Home ಕರ್ನಾಟಕ ಚುನಾವಣೆ - 2023 ಬಿಜೆಪಿ ಪರ ಸುದೀಪ್ ಪ್ರಚಾರ : ಗೆದ್ದವರಿಗಿಂತ ಸೋತವರೇ ಹೆಚ್ಚು!

ಬಿಜೆಪಿ ಪರ ಸುದೀಪ್ ಪ್ರಚಾರ : ಗೆದ್ದವರಿಗಿಂತ ಸೋತವರೇ ಹೆಚ್ಚು!

0

ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಪಕ್ಷಕ್ಕೆ ಪ್ರಚಂಡ ಬಹುಮತ ಲಭಿಸಿದೆ. ಬಿಜೆಪಿ ಪಕ್ಷ ಹೀನಾಯ ಸೋಲು ಕಂಡಿದೆ. ಚುನಾವಣಾ ಪ್ರಚಾರದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ವಾಲ್ಮೀಕಿ ಸಮುದಾಯದ ಕಿಚ್ಚ ಸುದೀಪ್ ಅವರು ಬಿಜೆಪಿ ಪರ ಪ್ರಚಾರ ಮಾಡಿದ್ದರೂ ಸಹ ಮತದಾರರು ಡೋಂಟ್ ಕೇರ್ ಎಂದು ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಇದು ಈಗ ಕಮಲ ಪಾಳಯಕ್ಕೆ ಮುಖಭಂಗ ಉಂಟಾಗಿದೆ.

ಬಿಜೆಪಿ ಪಕ್ಷಕ್ಕೆ ಅಭಿನಯ ಚಕ್ರವರ್ತಿ ಸುದೀಪ್ ಸ್ಟಾರ್ ಕ್ಯಾಂಪೇನರ್ ಆಗಿದ್ದರು. ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿಯ 50 ಕ್ಕೂ ಹೆಚ್ಚು ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದರು. ಪ್ರಚಾರ ಮಾಡಿದ ಅಭ್ಯರ್ಥಿಗಳ ಪೈಕಿ ಎಷ್ಟು ಜನ ಗೆದ್ದರು? ಎಷ್ಟು ಜನ ಸೋತರು? ಎಂದರೆ ಗೆಲ್ಲುವಿನ ಅಂಕಿಗಿಂತ ಸೋಲನ್ನು ಕಂಡ ಅಭ್ಯರ್ಥಿಗಳ ಪಟ್ಟಿಯೇ ಹೆಚ್ಚು ಎನ್ನಬಹುದು. ಅದರ ಪಟ್ಟಿ ಇಲ್ಲಿದೆ ನೋಡಿ….

ಗೆದ್ದ ಅಭ್ಯರ್ಥಿಗಳ ಪಟ್ಟಿ

ಶಿಕಾರಿಪುರ – ಬಿ ವೈ ವಿಜಯೇಂದ್ರ
ದೊಡ್ಡಬಳ್ಳಾಪುರ – ಧೀರಜ್ ಮುನಿರಾಜು
ರಾಜರಾಜೇಶ್ವರಿ ನಗರ – ಮುನಿರತ್ನ
ಲಿಂಗಸುಗೂರು – ಮಾನಪ್ಪ ದೇವಪ್ಪ ವಜ್ಜಲ್
ರಾಯಚೂರು – ಶಿವರಾಜ್ ಪಾಟೀಲ್
ಕುಷ್ಟಗಿ – ದೊಡ್ಡನಗೌಡ ಹನುಮಗೌಡ ಪಾಟೀಲ್
ಹುಬ್ಬಳ್ಳಿ ಧಾರವಾಡ ಸೆಂಟ್ರಲ್ – ಮಹೇಶ್ ಟೆಂಗಿನಕಾಯಿ
ಜಮಖಂಡಿ – ಜಗದೀಶ್ ಶಿವಯ್ಯ

ಸೋತ ಅಭ್ಯರ್ಥಿಗಳ ಪಟ್ಟಿ –


ಚಿಕ್ಕಬಳ್ಳಾಪುರ- ಸುಧಾಕರ್
ಶಿಡ್ಲಘಟ್ಟ- ಸೀಕಲ್ ರಾಮೇಗೌಡ
ಯಮಕನಮರಡಿ-ಬಸವರಾಜ
ಬಾಗಲಕೋಟೆ- ಚರಂತಿಮಠ
ಮಾನ್ವಿ- ಬಿವಿ ನಾಯಕ್
ವರುಣ- ಸೋಮಣ್ಣ
ಹಾವೇರಿ- ಗವಿಸಿದ್ದಪ್ಪ
ರಾಣೆಬೆನ್ನೂರು- ಅರುಣ್ ಕುಮಾರ್
ಕೂಡ್ಲಿಗಿ- ಲೋಕೇಶ್ ನಾಯಕ್
ಬೀಳಗಿ- ಮುರಗೇಶ ನಿರಾಣಿ
ಯಲಬುರ್ಗಾ- ಹಾಲಪ್ಪ ಆಚಾರ್
ದೇವನಹಳ್ಳಿ- ಪಿಳ್ಳ ಮುನಿಶಾಮಪ್ಪ
ಬದಾಮಿ- ಎಸ್ಟಿ ಪಾಟೀಲ್
ಕೊಪ್ಪಳ- ಕರಡಿ ಮಂಜುಳಾ
ಚಿತ್ರದುರ್ಗ- ತಿಪ್ಪಾರೆಡ್ಡಿ
ಮೊಳಕಾಲ್ಮೂರು-ತಿಪ್ಪೆಸ್ವಾಮಿ
ಸುರಪುರ-ರಾಜುಗೌಡ
ಬೆಳಗಾವಿ ಗ್ರಾಮಾಂತರ- ನಾಗೇಶ್ ಅಣ್ಣಪ್ಪ ಮಾನೋಲ್ಕರ್
ಕೊಳ್ಳೆಗಾಲ-ಎನ್ ಮಹೇಶ್
ಬ್ಯಾಡಗಿ- ಬಿವಿ ರುದ್ರಪ್ಪ
ಸಂಡೂರು-ಶಿಲ್ಪಾ ರಾಘವೇಂದ್ರ
ಯಾದಗಿರಿ- ವೆಂಕಟರೆಡ್ಡಿ ಮುಂಡಾಳ್
ರೋಣ- ಕಳಕಪ್ಪ ಬಂಡಿ
ದಾವಣಗೆರೆ ಉತ್ತರ- ಲೋಕಿಕೆರೆ ನಾಗರಾಜ್
ದಾವಣಗೆರೆ ದಕ್ಷಿಣ- ಅಜಯ್ ಕುಮಾರ್
ಕಲಘಟಗಿ- ಛಬ್ಬಿ ನಾಗರಾಜ್
ದೇವನಗೌಡ- ಶಿವನಗೌಡ
ಜಗಳೂರು-ಎಸ್ವಿ ರಾಮಚಂದ್ರ
ಕಿತ್ತೂರು- ಡಿ ಮಹಾಂತೇಶ್
ಹನೂರು- ಪ್ರೀತನ್
ಗದಗ- ಅನಿಲ್ ಪಿ
ಗುಂಡ್ಲುಪೇಟೆ- ನಿರಂಜನ್ ಕುಮಾರ್
ಶಹಾಪುರ- ಅಮೀನ್ ರೆಡ್ಡಿ ಯಳಗ
ಬಳ್ಳಾರಿ ಗ್ರಾಮೀಣ- ಶ್ರೀರಾಮುಲು
ಹೊನ್ನಾಳಿ- ರೇಣುಕಾಚಾರ್ಯ
ಚಾಮರಾಜನಗರ- ಸೋಮಣ್ಣ

You cannot copy content of this page

Exit mobile version