಿದರು.
ನಂತರ ಮಾತನಾಡಿದ ಅವರು ಈ ವಿದ್ಯಾರ್ಥಿಯ ತಂದೆ ಶಾಂತೇ ಗೌಡ ತಾಯಿ ಜ್ಯೋತಿ ಇವರು ಆಲದಹಳ್ಳಿ ಗ್ರಾಮ ದವರಾಗಿದ್ದು ಇವರು ಅಪ್ಪಟ ಗ್ರಾಮೀಣ ಪ್ರತಿಭೆ ಈ ವಿದ್ಯಾರ್ಥಿ ಹೊರಹೊಮ್ಮಲು ತಂದೆ ತಾಯಿಗಳ ಗುರುಗಳ
ಪಾತ್ರ ಬಹಳ ಮುಖ್ಯವಾದದ್ದು .ಇವರ ಮುಂದಿನ ಶೈಕ್ಷಣಿಕ ಜೀವನ ಯಶಸ್ಸಾಗಲಿ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿ ದರು.
ನಂತರ ಶಾಸಕ ಹೆಚ್ ಕೆ ಸುರೇಶ್ ವಿದ್ಯಾರ್ಥಿಗೆ ಅಭಿನಂದಿಸಿ ಮಾತನಾಡಿ ಈ ವಿದ್ಯಾರ್ಥಿನಿಯ ಕೀರ್ತಿ ಭಾರತದಾದ್ಯಂತ ಹರಡಲಿ ಮುಂದಿನ ಭವಿಷ್ಯ ಉಜ್ವಲವಾಗಲಿ , ಇಂತಹ ವಿದ್ಯಾರ್ಥಿಗಳನ್ನು ಅಭಿನಂದಿಸಲು ನನಗೆ ಸಂತೋಷವಾಗುತ್ತದೆ ಇವರ ತಂದೆ ತಾಯಿಗಳ ಪರಿಶ್ರಮ ಬಹಳ ಮುಖ್ಯವಾದದ್ದು ಎಂದು ವಿದ್ಯಾರ್ಥಿನಿಯನ್ನು ಪ್ರಶಂಸಿದರು.
ಈ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಆರ್ ಎಸ್ ಮಹೇಶ್ ಉಪಾಧ್ಯಕ್ಷರಾದ ಹೆಚ್ಆರ್ ಚಂದ್ರು , ಗುರುರಾಜ್ ಸಂಘಟನಾ ಕಾರ್ಯದರ್ಶಿಗಳಾದ ಬೊಮ್ಮಡಿಹಳ್ಳಿ ಕುಮಾರಸ್ವಾಮಿ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಯಾದ ಮಾರುತಿ.ಭಾ,ಜ,ಪಾ ತಾಲೂಕು ಅಧ್ಯಕ್ಷ ಸಂಜು ಕೌರಿ,ಹಂಸ ಅವರ ತಂದೆ ಶಾಂತೇಗೌಡ ತಾಯಿ ಜ್ಯೋತಿ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.