Home ದೇಶ ತಮಿಳುನಾಡು ರಾಜ್ಯಪಾಲರಿಗೆ ಸು.ಕೋರ್ಟ್ ತಪರಾಕಿ ; ನಿರ್ಧಾರ ತಿಳಿಸಲು ಶುಕ್ರವಾರದ ವರೆಗೆ ಗಡುವು

ತಮಿಳುನಾಡು ರಾಜ್ಯಪಾಲರಿಗೆ ಸು.ಕೋರ್ಟ್ ತಪರಾಕಿ ; ನಿರ್ಧಾರ ತಿಳಿಸಲು ಶುಕ್ರವಾರದ ವರೆಗೆ ಗಡುವು

0

ಡಿಎಂಕೆ ಶಾಸಕ ಪೊನ್ಮುಡಿ ಅವರನ್ನು ಮತ್ತೊಮ್ಮೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ವಿಚಾರದಲ್ಲಿ ರಾಜ್ಯಪಾಲ ರವಿ ನಾಳೆಯೊಳಗೆ ನಿರ್ಧಾರ ಕೈಗೊಳ್ಳಬೇಕು; ನಾಳೆಯೊಳಗೆ ರಾಜ್ಯಪಾಲ ರವಿ ನಿರ್ಧಾರ ಕೈಗೊಂಡರೆ ಈಗಲೇ ಏನು ಕ್ರಮ ಕೈಗೊಳ್ಳುವುದಿಲ್ಲ. ಆದರೆ ಈ ವಿಚಾರದಲ್ಲಿ ರಾಜ್ಯಪಾಲರು ವ್ಯತಿರಿಕ್ತವಾಗಿ ನಡೆದುಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಕಟುವಾಗಿ ಎಚ್ಚರಿಸಿದೆ.

ಸಚಿವರಾಗಿದ್ದ ಡಿಎಂಕೆ ನಾಯಕ ಪೊನ್ಮುಡಿ ಅವರು ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ 3 ವರ್ಷ ಜೈಲು ಶಿಕ್ಷೆಗೆ ಆದೇಶ ಮಾಡಿತ್ತು. ಮದ್ರಾಸ್ ಹೈಕೋರ್ಟ್‌ನ ಈ ತೀರ್ಪಿನಿಂದ ಶಾಸಕ ಪೊನ್ಮುಡಿ ತಮ್ಮ ಸಚಿವ ಸ್ಥಾನವನ್ನು ಕಳೆದುಕೊಂಡಿದ್ದರು.

ಮದ್ರಾಸ್ ಹೈಕೋರ್ಟ್ ತೀರ್ಪಿನ ವಿರುದ್ಧ ಪೊನ್ಮುಡಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಇದನ್ನು ಆಲಿಸಿದ ಸುಪ್ರೀಂ ಕೋರ್ಟ್ ಪೊನ್ಮುಡಿಗೆ ವಿಧಿಸಿದ್ದ ಶಿಕ್ಷೆಯನ್ನು ಅಮಾನತುಗೊಳಿಸಿದೆ.

ಸುಪ್ರೀಂ ಕೋರ್ಟ್‌ನ ಈ ಆದೇಶದನ್ವಯ ಮುಖ್ಯಮಂತ್ರಿ ಸ್ಟಾಲಿನ್ ಪೊನ್ಮುಡಿ ಅವರನ್ನು ಮತ್ತೆ ಸಚಿವರನ್ನಾಗಿ ಮಾಡಲು ಶಿಫಾರಸು ಮಾಡಿದ್ದಾರೆ. ಆದರೆ ಪೊನ್ಮುಡಿ ಅವರಿಗೆ ಮತ್ತೊಮ್ಮೆ ಸಚಿವರಾಗಿ ಪ್ರಮಾಣ ವಚನ ಬೋಧಿಸಲು ರಾಜ್ಯಪಾಲ ಟಿ.ಎನ್.ರವಿ ನಿರಾಕರಿಸಿದರು. ಇದರ ವಿರುದ್ಧ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಪೀಠ ಇಂದು ರಾಜ್ಯಪಾಲ ರವಿ ಹಾಗೂ ಕೇಂದ್ರ ಸರ್ಕಾರವನ್ನು ತೀವ್ರವಾಗಿ ಖಂಡಿಸಿದೆ. ಹಾಗೂ ರಾಜ್ಯಪಾಲರಿಗೆ ಶುಕ್ರವಾರದ ವರೆಗೂ ಗಡುವು ನೀಡಿದೆ.

You cannot copy content of this page

Exit mobile version